<p><strong>ಬಂಗಾರಪೇಟೆ</strong>: ಸಾಲ ಪಡೆದ ಬ್ಯಾಂಕ್ ಸಿಬ್ಬಂದಿ ಕಾಟ ತಾಳಲಾರದೆ ಮನನೊಂದ ದಂಪತಿ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗ ಮನವಿ ಮಾಡಿದೆ.</p>.<p>ಬಂಗಾರಪೇಟೆಯ ಶ್ರೀನಗರದ ಮಾಲತಿ ಮತ್ತು ಮಂಜುನಾಥ ದಂಪತಿ 2015ರಲ್ಲಿ ಮನೆ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ನಿಂದ ₹12.50 ಲಕ್ಷ ಸಾಲ ಪಡೆದಿದ್ದರು.</p>.<p>ಸಾಲ ಮರು ಪಾವತಿ ಸಾಧ್ಯವಾಗದ ಕಾರಣ ಬ್ಯಾಂಕ್ ಅಧಿಕಾರಿಗಳು 2018ರಲ್ಲಿ ಬೆಂಗಳೂರಿನ ಡಿಆರ್ಟಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಬ್ಯಾಂಕ್ ಅಧಿಕಾರಿಗಳು 2025ರಲ್ಲಿ ಕೋಲಾರದ ಸಿಜೆಎಂ ಕೋರ್ಟ್ನಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದರು.15 ದಿನದೊಳಗೆ ಮನೆ ಖಾಲಿ ಮಾಡುವಂತೆ ಮನೆಗೆ ನೋಟಿಸ್ ಅಂಟಿಸಿದ್ದರು.</p>.<p>ಸಾಲ ಪಡೆದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್, ಬ್ಯಾಂಕಿಗೆ ₹10 ಲಕ್ಷ ಪಾವತಿಸುವಂತೆ ಸೂಚನೆ ನೀಡಿತ್ತು. ₹6 ಲಕ್ಷ ಮರು ಪಾವತಿಸಿದ ದಂಪತಿ ಉಳಿದ ಹಣ ಪಾವತಿಗೆ ಡಿರ್ಟಿ ಕೋರ್ಟ್ನಲ್ಲಿ ಕಾಲಾವಕಾಶ ಕೋರಿದ್ದರು.</p>.<p>ಬ್ಯಾಂಕ್ ಸಿಬ್ಬಂದಿ ಆಗಸ್ಟ್ ತಿಂಗಳಲ್ಲಿ ಮತ್ತೆ ಮನೆ ಖಾಲಿ ಮಾಡುವಂತೆ ಮನೆ ಮುಂದೆ ನೋಟಿಸ್ ಅಂಟಿಸಿದ್ದರು. ಹೈಕೋರ್ಟ್ ಆದೇಶದಂತೆ ಇನ್ನೂ ₹4 ಲಕ್ಷ ಪಾವತಿಸಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಇದಾದ 15 ದಿನಗಳಲ್ಲಿ ಮನೆ ಮಾಲೀಕರನ್ನು ಹೊರ ಹಾಕಿ ಮನೆಯನ್ನು ವಶಕ್ಕೆ ಪಡೆದಿದ್ದರು.</p>.<p>ನಂತರ ಮೂರು ದಿನಗಳಲ್ಲಿಮನೆ ಮಾಲೀಕರು ಬ್ಯಾಂಕಿಗೆ ₹6.53 ಲಕ್ಷ ಪಾವತಿಸಿ ಮನೆ ಬೀಗ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇನ್ನೂ ನೀವು ₹12.63 ಲಕ್ಷ ಪಾವತಿಸಬೇಕೆಂದು ಬ್ಯಾಂಕ್ ಅಧಿಕಾರಿಗಳು ಹಿಂಬರಹ ಕೊಟ್ಟು ಮನೆ ಬೀಗ ನೀಡಿರಲಿಲ್ಲ. ಹಾಗಾಗಿ ಮನನೊಂದ ಮಾಲತಿ ಹಾಗೂ ಮಂಜುನಾಥ್ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ</strong>: ಸಾಲ ಪಡೆದ ಬ್ಯಾಂಕ್ ಸಿಬ್ಬಂದಿ ಕಾಟ ತಾಳಲಾರದೆ ಮನನೊಂದ ದಂಪತಿ ದಯಾಮರಣ ಕೋರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗ ಮನವಿ ಮಾಡಿದೆ.