ಜನವರಿ
09: ವಿಧಾನಸಭೆ ಚುನಾವಣೆಯಲ್ಲಿ ಕೋಲಾರದಿಂದಲೇ ಸ್ಪರ್ಧಿಸುವೆ. ಹೈಕಮಾಂಡ್ ಒಪ್ಪಿಗೆ ಮೇಲೆ ನನ್ನ ನಿರ್ಧಾರ ಅವಲಂಬಿಸಿದೆ–ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಘೋಷಣೆ.
11: ‘ಕಳೆದ ಚುನಾವಣೆಯಲ್ಲಿ ₹ 17 ಕೋಟಿ ಸಾಲ ಮಾಡಿದ್ದು, ಇನ್ನೂ ತೀರಿಸಿಲ್ಲ. ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಾರೆ. ಅವರನ್ನು ನಿಲ್ಲಿಸಿ ಗೆಲ್ಲಿಸಿದರೆ ನನ್ನನ್ನು ಎಂಎಲ್ಸಿ ಮಾಡಿ ಮಂತ್ರಿ ಮಾಡುತ್ತಾರೆ’ ಎಂದು ಕೆ.ಶ್ರೀನಿವಾಸಗೌಡ, ಬೆಂಬಲಿಗರೊಬ್ಬರ ಜೊತೆ ದೂರವಾಣಿಯಲ್ಲಿ ನಡೆಸಿದ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ವಿವಾದ.
12: ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಪ್ರೊ.ಜೆ.ಬಾಲಕೃಷ್ಣ ಆಯ್ಕೆ.
13: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಿ.ದೇವರಾಜ್ ವರ್ಗಾವಣೆ–ಎಂ.ನಾರಾಯಣ ನೂತನ ಎಸ್ಪಿ.
13: ಹೂವಿನಲ್ಲಿ ಅರಳಿದ ‘ಕಾಂತಾರ’ ದೈವ–ಸಿರಿಧಾನ್ಯ ಮೇಳ, ಫಲಪುಷ್ಪ ಪ್ರದರ್ಶನ.
14: ಪಕ್ಷೇತರ ಶಾಸಕರಾಗಿದ್ದ ಎಚ್.ನಾಗೇಶ್ ಬೆಂಗಳೂರಿನಲ್ಲಿ ಕಾಂಗ್ರೆಸ್ಗೆ ಸೇರ್ಪಡೆ.
15: ಕೋಲಾರದಲ್ಲಿ ನಡೆದ ಯೋಗಾಥಾನ್ನಲ್ಲಿ 10 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡು ಯೋಗ ಪ್ರದರ್ಶನ.
19: ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ರತ್ನ ಕಲ್ಯಾಣ ಮಂಟಪದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಪ್ರಯುಕ್ತ ಶಕ್ತಿ ಕೇಂದ್ರಗಳ ಪ್ರಮುಖರ ಸಭೆ. ಟಿಕೆಟ್ ಆಕಾಂಕ್ಷಿಗಳಿಂದ ಮಾಹಿತಿ.
19: ಐಸಿಎಆರ್-ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತರ ವಸತಿ ನಿಲಯ ಕಟ್ಟಡ ಹಾಗೂ ಟೊಮೆಟೊ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಶಂಕುಸ್ಥಾಪನೆ.
21: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಲಕ್ಷ್ಮಿನಾರಾಯಣ ನೇಮಕ.
23: ಕಾಂಗ್ರೆಸ್ ಪಕ್ಷದ ‘ಪ್ರಜಾಧ್ವನಿ’ ಸಮಾವೇಶ–ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಭಾಗಿ.
26: ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ₹ 8.55 ಕೋಟಿ ವೆಚ್ಚದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲು ಮುನಿರತ್ನ ಶಂಕುಸ್ಥಾಪನೆ.
30: ಕೋಲಾರ ಕ್ಷೇತ್ರದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ತಿರುಗಾಟ.
