ಜಾಗ ಗುರುತಿಸುವಿಕೆಗಾಗಿ ಖಾಸಗಿ ಸಂಸ್ಥೆಯನ್ನು ನೇಮಕ ಮಾಡಲಾಗಿದೆ. ಜಾಗದ ಆರ್ಟಿಸಿ ಮತ್ತು ಎಂಆರ್ ಸಿದ್ಧಪಡಿಸಲಾಗುವುದು. ನಂತರ ರಾಜ್ಯ ಸರ್ಕಾರ ಯಾವ ರೀತಿಯ ಕೈಗಾರಿಕೆ ಸ್ಥಾಪನೆ ಮಾಡಬೇಕು ಎಂದು ನಿರ್ಧರಿಸುತ್ತದೆ. ಈ ಪ್ರದೇಶದ ಬಳಿಯಲ್ಲಿಯೇ ಚೆನ್ನೈ ಕಾರಿಡಾರ್ ರಸ್ತೆ ಹಾದು ಹೋಗುತ್ತದೆ. ನೆರೆಯ ಕುಪ್ಪಂಗೆ ಇದು ಹತ್ತಿರದ ಪ್ರದೇಶವಾಗಿದೆ. ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ 117 ಕಿ.ಮೀ ದೂರವಿದೆ. ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಇಂದು ಬೆಂಗಳೂರು ಸುತ್ತಮುತ್ತ ಜಾಗ ಸಿಗುತ್ತಿಲ್ಲ. ಭೂಮಿ ಬೆಲೆ, ಕೈಗಾರಿಕೆ ಸ್ಥಾಪನೆಗಿಂತ ಹೆಚ್ಚಿದೆ. ಹಾಗಾಗಿ ಎಲ್ಲ ರೀತಿಯ ಸೌಕರ್ಯವಿರುವ ಇಂತಹ ಪ್ರದೇಶಗಳಲ್ಲಿ ಕೈಗಾರಿಕೆಗೆ ಉತ್ತೇಜನ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು.