<p><strong>ಕೋಲಾರ: </strong>ಮುಳಬಾಗಿಲಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಜೆ. ಬಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಲೇಖಕ, ಅನುವಾದಕರು ಹಾಗೂ ವ್ಯಂಗ್ಯ ಚಿತ್ರಕಾರರೂ ಆಗಿರುವ ಬಾಲಕೃಷ್ಣ ಮುಳಬಾಗಿಲು ತಾಲ್ಲೂಕಿನ ಮಂಡಿಕಲ್ಲು ಗ್ರಾಮದವರು.</p>.<p>‘ಬಾಲಕೃಷ್ಣ ಅವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾಲಕೃಷ್ಣ ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿ, ಕೃಷಿ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ<br />ಪಡೆದಿದ್ದಾರೆ.</p>.<p>ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ, ಚರಿತ್ರೆ, ಕಲೆ, ಸೂಫಿ, ಝೆನ್ ತತ್ವದರ್ಶನದವರೆಗೆ ತಿರುಗಾಡಿ ಅಂತಿಮವಾಗಿ ಅವರ ಮನಸ್ಸು ನೆಲೆಗೊಳ್ಳುವುದು ಜೀವಕಾರುಣ್ಯದಲ್ಲೇ.</p>.<p class="Subhead"><u><strong>ಪ್ರಮುಖ ಕೃತಿಗಳು:</strong></u> ವ್ಯಂಗ್ಯಚಿತ್ರ–ಚರಿತ್ರೆ, ಕನಸೆಂಬ ಮಾಯಾಲೋಕ, ಮಿಥುನ–ಲೈಂಗಿಕ ಮನೋವಿಜ್ಞಾನದ ಬರಹಗಳು, ಮಾತಾಹರಿ, ಮಳೆಬಿಲ್ಲ ನೆರಳು–ವಿಜ್ಞಾನ ಲೇಖನ, ನೆನಪುಗಳಿಗೇಕೆ ಸಾವಿಲ್ಲ? (ಕಥಾ ಸಂಕಲನ), ಕೃಷಿ ವಿಜ್ಞಾನ ಸಾಹಿತ್ಯ ನಡೆದುಬಂದ ಹಾದಿ, ಮೌನ ವಸಂತ (ಮಹಿಳಾ ಕಥನಗಳು), ನಡೆದಷ್ಟು ದೂರ (ಪ್ರವಾಸ ಕಥನ).</p>.<p>ಮಳೆಬಿಲ್ಲ ನೆರಳು ಕೃತಿಗೆ 2012ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅತ್ಯುತ್ತಮ ವಿಜ್ಞಾನ ಪುಸ್ತಕ ಪ್ರಶಸ್ತಿ ಲಭಿಸಿದೆ.</p>.<p class="Subhead"><u><strong>ಅನುವಾದಿತ ಪ್ರಮುಖ ಕೃತಿಗಳು: </strong></u>ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಮತ್ತು ಸೂಫಿ ಕತೆಗಳು, ಬೊಕಾಷಿಯೋನ ರಸಿಕತೆಗಳು, ಮಾಂಟೋ ಕಥೆಗಳು, ಪುಟ್ಟ ರಾಜಕುಮಾರ, ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್.</p>.<p>ಬಾಲಕೃಷ್ಣ ರಚಿತ ವ್ಯಂಗ್ಯಚಿತ್ರಗಳು ‘ಪ್ರಜಾವಾಣಿ’, ‘ಸುಧಾ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಿಂದಲೂ ತಮ್ಮ ‘ಅಂತರಗಂಗೆ’ ಬ್ಲಾಗ್ನಲ್ಲಿ ನಿರಂತರವಾಗಿ ಬರಹ ಹಾಗೂ ವ್ಯಂಗ್ಯಚಿತ್ರ ಪ್ರಕಟಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ: </strong>ಮುಳಬಾಗಿಲಿನಲ್ಲಿ ಮುಂದಿನ ತಿಂಗಳು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ.ಜೆ. ಬಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.