ಫೆಬ್ರುವರಿ
08: ಜಿಲ್ಲಾ ಬಿಜೆಪಿ ಎಸ್ಸಿ ಸಮಾವೇಶ–ಸಿ.ಟಿ.ರವಿ ಭಾಗಿ
10: ಲೋಕಾಯುಕ್ತ ಪೊಲೀಸರಿಂದ ಡಿಸಿಎಫ್ ವೆಂಕಟೇಶ್ ವಸತಿಗೃಹ, ಕಚೇರಿ ಶೋಧ
13: ವೇಮಗಲ್ನಲ್ಲಿ ಕಾಂಗ್ರೆಸ್ನಿಂದ ರೈತ ಮಹಿಳಾ ಸಮಾವೇಶ–ಸಿದ್ದರಾಮಯ್ಯ ಭಾಗಿ-ಕಾಂಗ್ರೆಸ್ ಗೆದ್ದರೆ ಸ್ತ್ರೀಶಕ್ತಿ ಸಂಘದ ಸಾಲಮನ್ನಾ ಘೋಷಣೆ.
14: ಮುಳಬಾಗಿಲಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
17: ರಾಜ್ಯ ಬಜೆಟ್ ಮಂಡನೆ: ಕೆ.ಸಿ.ವ್ಯಾಲಿ ಮೂರನೇ ಹಂತದ ಶುದ್ಧೀಕರಣ ಪ್ರಸ್ತಾಪ.
17: ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ (69) ಅನಾರೋಗ್ಯದಿಂದ ನಿಧನ.
18: 14ರ ಹರೆಯದ ಬಾಲಕಿಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣದಲ್ಲಿ ಕಾಮಸಮುದ್ರಂ ಪೊಲೀಸ್ ಠಾಣೆ ವ್ಯಾಪ್ತಿಯ ನಾಲ್ವರು ಅಪರಾಧಿಗಳಿಗೆ ಪೋಕ್ಸೊ ವಿಶೇಷ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆ.
ಮಾರ್ಚ್
07: ಅಡ್ಡಂಡ ಸಿ.ಕಾರ್ಯಪ್ಪ ನಿರ್ದೇಶನದ ವಿವಾದಿತ ‘ಟಿಪ್ಪು ನಿಜ ಕನಸುಗಳು’ ನಾಟಕವು ಟಿ.ಚನ್ನಯ್ಯ ರಂಗಮಂದಿರದಲ್ಲಿ ಪೊಲೀಸರ ಕಟ್ಟೆಚ್ಚರದಲ್ಲಿ ನಡೆಯಿತು.
09: ಮಾಲೂರಿನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಬೆಂಬಲಿಗರ ಕಿತ್ತಾಟ.
09: ಹಣೆಗೆ ಬೊಟ್ಟು ಇಟ್ಟುಕೊಂಡಿಲ್ಲವೆಂದು ಮಹಿಳೆಯ ನಿಂದಿಸಿದ ಸಂಸದ ಎಸ್.ಮುನಿಸ್ವಾಮಿ–ಆಕ್ರೋಶ.
11: ಕೋಲಾರ ತಾಲ್ಲೂಕಿನ ಬ್ಯಾಲಹಳ್ಳಿ ತೊಟದಲ್ಲಿ ಆಹಾರ ಧಾನ್ಯ ಅಕ್ರಮ ದಾಸ್ತಾನು: ಶಾಸಕಿ ರೂಪಕಲಾ ವಿರುದ್ಧ ಪ್ರಕರಣ ದಾಖಲು.
13: ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಬರೆಯಲು ಕೋಲಾರಕ್ಕೆ ಹೊರಟಿದ್ದ ತಾಲ್ಲೂಕಿನ ಷಾಪೂರು ಗ್ರಾಮದ ವಿದ್ಯಾರ್ಥಿನಿ ಬಸ್ ಹತ್ತುತ್ತಿದ್ದಾಗ ಕಡಿಮೆ ರಕ್ತದೊತ್ತಡದಿಂದ ಕುಸಿದು ನಿಧನ.
17: ಶ್ರೀನಿವಾಸಪುರ ತಾಲ್ಲೂಕಿನ ಚಾಕಪ್ಪಲ್ಲಿ ಗ್ರಾಮ ಸಮೀಪ ಕಾರೊಂದು ಹಳ್ಳಕ್ಕೆ ಬಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ದಂಪತಿ ನಿಧನ.
