<p>ಮುಳಬಾಗಿಲು: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬುಧವಾರ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಮುಟ್ಟಿದ್ದು, ತಾಲ್ಲೂಕಿನ ಜನತೆ ಬಿಸಿಲು ಹಾಗೂ ಬಿಸಿಲಿನ ಗಾಳಿಗೆ ಬಸವಳಿದಿದ್ದಾರೆ.</p>.<p>ತಾಲ್ಲೂಕಿನಲ್ಲಿ ಇದುವರೆಗೂ ಬಿಸಿಲಿನ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿಯೇ ಇರಲಿಲ್ಲ. ಆದರೆ, ಈಚೆಗೆ ಸುಮಾರು ಒಂದು ತಿಂಗಳಿನಿಂದ 36 ಡಿಗ್ರಿ ಸೆಲ್ಸಿಯಸ್ನಿಂದ 38 ಡಿಗ್ರಿ ಸೆಲ್ಸಿಯಸ್ವರೆಗೂ ಇತ್ತು. ಬುಧವಾರ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದ್ದು, ಬಿಸಿ ಗಾಳಿಗೆ ಜನ ತತ್ತರಿಸಿದ್ದಾರೆ.</p>.<p>ಸಾಮಾನ್ಯವಾಗಿ ತಾಲ್ಲೂಕಿನ ರೈತರು ಎಂತಹ ಬಿಸಿಲಿದ್ದರೂ ತೋಟದಲ್ಲಿ ದುಡಿಯುತ್ತಲೇ ಇದ್ದರು. ಆದರೆ, ಬುಧವಾರ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮರಗಳ ಬಳಿ ಆಶ್ರಯ ಪಡೆದರು. </p>.<p>ಬೆಳಿಗ್ಗೆ 10 ಗಂಟೆಗೆ 34 ಡಿಗ್ರಿ ಸೆಲ್ಸಿಯಸ್ನಿದ್ದ ಬಿಸಿಲು ಮಧ್ಯಾಹ್ನ 12ಕ್ಕೆ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಇದರಿಂದ ಜನ ತಣ್ಣೀರು, ತಂಪು ಪಾನೀಯಗಳು, ಎಳನೀರು, ಕಲ್ಲಂಗಡಿ, ಕಬ್ಬಿನ ರಸ, ಮಜ್ಜಿಗೆ ಮತ್ತಿತರರ ಮೊರೆ ಹೋಗಿದ್ದು ಕಂಡು ಬಂದಿತು.</p>.<p>ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸದೆ ರಸ್ತೆಯುದ್ದಕ್ಕೂ ಮರಗಳ ಕೆಳಗೆ ನಿಲ್ಲಿಸಿಕೊಂಡಿದ್ದರೆ, ಮತ್ತೆ ಕೆಲವರು ತಲೆಗಳ ಮೇಲೆ ಟವಲ್, ಟೋಪಿ ಹಾಗೂ ತಣ್ಣೀರಿನಲ್ಲಿ ಒದ್ದೆ ಮಾಡಿದ ಬಿಳಿ ಬಟ್ಟೆ ಹಾಕಿಕೊಂಡು ಸಾಗುತ್ತಿದ್ದರು.</p>.<p>ಇನ್ನು ಯುವಕರು ಹಾಗೂ ಬಾಲಕರು ಕೆರೆ ಹಾಗೂ ಬಾವಿಗಳಲ್ಲಿ ಈಜಾಡುತ್ತಿದ್ದರೆ, ಇನ್ನೂ ಕೆಲವರು ತಂಪು ಪಾನೀಯ ಅಂಗಡಿಗಳ ಮುಂದೆ ಜನ ಜಮಾಯಿಸಿದ್ದರು. ಕೆಲವರು ಬೀಸಣಿಕೆಯಲ್ಲಿ ಗಾಳಿ ಬೀಸಿಕೊಂಡರೆ, ಇನ್ನೂ ಕೆಲವರು ಮರಗಳ ಕೆಳಗೆ ಕುಳಿತು ವಿಶ್ರಾಂತಿ ಮಾಡುತ್ತಿದ್ದರು.</p>.<p>ತಾಲ್ಲೂಕಿನ ನಂಗಲಿ, ಹೆಬ್ಬಣಿ, ಕಾಂತರಾಜ ವೃತ್ತ, ಆವಣಿ, ಬೈರಕೂರು ಮತ್ತಿತರರ ಕಡೆಗಳಲ್ಲಿ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇನ್ನೂ ಐದು ದಿನ ಬಿಸಿಲು ಹೀಗೆ ಇರುತ್ತಿದೆ ಎಂಬ ಮಾಹಿತಿ ಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಿಲು: ತಾಲ್ಲೂಕಿನ ಕೆಲವು ಕಡೆಗಳಲ್ಲಿ ಬುಧವಾರ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ ಮುಟ್ಟಿದ್ದು, ತಾಲ್ಲೂಕಿನ ಜನತೆ ಬಿಸಿಲು ಹಾಗೂ ಬಿಸಿಲಿನ ಗಾಳಿಗೆ ಬಸವಳಿದಿದ್ದಾರೆ.