</p>.<p>ಲೇಖಕ, ಅನುವಾದಕರು ಹಾಗೂ ವ್ಯಂಗ್ಯ ಚಿತ್ರಕಾರರೂ ಆಗಿರುವ ಬಾಲಕೃಷ್ಣ ಮುಳಬಾಗಿಲು ತಾಲ್ಲೂಕಿನ ಮಂಡಿಕಲ್ಲು ಗ್ರಾಮದವರು.</p>.<p>‘ಬಾಲಕೃಷ್ಣ ಅವರನ್ನು ಪರಿಷತ್ತಿನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಪಾಲ್ಗೊಳ್ಳಲು ಒಪ್ಪಿಗೆ ನೀಡಿದ್ದಾರೆ’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಬಿ. ಗೋಪಾಲಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಬಾಲಕೃಷ್ಣ ಕೃಷಿ ವಿಜ್ಞಾನದಲ್ಲಿ ಸ್ನಾತಕ ಪದವಿ, ಕೃಷಿ ಸೂಕ್ಷ್ಮಜೀವಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಕನ್ನಡದ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಯನಕ್ಕಾಗಿ ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಪಿಎಚ್.ಡಿ ಪದವಿ<br />ಪಡೆದಿದ್ದಾರೆ.</p>.<p>ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ, ಚರಿತ್ರೆ, ಕಲೆ, ಸೂಫಿ, ಝೆನ್ ತತ್ವದರ್ಶನದವರೆಗೆ ತಿರುಗಾಡಿ ಅಂತಿಮವಾಗಿ ಅವರ ಮನಸ್ಸು ನೆಲೆಗೊಳ್ಳುವುದು ಜೀವಕಾರುಣ್ಯದಲ್ಲೇ.</p>.<p class="Subhead"><u><strong>ಪ್ರಮುಖ ಕೃತಿಗಳು:</strong></u> ವ್ಯಂಗ್ಯಚಿತ್ರ–ಚರಿತ್ರೆ, ಕನಸೆಂಬ ಮಾಯಾಲೋಕ, ಮಿಥುನ–ಲೈಂಗಿಕ ಮನೋವಿಜ್ಞಾನದ ಬರಹಗಳು, ಮಾತಾಹರಿ, ಮಳೆಬಿಲ್ಲ ನೆರಳು–ವಿಜ್ಞಾನ ಲೇಖನ, ನೆನಪುಗಳಿಗೇಕೆ ಸಾವಿಲ್ಲ? (ಕಥಾ ಸಂಕಲನ), ಕೃಷಿ ವಿಜ್ಞಾನ ಸಾಹಿತ್ಯ ನಡೆದುಬಂದ ಹಾದಿ, ಮೌನ ವಸಂತ (ಮಹಿಳಾ ಕಥನಗಳು), ನಡೆದಷ್ಟು ದೂರ (ಪ್ರವಾಸ ಕಥನ).</p>.<p>ಮಳೆಬಿಲ್ಲ ನೆರಳು ಕೃತಿಗೆ 2012ರ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಅತ್ಯುತ್ತಮ ವಿಜ್ಞಾನ ಪುಸ್ತಕ ಪ್ರಶಸ್ತಿ ಲಭಿಸಿದೆ.</p>.<p class="Subhead"><u><strong>ಅನುವಾದಿತ ಪ್ರಮುಖ ಕೃತಿಗಳು: </strong></u>ನೀನೆಂಬ ನಾನು- ಸೂಫಿ ಎಂಬ ಮಾನಸಿಕ ಅವಸ್ಥೆ ಮತ್ತು ಸೂಫಿ ಕತೆಗಳು, ಬೊಕಾಷಿಯೋನ ರಸಿಕತೆಗಳು, ಮಾಂಟೋ ಕಥೆಗಳು, ಪುಟ್ಟ ರಾಜಕುಮಾರ, ನಮ್ಮ ನಿಮ್ಮೊಳಗೊಬ್ಬ ನಸ್ರುದ್ದೀನ್.</p>.<p>ಬಾಲಕೃಷ್ಣ ರಚಿತ ವ್ಯಂಗ್ಯಚಿತ್ರಗಳು ‘ಪ್ರಜಾವಾಣಿ’, ‘ಸುಧಾ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. 2008ರಿಂದಲೂ ತಮ್ಮ ‘ಅಂತರಗಂಗೆ’ ಬ್ಲಾಗ್ನಲ್ಲಿ ನಿರಂತರವಾಗಿ ಬರಹ ಹಾಗೂ ವ್ಯಂಗ್ಯಚಿತ್ರ ಪ್ರಕಟಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>