20: ಆಲಿಕಲ್ಲು ಮಳೆಗೆ 3,400 ಹೆಕ್ಟೇರ್ ಮಾವಿಗೆ ಹಾನಿ
20:ಕೋಲಾರದಿಂದ ಸ್ಪರ್ಧಿಸುವಂತೆ ಆಗ್ರಹಿಸಿ ಸಿದ್ದರಾಮಯ್ಯ ಮನೆ ಮುತ್ತಿಗೆಗೆ ಕುರುಬರು, ಅಲ್ಪಸಂಖ್ಯಾತರು, ದಲಿತ, ಅಹಿಂದ ವರ್ಗಗಳ ಮುಖಂಡರು ನಿರ್ಧಾರ.
20: ಸಿ.ಎಂ.ಇಬ್ರಾಹಿಂ ಮೇಲೆ ನೋಟು ತೂರಿದ ಕಾರ್ಯಕರ್ತ!
23: ಇರಾನಿ ಗ್ಯಾಂಗ್ನ 6 ಮಂದಿ ಬಂಧನ.
24: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಲೋಕಸಭಾ ಸದಸ್ಯತ್ವದಿಂದ ಅನರ್ಹ. ಇದಕ್ಕೆ ಕಾರಣವಾದ ಮೂಲ ವ್ಯಕ್ತಿ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಿ.ಎಂ.ರಘುನಾಥ್. ಹೋರಾಟಕ್ಕೆ ಜಯ ಸಿಕ್ಕಿದೆ ಎಂದ ರಘುನಾಥ್.
25: ದೇವನಹಳ್ಳಿ ಕ್ಷೇತ್ರದ ಟಿಕೆಟ್: ರಾಜ್ಯ ರಾಜಕಾರಣ ಪ್ರವೇಶಿಸಿದ ಕೆ.ಎಚ್.ಮುನಿಯಪ್ಪ.
ಏಪ್ರಿಲ್
02: ಬಂಗಾರಪೇಟೆಯಲ್ಲಿ ಬಾಣಂತಿ ಸಾವು–ಆಸ್ಪತ್ರೆ ಮುಂದೆ ಪ್ರತಿಭಟನೆ.
06: ಬಿಎಸ್ಎಫ್ ಯೋಧರಿಗೆ ಹೂಮಳೆಯ ಸ್ವಾಗತ.
16: ಕೋಲಾರದಲ್ಲಿ ನೆಲದಲ್ಲಿ ಮತ್ತೆ ಗುಡುಗಿದ ರಾಹುಲ್ ಗಾಂಧಿ–ಜೈ ಭಾರತ್ ಸಮಾವೇಶ.
16: ನಿಯಮ ಮೀರಿ ಎಟಿಎಂ ವಾಹನದಲ್ಲಿ ಸಾಗಿಸುತ್ತಿದ್ದ ₹ 1.81 ಕೋಟಿ ವಶ.
15: ರಮೇಶ್ ಕುಮಾರ್ ಮುನಿಸು: ಹೆಲಿಕಾಪ್ಟರ್ನಲ್ಲಿ ಬಂದ ರಣದೀಪ್ ಸಿಂಗ್ ಸುರ್ಜೇವಾಲಾ.
15: ದಿಢೀರನೇ ಕೊತ್ತೂರು ಮಂಜುನಾಥ್ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್ ಘೋಷಣೆ.
15: ಚುನಾವಣಾ ರಾಜಕಾರಣಕ್ಕೆ ವಿದಾಯ: ವಿ.ಆರ್.ಸುದರ್ಶನ್.
15: ಸಿದ್ದರಾಮಯ್ಯ ಅವರಿಗೆ ಕೋಲಾರ ಕ್ಷೇತ್ರದ ಟಿಕೆಟ್ ನೀಡದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು, ಬೆಂಬಲಿಗರು ಹಾಗೂ ಮುಸ್ಲಿಂ ಮುಖಂಡರ ಆಕ್ರೋಶ.
20: ಕೊತ್ತೂರು ಒತ್ತಡಕ್ಕೆ ಮಣಿದ ಕಾಂಗ್ರೆಸ್: ಮುಳಬಾಗಿಲು ‘ಕೈ’ ಅಭ್ಯರ್ಥಿ ದಿಢೀರ್ ಬದಲು!
21: ಬಾಲಕನನ್ನು ಅಟ್ಟಾಡಿಸಿ ಗಾಯಗೊಳಿಸಿದ ಬೀದಿನಾಯಿಗಳು.
