ಕೋಲಾರ:ಮಹಾನಾಯಕ ರಮೇಶ್ಕುಮಾರ್ ಎತ್ತಿನಹೊಳೆ ಯೋಜನೆಯಿಂದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗೆ 3 ವರ್ಷದಲ್ಲಿ ನೀರು ಹರಿಸುತ್ತೀನಿ ಎಂದಿದ್ದರು. ಆದರೆ, ಈಗ ಈ ಯೋಜನೆ ಏನಾಗಿದೆ ಎಂಬುದು ತಿಳಿದಿದೆಯೇ? ಎತ್ತಿನಹೊಳೆ ದುಡ್ಡು ಹೊಡೆಯುವ ಯೋಜನೆಯಾಗಿದೆ. ಈ ಯೋಜನೆಗೆ 50 ಸಾವಿರ ಕೋಟಿ ಖರ್ಚು ಮಾಡಿದರೂ ಅವಿಭಜಿತ ಜಿಲ್ಲೆಗೆ ನೀರು ತರಲು ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.