</p>.<p>ತಾಲ್ಲೂಕಿನಲ್ಲಿ ಇದುವರೆಗೂ ಬಿಸಿಲಿನ ತಾಪಮಾನ ಗರಿಷ್ಠ ಮಟ್ಟಕ್ಕೆ ತಲುಪಿಯೇ ಇರಲಿಲ್ಲ. ಆದರೆ, ಈಚೆಗೆ ಸುಮಾರು ಒಂದು ತಿಂಗಳಿನಿಂದ 36 ಡಿಗ್ರಿ ಸೆಲ್ಸಿಯಸ್ನಿಂದ 38 ಡಿಗ್ರಿ ಸೆಲ್ಸಿಯಸ್ವರೆಗೂ ಇತ್ತು. ಬುಧವಾರ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದ್ದು, ಬಿಸಿ ಗಾಳಿಗೆ ಜನ ತತ್ತರಿಸಿದ್ದಾರೆ.</p>.<p>ಸಾಮಾನ್ಯವಾಗಿ ತಾಲ್ಲೂಕಿನ ರೈತರು ಎಂತಹ ಬಿಸಿಲಿದ್ದರೂ ತೋಟದಲ್ಲಿ ದುಡಿಯುತ್ತಲೇ ಇದ್ದರು. ಆದರೆ, ಬುಧವಾರ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮರಗಳ ಬಳಿ ಆಶ್ರಯ ಪಡೆದರು. </p>.<p>ಬೆಳಿಗ್ಗೆ 10 ಗಂಟೆಗೆ 34 ಡಿಗ್ರಿ ಸೆಲ್ಸಿಯಸ್ನಿದ್ದ ಬಿಸಿಲು ಮಧ್ಯಾಹ್ನ 12ಕ್ಕೆ ಏಕಾಏಕಿ 40 ಡಿಗ್ರಿ ಸೆಲ್ಸಿಯಸ್ಗೆ ಏರಿಕೆಯಾಗಿದೆ. ಇದರಿಂದ ಜನ ತಣ್ಣೀರು, ತಂಪು ಪಾನೀಯಗಳು, ಎಳನೀರು, ಕಲ್ಲಂಗಡಿ, ಕಬ್ಬಿನ ರಸ, ಮಜ್ಜಿಗೆ ಮತ್ತಿತರರ ಮೊರೆ ಹೋಗಿದ್ದು ಕಂಡು ಬಂದಿತು.</p>.<p>ರಾಷ್ಟ್ರೀಯ ಹೆದ್ದಾರಿ 75ರಲ್ಲಿ ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸದೆ ರಸ್ತೆಯುದ್ದಕ್ಕೂ ಮರಗಳ ಕೆಳಗೆ ನಿಲ್ಲಿಸಿಕೊಂಡಿದ್ದರೆ, ಮತ್ತೆ ಕೆಲವರು ತಲೆಗಳ ಮೇಲೆ ಟವಲ್, ಟೋಪಿ ಹಾಗೂ ತಣ್ಣೀರಿನಲ್ಲಿ ಒದ್ದೆ ಮಾಡಿದ ಬಿಳಿ ಬಟ್ಟೆ ಹಾಕಿಕೊಂಡು ಸಾಗುತ್ತಿದ್ದರು.</p>.<p>ಇನ್ನು ಯುವಕರು ಹಾಗೂ ಬಾಲಕರು ಕೆರೆ ಹಾಗೂ ಬಾವಿಗಳಲ್ಲಿ ಈಜಾಡುತ್ತಿದ್ದರೆ, ಇನ್ನೂ ಕೆಲವರು ತಂಪು ಪಾನೀಯ ಅಂಗಡಿಗಳ ಮುಂದೆ ಜನ ಜಮಾಯಿಸಿದ್ದರು. ಕೆಲವರು ಬೀಸಣಿಕೆಯಲ್ಲಿ ಗಾಳಿ ಬೀಸಿಕೊಂಡರೆ, ಇನ್ನೂ ಕೆಲವರು ಮರಗಳ ಕೆಳಗೆ ಕುಳಿತು ವಿಶ್ರಾಂತಿ ಮಾಡುತ್ತಿದ್ದರು.</p>.<p>ತಾಲ್ಲೂಕಿನ ನಂಗಲಿ, ಹೆಬ್ಬಣಿ, ಕಾಂತರಾಜ ವೃತ್ತ, ಆವಣಿ, ಬೈರಕೂರು ಮತ್ತಿತರರ ಕಡೆಗಳಲ್ಲಿ ಬಿಸಿಲಿನ ಪ್ರಮಾಣ 40 ಡಿಗ್ರಿ ಸೆಲ್ಸಿಯಸ್ಗೆ ತಲುಪಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತು. ಇನ್ನೂ ಐದು ದಿನ ಬಿಸಿಲು ಹೀಗೆ ಇರುತ್ತಿದೆ ಎಂಬ ಮಾಹಿತಿ ಬಂದಿದೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>