21: ಶ್ರೀನಿವಾಸಪುರದ ಗಂಗೋತ್ರಿ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದ ಎಸ್.ಎಂ.ಕೌಶಿಕ್ ರಾಜ್ಯಕ್ಕೆ ಪ್ರಥಮ.
24: ಹೈಟೆಕ್ ಜೂಜು ಅಡ್ಡೆ ಮೇಲೆ ದಾಳಿ.
24: ಅಕ್ರಮ ಆಸ್ತಿ ಆರೋಪ; ಇಒ ವೆಂಕಟೇಶಪ್ಪ ಮನೆ ಮೇಲೆ ಲೋಕಾಯುಕ್ತ ದಾಳಿ.
29: ಕೋಲಾರ ತಾಲ್ಲೂಕಿಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ. ಚುನಾವಣಾ ಪ್ರಚಾರ ಸಮಾವೇಶ.
ಮೇ
10: ವಿಧಾನಸಭೆ ಚುನಾವಣೆ–ಮತದಾನ.
13: ಮತ ಎಣಿಕೆ: ಭದ್ರಕೋಟೆ ರಕ್ಷಿಸಿಕೊಂಡ ಕಾಂಗ್ರೆಸ್!
13: 248 ಮತಗಳಿಂದ ಗೆದ್ದ ನಂಜೇಗೌಡ–ಮಂಜುನಾಥ್ ಗೌಡಗೆ ಬೇಸರ.
ಜೂನ್
11: ಬಸ್ ಚಲಾಯಿಸಿದ ಕೆಜಿಎಫ್ ಶಾಸಕಿ ರೂಪಕಲಾ!
15: ಹೊರರಾಜ್ಯಗಳಿಂದ ಬೇಡಿಕೆ; ಟೊಮೆಟೊ ದರ ಹೆಚ್ಚಳ!
19: ವೆಂಕಟ್ ರಾಜಾ ವರ್ಗಾವಣೆ–ಅಕ್ರಂ ಪಾಷ ನೂತನ ಜಿಲ್ಲಾಧಿಕಾರಿ
26: ರೆಸಾರ್ಟ್ನಲ್ಲಿ ವೇಶ್ಯಾವಾಟಿಕೆ–6 ಮಹಿಳೆಯರ ರಕ್ಷಣೆ
27: ಪರಿಶಿಷ್ಟ ಯುವಕನನ್ನು ಪ್ರೀತಿಸಿದ್ದಕ್ಕೆ ಮಗಳನ್ನು ಕೊಂದ ತಂದೆ.
ಜುಲೈ
02: ಕೆಜಿಎಫ್ ನೂತನ ಎಸ್ಪಿಯಾಗಿ ಶಾಂತರಾಜು ಅಧಿಕಾರ ಸ್ವೀಕಾರ.
02: ಸಿ.ಎಂ.ಮುನಿಯಪ್ಪ, ಹರೀಶ್ ಹಂದೆ, ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪಗೆ ಗೌರವ ಡಾಕ್ಟರೇಟ್.
11: 15 ಕೆ.ಜಿ ಬಾಕ್ಸ್ ಟೊಮೊಟೊ ದರ ₹ 2,200–ಸಾರ್ವಕಾಲಿಕ ದಾಖಲೆ.
15: ಟೊಮೆಟೊ: ಕುಟುಂಬಕ್ಕೆ ₹ 40 ಲಕ್ಷ ಸಂಪಾದನೆ.
30: ಟೊಮೆಟೊ ತುಂಬಿದ ಲಾರಿ ನಾಪತ್ತೆ; ಪ್ರಕರಣ ದಾಖಲು.
ಆಗಸ್ಟ್
05: ‘ಗೃಹಜ್ಯೋತಿ’ಗೆ ಸಚಿವ ಬೈರತಿ ಸುರೇಶ್ ಚಾಲನೆ.
12: ಕೊಲೆ ಪ್ರಕರಣ: 24 ಗಂಟೆಯೊಳಗೆ ಆರೋಪಿ ಪತ್ತೆ ಹಚ್ಚಿದ ಶ್ವಾನ.
13: ₹ 30 ಲಕ್ಷ ಮೌಲ್ಯದ 30 ಬೈಕ್ ವಶ.
