ಪಿಯುಸಿ ಓದಿರುವ ಕವಿರಾಜ್ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ. ಮೂಲತಃ ನೇಪಾಳದಆತ ತಮಿಳುನಾಡಿನ ಚೆನ್ನೈ ಹಾಗೂ ಹೊಸೂರು ಸುತ್ತಮುತ್ತ ಭೂ ವ್ಯವಹಾರ ಮಾಡುತ್ತಿದ್ದ. ಈತ ವರ್ತೂರು ಪ್ರಕಾಶ್ ಅವರಿಗೆ ಬೆಂಗಳೂರಿನಲ್ಲಿ ಪರಿಚಯವಾಗಿದ್ದ. ಕವಿರಾಜ್ ಹಣಕ್ಕಾಗಿ ಸಂಚು ರೂಪಿಸಿ 8 ಮಂದಿಯ ಗುಂಪು ಕಟ್ಟಿಕೊಂಡು ವರ್ತೂರು ಪ್ರಕಾಶ್ರನ್ನು ಅಪಹರಿಸಿದ್ದ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.