‘ಅನಿಲ ಚಿತಾಗಾರದಲ್ಲಿ 2 ಶವಗಳನ್ನು ಪ್ರಾಯೋಗಿಕವಾಗಿ ಸುಡಲಾಗಿದೆ. ನಗರಸಭೆ ಈ ಚಿತಾಗಾರದ ನಿರ್ವಹಣೆ ಮಾಡಲಿದ್ದು, ಪ್ರತಿ ಅಂತ್ಯಸಂಸ್ಕಾರಕ್ಕೆ ₹ 3,500 ದರ ನಿಗದಿಪಡಿಸಿದೆ. ಒಂದು ಶವ ದಹಿಸಲು ಒಂದು ಗ್ಯಾಸ್ ಸಿಲಿಂಡರ್ ಬೇಕಾಗುತ್ತದೆ. ಆರ್ಥಿಕ ಸ್ಥಿತಿವಂತರು ಅಂತ್ಯಕ್ರಿಯೆಗೆ ನಿಗದಿತ ಶುಲ್ಕ ಪಾವತಿಸಬೇಕು. ಬಡವರಿಗೆ ಶುಲ್ಕ ಪಾವತಿಸಲು ಸಾಧ್ಯವಾಗದಿದ್ದರೆ ನಗರಸಭೆಯಿಂದ ಅಥವಾ ಜನಪ್ರತಿನಿಧಿಗಳು ಶುಲ್ಕ ಭರಿಸುತ್ತಾರೆ’ ಎಂದು ಹೇಳಿದರು.