14: ಟೊಮೆಟೊ ಬೆಲೆ ಕುಸಿತ; ಆತಂಕದಲ್ಲಿ ಬೆಳೆಗಾರರು.
23: ಕೆ.ಜಿ. ಟೊಮೆಟೊ ಬೆಲೆ ₹23ಕ್ಕೆ ಕುಸಿತ.
24: ಶ್ರೀನಿವಾಸಪುರ: 120 ಎಕರೆ ಒತ್ತುವರಿ ತೆರವು.
27: ತೊಟ್ಲಿ: ಪರಿಶಿಷ್ಟ ಬಾಲಕನ ಪ್ರೀತಿಸಿದ ಮಗಳ ಹತ್ಯೆ (ಮರ್ಯಾದೆಗೇಡು ಹತ್ಯೆ).
28: ಕೋಚಿಮುಲ್ ಸಭೆಯಲ್ಲಿ ಭಾರಿ ಗದ್ದಲ.
29: ಶ್ರೀನಿವಾಸಪುರದಲ್ಲಿ ಅರಣ್ಯ ಇಲಾಖೆಯಿಂದ ಮುಂದುವರಿದ ಒತ್ತುವರಿ ತೆರವು ಕಾರ್ಯಾಚರಣೆ.
ಸೆಪ್ಟೆಂಬರ್
08: ಬಿಜೆಪಿ ಪ್ರತಿಭಟನೆ ವೇಳೆ ಹೆಜ್ಜೇನು ದಾಳಿ–ಸಂಸದ ಮುನಿಸ್ವಾಮಿಗೂ ಕಚ್ಚಿದ ಜೇನ್ನೊಣ.
09: ಮೇಲೆ ರೈತರು ಕಲ್ಲು ತೂರಾಟ.
10: ಒತ್ತುವರಿ ತೆರವು ಕಾರ್ಯಾಚರಣೆಗೆ ಅಡ್ಡಿ: ಸಂಸದ, ಮುಖಂಡರು, ರೈತರ ಮೇಲೆ ಎಫ್ಐಆರ್.
12: ಅಳಿಯನಿಂದ ಪತ್ನಿ, ಮಾವನ ಕೊಲೆ; ಪೊಲೀಸರಿಂದ ಆರೋಪಿ ಕಾಲಿಗೆ ಗುಂಡು.
14: ಜಿಲ್ಲೆಯ ಐದೂ ತಾಲ್ಲೂಕಿನಲ್ಲಿ ತೀವ್ರ ಬರ.
14: ಅಪಹರಣವಾದ 1 ಗಂಟೇಲಿ ಬಾಲಕನ ಪತ್ತೆ.
15: ಟೊಮೆಟೊ ದರದಲ್ಲಿ ಭಾರಿ ಕುಸಿತ.
20: ಲಕ್ಷ್ಮಿಸಾಗರ ಗ್ರಾಮಕ್ಕೆ ಸಣ್ಣ ನೀರಾವರಿ ಸಚಿವರ ಭೇಟಿ. ಗ್ರಾಮಸ್ಥರೊಂದಿಗೆ ಚರ್ಚೆ; ಸೌಲಭ್ಯದ ಭರವಸೆ.
25: ಜನತಾ ದರ್ಶನ: ಶಾಸಕ ಎಸ್.ಎನ್.ನಾರಾಯಣಸ್ವಾಮಿ-ಸಂಸದ ಎಸ್.ಮುನಿಸ್ವಾಮಿ ಜಟಾಪಟಿ.
29: ತಲವಾರ್ ಅಳವಡಿಕೆ ಪ್ರಕರಣ; ಐವರ ವಿರುದ್ಧ ಎಫ್ಐಆರ್.
29: ಕರ್ನಾಟಕ ಬಂದ್: ಕೋಲಾರ, ಕೆಜಿಎಫ್ ಯಶಸ್ಸು; ಉಳಿದೆಡೆ ನೀರಸ.
30: ಜಿಲ್ಲೆಯಲ್ಲಿ 35,974 ಹೆಕ್ಟೇರ್ ಬೆಳೆ ನಷ್ಟ.
