<p><strong>ವೇಮಗಲ್:</strong> ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಮಾದರಿ ಆಡಳಿತಕ್ಕಾಗಿ ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘ ಪ್ರತಿಷ್ಠಿತ ‘ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿಗೆ ಭಾಜನವಾಗಿದೆ.</p>.<p>ನಿರ್ದೇಶಕ ಚಂಜೆಮಲೆ ಬಿ.ರಮೇಶ್ ಮಾತನಾಡಿ, ವೇಮಗಲ್ ಹಾಲು ಉತ್ಪಾದಕ ಸಹಕಾರ ಸಂಘವು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ ಎಂದರು. </p>.<p>ಸಂಘದ ಅಧ್ಯಕ್ಷ ವಿ.ಎಂ ಶ್ರೀನಿವಾಸ್, ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕಾಗಿದೆ ಎಂದರು. </p>.<p>ಸಂಘದ ವಿಸ್ತರಣಾಧಿಕಾರಿ ಸಮೀರ್ ಪಾಷ ಮಾತನಾಡಿ, ಸಂಘವು ಒಕ್ಕೂಟದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಾರದರ್ಶಕವಾಗಿ ರೈತರಿಗೆ ನೀಡುತ್ತಿದೆ. ಹಾಗಾಗಿ ಉತ್ತಮ ಸಂಘ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದರು. </p>.<p>ಸಂಘದ ಮುಖ್ಯ ನಿರ್ವಾಹಕ ಸಂಜಯ್ ಕುಮಾರ್, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯ ಒದಗಿಸಲು ಸಂಘವು ಶ್ರಮಿಸಲಿದೆ ಎಂದರು.</p>.<p>ನಿರ್ದೇಶಕರಾದ ವಿ.ಎನ್ ವೆಂಕಟಾಚಲ, ರಾಜಗೋಪಾಲಯ್ಯ, ಅಶ್ವತಪ್ಪ, ತವಕಲ ಸಾಬ್, ಹರೀಶ್, ವಿಜಿ, ಶ್ರೀನಿವಾಸ್, ಪ್ರಕಾಶ್ ವಿ, ಮುರುಳಿ. ಕೆ, ನಾಗವೇಣಿ ಎಂ, ಸಾವಿತ್ರಮ್ಮ, ಸಂಜಯ್ ಕುಮಾರ್, ಕಾಂತರಾಜು, ಲಕ್ಷ್ಮೀದೇವಿ ,ನಾಗೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೇಮಗಲ್:</strong> ಹೈನುಗಾರಿಕೆ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮತ್ತು ಮಾದರಿ ಆಡಳಿತಕ್ಕಾಗಿ ವೇಮಗಲ್ ಹಾಲು ಉತ್ಪಾದಕರ ಸಹಕಾರ ಸಂಘ ಪ್ರತಿಷ್ಠಿತ ‘ಜಿಲ್ಲಾ ಮಟ್ಟದ ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿಗೆ ಭಾಜನವಾಗಿದೆ.</p>.<p>ನಿರ್ದೇಶಕ ಚಂಜೆಮಲೆ ಬಿ.ರಮೇಶ್ ಮಾತನಾಡಿ, ವೇಮಗಲ್ ಹಾಲು ಉತ್ಪಾದಕ ಸಹಕಾರ ಸಂಘವು ಜಿಲ್ಲೆಗೆ ಪ್ರಥಮ ಸ್ಥಾನ ಬಂದಿರುವುದು ಸಂತಸ ತಂದಿದೆ ಎಂದರು. </p>.<p>ಸಂಘದ ಅಧ್ಯಕ್ಷ ವಿ.ಎಂ ಶ್ರೀನಿವಾಸ್, ಗುಣಮಟ್ಟದ ಹಾಲು ಉತ್ಪಾದನೆಗೆ ಆದ್ಯತೆ ನೀಡಬೇಕಾಗಿದೆ ಎಂದರು. </p>.<p>ಸಂಘದ ವಿಸ್ತರಣಾಧಿಕಾರಿ ಸಮೀರ್ ಪಾಷ ಮಾತನಾಡಿ, ಸಂಘವು ಒಕ್ಕೂಟದಿಂದ ಬರುವ ಎಲ್ಲ ಸೌಲಭ್ಯಗಳನ್ನು ಪಾರದರ್ಶಕವಾಗಿ ರೈತರಿಗೆ ನೀಡುತ್ತಿದೆ. ಹಾಗಾಗಿ ಉತ್ತಮ ಸಂಘ ಪ್ರಶಸ್ತಿ ಪಡೆಯಲು ಸಾಧ್ಯವಾಗಿದೆ ಎಂದರು. </p>.<p>ಸಂಘದ ಮುಖ್ಯ ನಿರ್ವಾಹಕ ಸಂಜಯ್ ಕುಮಾರ್, ಮುಂದಿನ ದಿನಗಳಲ್ಲಿ ಹಾಲು ಉತ್ಪಾದಕರಿಗೆ ಹಲವು ಸೌಲಭ್ಯ ಒದಗಿಸಲು ಸಂಘವು ಶ್ರಮಿಸಲಿದೆ ಎಂದರು.</p>.<p>ನಿರ್ದೇಶಕರಾದ ವಿ.ಎನ್ ವೆಂಕಟಾಚಲ, ರಾಜಗೋಪಾಲಯ್ಯ, ಅಶ್ವತಪ್ಪ, ತವಕಲ ಸಾಬ್, ಹರೀಶ್, ವಿಜಿ, ಶ್ರೀನಿವಾಸ್, ಪ್ರಕಾಶ್ ವಿ, ಮುರುಳಿ. ಕೆ, ನಾಗವೇಣಿ ಎಂ, ಸಾವಿತ್ರಮ್ಮ, ಸಂಜಯ್ ಕುಮಾರ್, ಕಾಂತರಾಜು, ಲಕ್ಷ್ಮೀದೇವಿ ,ನಾಗೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>