<p><strong>ಬಂಗಾರಪೇಟೆ (ಕೋಲಾರ):</strong> ಹಣಕ್ಕಾಗಿ ಪತಿಯು ಮಾರಾಟ ಮಾಡಿದ್ದ ಮಗುವನ್ನು ಮರಳಿ ನೀಡುವಂತೆ ಮಗುವಿನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ದಂಪತಿ ಸಮ್ಮತಿಯ ಮೇರೆಗೆ ಮಗುವನ್ನು ದತ್ತು ನೀಡಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದ್ದು, ಇಡೀ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. </p>.<p>‘ಸಾಲ ತೀರಿಸುವ ನೆಪದಲ್ಲಿ ಪತಿ ಎಸ್.ಎ.ಮುನಿರಾಜು ನನಗೆ ಗೊತ್ತಿಲ್ಲದೇ ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ದಾರೆ’ ಎಂದು ಪಟ್ಟಣದ ಕೆರೆಕೋಡಿ ವಾರ್ಡ್ನ ಕೆ.ಪವಿತ್ರಾ ಎಂಬ ಮಹಿಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗಿದ್ದರು. ಈ ಸಂಬಂಧ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ನಾಗರತ್ನಾ ಭಾನುವಾರ ಬಂಗಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ, ಮಗುವನ್ನು ದತ್ತು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ದತ್ತು ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ ಎಂದು ತಿಳಿದು ಬಂದಿದೆ.</p>.<p>ಮಗುವನ್ನು ದತ್ತು ನೀಡಿದ ದಂಪತಿ ಮತ್ತು ದತ್ತು ಪಡೆದ ದಂಪತಿ ಹಾಗೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದತ್ತು ಪಡೆದವರು ಮಗು ಸಮೇತ ‘ದತ್ತು ಸ್ವೀಕಾರ ಪತ್ರ’ದೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.</p>.<p>ದೂರಿನಲ್ಲಿ ಏನಿದೆ?: ಕೆರೆಕೋಡಿ ವಾರ್ಡ್ನ ಪವಿತ್ರಾ ಅವರ ಎರಡನೇ ಗಂಡು ಮಗುವನ್ನು ಆಕೆಯ ಪತಿ ಮುನಿರಾಜು ಹಾಗೂ ಅದೇ ವಾರ್ಡ್ ನಿವಾಸಿ ವಲ್ಲಿ ಎಂಬ ಮಹಿಳೆ ಸೇರಿ ಅಪರಿಚಿತರಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಂಡು ಮಗುವನ್ನು ತಾಯಿಗೆ ವಾಪಸ್ ಕೊಡಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು.</p>.<p>ಈ ಹಿನ್ನೆಲೆಯಲ್ಲಿ ಪೊಲೀಸರು ಪವಿತ್ರಾ ಅವರನ್ನು ಕರೆದು ತನಿಖೆಗೆ ಒಳಪಡಿಸಿದ್ದಾರೆ. ಆಗ ಅವರು ನಡೆದ ಘಟನೆ ವಿವರಿಸಿದ್ದಾರೆ.</p>.<p>ದತ್ತು ಸ್ವೀಕಾರ ಪತ್ರ: ಮುನಿರಾಜು ಹಾಗೂ ಪವಿತ್ರಾ ಅವರ ಮೂರು ತಿಂಗಳ ಮಗುವನ್ನು ತಾಲ್ಲೂಕಿನವರೇ ಆದ ಹೆನ್ರಿ ಜೋಸೆಫ್ ಹಾಗೂ ಎನ್.ಭುವನೇಶ್ವರಿ ಎಂಬುವರಿಗೆ ದತ್ತು ನೀಡಿರುವ ‘ದತ್ತು ಸ್ವೀಕಾರ ಪತ್ರ’ವನ್ನು ಬಂಗಾರಪೇಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2023ರ ಆಗಸ್ಟ್ 16ರಂದು ನೋಂದಾಯಿಸಲಾಗಿದೆ.</p>.