ಅಕ್ಟೋಬರ್
02: ರಾಜ್ಯಮಟ್ಟದ ಬ್ಯಾಸ್ಕೆಟ್ಬಾಲ್; ಡಿವೈಇಎಸ್ ಮೈಸೂರಿನ ಮಹಿಳೆಯರಿಗೆ ಪ್ರಶಸ್ತಿ. ಯಂಗ್ ಓರಿಯನ್ಸ್ ಚಾಂಪಿಯನ್.
03: ಬಿಜೆಪಿ ಬೃಹತ್ ಪ್ರತಿಭಟನೆ–ಡಿ.ಸಿ, ಎಸ್.ಪಿ, ಡಿಸಿಎಫ್ಗೆ ಬಿಜೆಪಿ ಎಚ್ಚರಿಕೆ. ಖಡ್ಗ, ತ್ರಿಶೂಲ, ಗದೆ ಹೊರತೆಗೆದರೆ ಏನಾಗುತ್ತೆ ಗೊತ್ತೆ: ಸಿ.ಟಿ.ರವಿ ಪ್ರಶ್ನೆ
10: ಕೋಲಾರಮ್ಮ ಕೆರೆಯಲ್ಲಿ ನೊರೆ ರಾಶಿ.
20: ಕೋಚಿಮುಲ್ ಅಧ್ಯಕ್ಷ, ನಿರ್ದೇಶಕರ ವಿದೇಶಿ ಪ್ರವಾಸ!
20: ಕೂಲಿ ಕೇಳಿದ್ದಕ್ಕೆ ಕಟ್ಟಿ ಹಾಕಿ ಪರಿಶಿಷ್ಟ ಯುವಕನ ಮೇಲೆ ಹಲ್ಲೆ.
24: ಎಂ.ಶ್ರೀನಿವಾಸನ್ ಕೊಲೆ ಪ್ರಕರಣ: ಆರೂ ಆರೋಪಿಗಳ ಬಂಧನ- ಇಬ್ಬರಿಗೆ ಗುಂಡೇಟು.
26: ಬ್ಯಾಗ್ನಲ್ಲಿ ಮಗು ಅಪಹರಿಸಿದ ಮಹಿಳೆಯರು!
27: ಮತ್ತೆ ತಾಯಿ ಮಡಿಲು ಸೇರಿದ ಹಸುಳೆ!
31: ಜಿಲ್ಲೆಯ ಮೂವರಿಗೆ ರಾಜ್ಯೋತ್ಸವ ಪ್ರಶಸ್ತಿ (ಲಕ್ಷ್ಮಿಪತಿ ಕೋಲಾರ (ಸಾಹಿತ್ಯ), ಟಿ.ಎಸ್.ದಿವ್ಯಾ (ಕ್ರೀಡೆ) ಹಾಗೂ ಕೆ.ಚಂದ್ರಶೇಖರ್ (ಶಿಕ್ಷಣ).
ನವೆಂಬರ್
01: ಆನೆ ಮೇಲೆ ಕೋಲಾರಮ್ಮನ ಮೆರವಣಿಗೆ.
04: ಕೋಲಾರ: 17 ಬಾಲಕನ ಬರ್ಬರ ಕೊಲೆ–
05: ಬಿಜೆಪಿ ಬರ ಅಧ್ಯಯನ ತಂಡ ಭೇಟಿ.
05: ಇಬ್ಬರು ಕಾಂಗ್ರೆಸ್ ಮುಖಂಡರ ಕೊಲೆ ಪ್ರಕರಣ: ಪಿಎಸ್ಐ ಸೇರಿ 7 ಪೊಲೀಸರು ಅಮಾನತು.
05: ಮಾಲೂರು:ಕೊಲೆ ಆರೋಪಿ ಮೇಲೆ ಪೊಲೀಸರಿಂದ ಫೈರಿಂಗ್.
06: ಬಾಲಕನ ಹತ್ಯೆ: ಮೂವರು ಪೊಲೀಸ್ ಸಿಬ್ಬಂದಿ ಅಮಾನತು.
09: ಶ್ರೀನಿವಾಸಪುರ, ಮಾಲೂರು, ಕೋಲಾರದಲ್ಲಿ ನಡೆದ ಕೊಲೆ ಪ್ರಕರಣ: ಮೂರೂ ಪ್ರಕರಣಗಳ ಆರೋಪಿಗಳು ಪತ್ತೆ–ಐಜಿಪಿ.
09: ಬಾಲಕನ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು: ಏಳು ಮಂದಿ ಬಂಧನ–ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು.