</p>.<p>ಬಂಗಾರಪೇಟೆಯ ಶ್ರೀನಗರದ ಮಾಲತಿ ಮತ್ತು ಮಂಜುನಾಥ ದಂಪತಿ 2015ರಲ್ಲಿ ಮನೆ ನಿರ್ಮಾಣಕ್ಕೆ ಕರ್ನಾಟಕ ಬ್ಯಾಂಕ್ನಿಂದ ₹12.50 ಲಕ್ಷ ಸಾಲ ಪಡೆದಿದ್ದರು.</p>.<p>ಸಾಲ ಮರು ಪಾವತಿ ಸಾಧ್ಯವಾಗದ ಕಾರಣ ಬ್ಯಾಂಕ್ ಅಧಿಕಾರಿಗಳು 2018ರಲ್ಲಿ ಬೆಂಗಳೂರಿನ ಡಿಆರ್ಟಿ ಕೋರ್ಟ್ನಲ್ಲಿ ದಾವೆ ಹೂಡಿದ್ದರು. ಈ ಪ್ರಕರಣ ವಿಚಾರಣೆ ಹಂತದಲ್ಲಿ ಇರುವಾಗಲೇ ಬ್ಯಾಂಕ್ ಅಧಿಕಾರಿಗಳು 2025ರಲ್ಲಿ ಕೋಲಾರದ ಸಿಜೆಎಂ ಕೋರ್ಟ್ನಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದರು.15 ದಿನದೊಳಗೆ ಮನೆ ಖಾಲಿ ಮಾಡುವಂತೆ ಮನೆಗೆ ನೋಟಿಸ್ ಅಂಟಿಸಿದ್ದರು.</p>.<p>ಸಾಲ ಪಡೆದ ದಂಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಆಗ ಹೈಕೋರ್ಟ್, ಬ್ಯಾಂಕಿಗೆ ₹10 ಲಕ್ಷ ಪಾವತಿಸುವಂತೆ ಸೂಚನೆ ನೀಡಿತ್ತು. ₹6 ಲಕ್ಷ ಮರು ಪಾವತಿಸಿದ ದಂಪತಿ ಉಳಿದ ಹಣ ಪಾವತಿಗೆ ಡಿರ್ಟಿ ಕೋರ್ಟ್ನಲ್ಲಿ ಕಾಲಾವಕಾಶ ಕೋರಿದ್ದರು.</p>.<p>ಬ್ಯಾಂಕ್ ಸಿಬ್ಬಂದಿ ಆಗಸ್ಟ್ ತಿಂಗಳಲ್ಲಿ ಮತ್ತೆ ಮನೆ ಖಾಲಿ ಮಾಡುವಂತೆ ಮನೆ ಮುಂದೆ ನೋಟಿಸ್ ಅಂಟಿಸಿದ್ದರು. ಹೈಕೋರ್ಟ್ ಆದೇಶದಂತೆ ಇನ್ನೂ ₹4 ಲಕ್ಷ ಪಾವತಿಸಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಇದಾದ 15 ದಿನಗಳಲ್ಲಿ ಮನೆ ಮಾಲೀಕರನ್ನು ಹೊರ ಹಾಕಿ ಮನೆಯನ್ನು ವಶಕ್ಕೆ ಪಡೆದಿದ್ದರು.</p>.<p>ನಂತರ ಮೂರು ದಿನಗಳಲ್ಲಿಮನೆ ಮಾಲೀಕರು ಬ್ಯಾಂಕಿಗೆ ₹6.53 ಲಕ್ಷ ಪಾವತಿಸಿ ಮನೆ ಬೀಗ ನೀಡುವಂತೆ ಮನವಿ ಮಾಡಿದ್ದರು. ಆದರೆ, ಇನ್ನೂ ನೀವು ₹12.63 ಲಕ್ಷ ಪಾವತಿಸಬೇಕೆಂದು ಬ್ಯಾಂಕ್ ಅಧಿಕಾರಿಗಳು ಹಿಂಬರಹ ಕೊಟ್ಟು ಮನೆ ಬೀಗ ನೀಡಿರಲಿಲ್ಲ. ಹಾಗಾಗಿ ಮನನೊಂದ ಮಾಲತಿ ಹಾಗೂ ಮಂಜುನಾಥ್ ಕುಟುಂಬ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>