ಬೆಮಲ್ ನಗರದ ಬಳಿಯ ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ನಲ್ಲಿ ಗಂಡು ಕೃಷ್ಣಮೃಗವನ್ನು ಬೀದಿ ನಾಯಿಗಳು ಬೇಟೆಯಾಡಿ ಸಾಯಿಸಿವೆ. ಸಮೀಪದ ಬಡಮಾಕನಹಳ್ಳಿ ಕಾಡಿನಿಂದ ಜಿಂಕೆಗಳು ನೀರನ್ನು ಅರಿಸಿ ಬರುತ್ತಿದ್ದವು. ಚೆನ್ನೈ ಎಕ್ಸ್ಪ್ರೆಸ್ ಕಾರಿಡಾರ್ ರಸ್ತೆ ಮತ್ತು ಕೈಗಾರಿಕೆಗಳಿದ್ದ ಜಾಗ ಜಿಂಕೆಗಳ ಅವಾಸಸ್ಥಾನವಾಗಿದ್ದು, ಅಲ್ಲಿದ್ದ ಮರಗಳನ್ನು ಕಡಿಯಲಾಗುತ್ತಿದೆ. ಇದರಿಂದ ಜಿಂಕೆಗಳಿಗೆ ಮೇವು ಮತ್ತು ನೀರಿನ ಲಭ್ಯತೆ ಕಡಿಮೆಯಾಗಿದೆ. ಹಾಗಾಗಿ ಕಾಡಿನ ಜಿಂಕೆಗಳು ನಾಡಿಗೆ ಮೇವು ಅರಿಸಿ ಬರುತ್ತಿವೆ.