<p>ಅದರಲ್ಲಿ ಮುನಿರಾಜು ಹಾಗೂ ಪವಿತ್ರಾ ಅವರ ಫೋಟೊ, ಹೆಬ್ಬೆಟ್ಟು ಗುರುತು ಹಾಗೂ ಸಹಿಯೂ ಇದೆ. ಸಾಕ್ಷಿಗಳ ಸಮೇತ ದತ್ತು ಪಡೆದವರ ವಿವರವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಂಗಾರಪೇಟೆ (ಕೋಲಾರ):</strong> ಹಣಕ್ಕಾಗಿ ಪತಿಯು ಮಾರಾಟ ಮಾಡಿದ್ದ ಮಗುವನ್ನು ಮರಳಿ ನೀಡುವಂತೆ ಮಗುವಿನ ತಾಯಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ದಂಪತಿ ಸಮ್ಮತಿಯ ಮೇರೆಗೆ ಮಗುವನ್ನು ದತ್ತು ನೀಡಿರುವ ವಿಷಯ ವಿಚಾರಣೆ ವೇಳೆ ಬಹಿರಂಗವಾಗಿದ್ದು, ಇಡೀ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. </p>.<p>‘ಸಾಲ ತೀರಿಸುವ ನೆಪದಲ್ಲಿ ಪತಿ ಎಸ್.ಎ.ಮುನಿರಾಜು ನನಗೆ ಗೊತ್ತಿಲ್ಲದೇ ಮಗುವನ್ನು ಹಣಕ್ಕೆ ಮಾರಾಟ ಮಾಡಿದ್ದಾರೆ’ ಎಂದು ಪಟ್ಟಣದ ಕೆರೆಕೋಡಿ ವಾರ್ಡ್ನ ಕೆ.ಪವಿತ್ರಾ ಎಂಬ ಮಹಿಳೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೊರೆ ಹೋಗಿದ್ದರು. ಈ ಸಂಬಂಧ ಮಕ್ಕಳ ರಕ್ಷಣಾ ಘಟಕ ಅಧಿಕಾರಿ ನಾಗರತ್ನಾ ಭಾನುವಾರ ಬಂಗಾರಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದರು.</p>.<p>ಪೊಲೀಸರು ಮಹಿಳೆಯನ್ನು ವಿಚಾರಣೆಗೆ ಒಳಪಡಿಸಿದಾಗ ಪರಸ್ಪರ ಒಪ್ಪಿಗೆ ಮೇರೆಗೆ ದಂಪತಿ, ಮಗುವನ್ನು ದತ್ತು ನೀಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆದರೆ, ದತ್ತು ಪ್ರಕ್ರಿಯೆ ಕಾನೂನು ಪ್ರಕಾರ ನಡೆದಿಲ್ಲ ಎಂದು ತಿಳಿದು ಬಂದಿದೆ.</p>.<p>ಮಗುವನ್ನು ದತ್ತು ನೀಡಿದ ದಂಪತಿ ಮತ್ತು ದತ್ತು ಪಡೆದ ದಂಪತಿ ಹಾಗೂ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ದತ್ತು ಪಡೆದವರು ಮಗು ಸಮೇತ ‘ದತ್ತು ಸ್ವೀಕಾರ ಪತ್ರ’ದೊಂದಿಗೆ ವಿಚಾರಣೆಗೆ ಹಾಜರಾಗಿದ್ದಾರೆ.</p>.<p>ದೂರಿನಲ್ಲಿ ಏನಿದೆ?: ಕೆರೆಕೋಡಿ ವಾರ್ಡ್ನ ಪವಿತ್ರಾ ಅವರ ಎರಡನೇ ಗಂಡು ಮಗುವನ್ನು ಆಕೆಯ ಪತಿ ಮುನಿರಾಜು ಹಾಗೂ ಅದೇ ವಾರ್ಡ್ ನಿವಾಸಿ ವಲ್ಲಿ ಎಂಬ ಮಹಿಳೆ ಸೇರಿ ಅಪರಿಚಿತರಿಗೆ ಮಾರಾಟ ಮಾಡಿದ್ದಾರೆ. ಈ ಸಂಬಂಧ ಕಾನೂನು ಕ್ರಮ ಕೈಗೊಂಡು ಮಗುವನ್ನು ತಾಯಿಗೆ ವಾಪಸ್ ಕೊಡಿಸಿ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ, ಪೊಲೀಸರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ದರು.</p>.<p>ಈ ಹಿನ್ನೆಲೆಯಲ್ಲಿ ಪೊಲೀಸರು ಪವಿತ್ರಾ ಅವರನ್ನು ಕರೆದು ತನಿಖೆಗೆ ಒಳಪಡಿಸಿದ್ದಾರೆ. ಆಗ ಅವರು ನಡೆದ ಘಟನೆ ವಿವರಿಸಿದ್ದಾರೆ.</p>.<p>ದತ್ತು ಸ್ವೀಕಾರ ಪತ್ರ: ಮುನಿರಾಜು ಹಾಗೂ ಪವಿತ್ರಾ ಅವರ ಮೂರು ತಿಂಗಳ ಮಗುವನ್ನು ತಾಲ್ಲೂಕಿನವರೇ ಆದ ಹೆನ್ರಿ ಜೋಸೆಫ್ ಹಾಗೂ ಎನ್.ಭುವನೇಶ್ವರಿ ಎಂಬುವರಿಗೆ ದತ್ತು ನೀಡಿರುವ ‘ದತ್ತು ಸ್ವೀಕಾರ ಪತ್ರ’ವನ್ನು ಬಂಗಾರಪೇಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ 2023ರ ಆಗಸ್ಟ್ 16ರಂದು ನೋಂದಾಯಿಸಲಾಗಿದೆ.</p>.<p>ಅದರಲ್ಲಿ ಮುನಿರಾಜು ಹಾಗೂ ಪವಿತ್ರಾ ಅವರ ಫೋಟೊ, ಹೆಬ್ಬೆಟ್ಟು ಗುರುತು ಹಾಗೂ ಸಹಿಯೂ ಇದೆ. ಸಾಕ್ಷಿಗಳ ಸಮೇತ ದತ್ತು ಪಡೆದವರ ವಿವರವೂ ಇದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>