<p>ಪ್ರಜಾವಾಣಿ ವಾರ್ತೆ</p>.<p>ಕೋಲಾರ: ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಏ.28 ರಂದು ಸಂಜೆ 6 ಗಂಟೆಗೆ ಧ್ವಜಾರೋಹಣದೊಂದಿಗೆ ಕರಗಮಹೋತ್ಸವ ಆರಂಭವಾಗಲಿದೆ. ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗ ನಡೆಯಲಿದೆ.</p>.<p>ಏ.29 ರಂದು ರಾತ್ರಿ 8 ಗಂಟೆಗೆ ಹಸಿ ಕರಗ ಮಹೋತ್ಸವ ನಡೆಯಲಿದ್ದು, 30 ರಂದು ಕರಗದ ಅತ್ತೆ ಮನೆ ಕಲ್ಯಾಣೋತ್ಸವ, ತವರು ಮನೆ ಸೇವೆ ನಡೆಯಲಿದೆ.</p>.<p>ಮೇ 1 ರಂದು ಗುರುವಾರ ಸಂಜೆ 6 ಗಂಟೆಗೆ ದೀಪೋತ್ಸವ ನಡೆಯಲಿದ್ದು, ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗಮಹೋತ್ಸವ ನಡೆಯಲಿದೆ. ಹೂವಿನ ಕರಗದ ದಿನ ಗ್ರಾಮದ ದೇವರುಗಳಾದ ಅಷ್ಟಮೂರ್ತಮ್ಮ ದೇವಿ, ದ್ರೌಪದಮ್ಮ, ಧರ್ಮರಾಯಸ್ವಾಮಿ, ವೇಣುಗೋಪಾಲಸ್ವಾಮಿ, ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆಯೂ ನಡೆಯಲಿದೆ.</p>.<p>ಮೇ 3 ರಂದು ಪೋತಲರಾಜ ಗಾವು, ಮೇ 4 ರಂದು ವಸಂತೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಕರಗ ಮಹೋತ್ಸವ ಕೊನೆಗೊಳ್ಳಲಿದೆ.</p>.<p>ಈ ಬಾರಿ ಕರಗವನ್ನು ಕಾಕಿನತ್ತ ಗ್ರಾಮದ ಬಾಲರಾಜ್ ಹೊರಲಿದ್ದು, ಭಾರತ ಪೂಜಾರಿಯಾಗಿ ಚಿಂತಮಾಕಲಹಳ್ಳಿಯ ಸಿ.ಎಂ.ವೆಂಕಟರವಣಪ್ಪ ಕಾರ್ಯ ನಿರ್ವಹಿಸುವರು, ಕುಲದ ಗೌಡರಾದ ಸಿ.ಎಂ.ನಾಗರಾಜ್, ಯಜಮಾನ್ ಸಿ.ವಿ.ಮುರುಗೇಶ್ ಇಡೀ ಕರಗ ಮಹೋತ್ಸವ ಉಸ್ತುವಾರಿ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಕೋಲಾರ: ತಾಲ್ಲೂಕಿನ ಚಿಟ್ನಹಳ್ಳಿ ಗ್ರಾಮದಲ್ಲಿ ಏ.28 ರಂದು ಸಂಜೆ 6 ಗಂಟೆಗೆ ಧ್ವಜಾರೋಹಣದೊಂದಿಗೆ ಕರಗಮಹೋತ್ಸವ ಆರಂಭವಾಗಲಿದೆ. ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗ ನಡೆಯಲಿದೆ.</p>.<p>ಏ.29 ರಂದು ರಾತ್ರಿ 8 ಗಂಟೆಗೆ ಹಸಿ ಕರಗ ಮಹೋತ್ಸವ ನಡೆಯಲಿದ್ದು, 30 ರಂದು ಕರಗದ ಅತ್ತೆ ಮನೆ ಕಲ್ಯಾಣೋತ್ಸವ, ತವರು ಮನೆ ಸೇವೆ ನಡೆಯಲಿದೆ.</p>.<p>ಮೇ 1 ರಂದು ಗುರುವಾರ ಸಂಜೆ 6 ಗಂಟೆಗೆ ದೀಪೋತ್ಸವ ನಡೆಯಲಿದ್ದು, ಮೇ 2 ರ ರಾತ್ರಿ 10 ಗಂಟೆಗೆ ಹೂವಿನ ಕರಗಮಹೋತ್ಸವ ನಡೆಯಲಿದೆ. ಹೂವಿನ ಕರಗದ ದಿನ ಗ್ರಾಮದ ದೇವರುಗಳಾದ ಅಷ್ಟಮೂರ್ತಮ್ಮ ದೇವಿ, ದ್ರೌಪದಮ್ಮ, ಧರ್ಮರಾಯಸ್ವಾಮಿ, ವೇಣುಗೋಪಾಲಸ್ವಾಮಿ, ರೇಣುಕಾ ಯಲ್ಲಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆಯೂ ನಡೆಯಲಿದೆ.</p>.<p>ಮೇ 3 ರಂದು ಪೋತಲರಾಜ ಗಾವು, ಮೇ 4 ರಂದು ವಸಂತೋತ್ಸವ ಮತ್ತು ಧ್ವಜಾವರೋಹಣದೊಂದಿಗೆ ಕರಗ ಮಹೋತ್ಸವ ಕೊನೆಗೊಳ್ಳಲಿದೆ.</p>.<p>ಈ ಬಾರಿ ಕರಗವನ್ನು ಕಾಕಿನತ್ತ ಗ್ರಾಮದ ಬಾಲರಾಜ್ ಹೊರಲಿದ್ದು, ಭಾರತ ಪೂಜಾರಿಯಾಗಿ ಚಿಂತಮಾಕಲಹಳ್ಳಿಯ ಸಿ.ಎಂ.ವೆಂಕಟರವಣಪ್ಪ ಕಾರ್ಯ ನಿರ್ವಹಿಸುವರು, ಕುಲದ ಗೌಡರಾದ ಸಿ.ಎಂ.ನಾಗರಾಜ್, ಯಜಮಾನ್ ಸಿ.ವಿ.ಮುರುಗೇಶ್ ಇಡೀ ಕರಗ ಮಹೋತ್ಸವ ಉಸ್ತುವಾರಿ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>