11: ಯರಗೋಳ್ ಜಲಾಶಯ: ಮುಖ್ಯಮಂತ್ರಿ ಉದ್ಘಾಟನೆ.
12: ಪಾನಮತ್ತರಾಗಿ ಬಾರ್ನಲ್ಲಿ ಹಲ್ಲೆಗೆ ಯತ್ನಿಸಿದ ಎಎಸ್ಐ.
14: ಕುರುಡುಮಲೆಗೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಭೇಟಿ.
17: ಪಾನಮತ್ತರಾಗಿ ಹಲ್ಲೆಗೆ ಯತ್ನ; ಎಎಸ್ಐ ಅಮಾನತು.
18: ಡಿಸಿಸಿ ಬ್ಯಾಂಕ್ಗೆ ಆಡಳಿತಾಧಿಕಾರಿ ನೇಮಕ.
28: ರಜೆಗಾಗಿ ನೀರಿಗೆ ಇಲಿ ಪಾಷಾಣ ಹಾಕಿದ ವಿದ್ಯಾರ್ಥಿ!
ಡಿಸೆಂಬರ್
02: ಕಾಂಗ್ರೆಸ್ ಟಿಕೆಟ್; ಹೆಚ್ಚಿದ ಆಕಾಂಕ್ಷಿಗಳು.
10: ನಾಗಲಾಪುರ: 18 ಮಠಾಧೀಶರ ಸಮಾಗಮ.
14: 8 ತಿಂಗಳಲ್ಲಿ 98 ಬಾಲ ಗರ್ಭಿಣಿಯರು!
18: ಕೋಚಿಮುಲ್ ನೇಮಕಾತಿ: ಘೋಷಣೆಗೆ ಮುನ್ನ ಹರಿದಾಡುತ್ತಿರುವ ಪಟ್ಟಿ!
16: ಮಾಲೂರು ತಾಲ್ಲೂಕಿನ ಯಲುವಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಮಕ್ಕಳಿಂದ ಮಲದ ಗುಂಡಿ ಸ್ವಚ್ಛತೆ!
17: ಮಲದ ಗುಂಡಿಯೊಳಗೆ ಮಕ್ಕಳನ್ನು ಇಳಿಸಿದ ಪ್ರಕರಣ; 'ಪ್ರಜಾವಾಣಿ' ವರದಿ ಉಲ್ಲೇಖ–ಇಬ್ಬರ ಬಂಧನ.
21: ಕೋವಿಡ್ ಆತಂಕ; ಜಿಲ್ಲೆಯಲ್ಲೂ ಮುನ್ನೆಚ್ಚರಿಕೆ.
22: ಕೋಚಿಮುಲ್ ನೇಮಕಾತಿ: 75 ಅಭ್ಯರ್ಥಿ ಹೆಸರು ಓದಿದ ಅಧ್ಯಕ್ಷರು!
26: ಏಳು ತಿಂಗಳ ನಂತರ ಬಯಲಾದ ಮರ್ಯಾದೆಗೇಡು ಹತ್ಯೆ.
25: ಆದಿಮ: ಆ ಬೆಟ್ಟದ ಬೆಳದಿಂಗಳಲ್ಲಿ ಹುಣ್ಣಿಮೆ ಹಾಡು…
27: ಮಕ್ಕಳಿಂದ ಮಲ ಗುಂಡಿ ಸ್ವಚ್ಛತೆ– ಕ್ರೂರ ಕೃತ್ಯ-ಮುಖ್ಯಮಂತ್ರಿ
28: ಜಿಲ್ಲೆಯಲ್ಲಿ ಐದು ಕೋವಿಡ್ ಪ್ರಕರಣ.
28: ಬಾಲ ಗರ್ಭಿಣಿಯರು: ಮೂರು ದಿನದಲ್ಲಿ 39 ಎಫ್ಐಆರ್!
28: ಮಲ ಗುಂಡಿ ಸ್ವಚ್ಛತೆಗೆ ಮಕ್ಕಳ ಬಳಕೆ; ಮತ್ತಿಬ್ಬರ ಬಂಧನ
29: ಬಾಲಕಿ ಮೇಲೆ ಅತ್ಯಾಚಾರ; ಐವರ ಬಂಧನ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.