<p>ಕೋಲಾರ: ‘ಇಟಿಸಿಎಂ ಆಸ್ಪತ್ರೆ ಹಾಗೂ ಮೆಥೋಡಿಸ್ಟ್ ಶಾಲೆಗೆ ದೊಡ್ಡ ಪರಂಪರೆ ಇದ್ದು, ಅವುಗಳನ್ನು ಉಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸಲಹೆ ನೀಡಿದರು.</p>.<p>ನಗರದ ಸುವರ್ಣ ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕ್ರೈಸ್ತ ಮಿಷನರಿಗಳು ಶೈಕ್ಷಣಿಕ ಹಾಗೂ ಆರೋಗ್ಯದ ಉದ್ದೇಶದಿಂದ ನೂರು ವರ್ಷಗಳ ಹಿಂದೆಯೇ ಸ್ಥಾಪಿಸಿ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿವೆ. ಅವುಗಳ ಉಳಿವಿಗಾಗಿ ಸಂಬಂಧಪಟ್ಟ ವೇದಿಕೆಗಳಲ್ಲಿ ಸಮುದಾಯದವರು ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ’ ಎಂದರು.</p>.<p>ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಯುಸರ್ಕಾರದ ಸೌಲಭ್ಯ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮುದಾಯವನ್ನು ಮುಂಚೂಣಿಗೆ ತರುವಂಥ ವೇದಿಕೆ ಒದಗಿಸುವ ಕೆಲಸವನ್ನು ಸಂಘಟನೆ ಮಾಡಬೇಕು’ ಎಂದರು.</p>.<p>ಸಂಘದ ಅಧ್ಯಕ್ಷ ಜಯದೇವ್ ಪ್ರಸನ್ನ ಮಾತನಾಡಿ, ‘ಪೂರ್ವಜರು ಉಳಿಸಿ ಬೆಳೆಸಿದ ಕ್ರೈಸ್ತರ ಸಂಸ್ಥೆಗಳನ್ನು ಕೆಲವರು ಮಾರಾಟ ಮಾಡಲು ಹೊರಟಿದ್ದು, ಎಷ್ಟೇ ಅಡೆತಡೆ ಬಂದರೂ ಮುನ್ನುಗ್ಗಿ ಹೋರಾಡಲು ಸಿದ್ಧರಿದ್ದೇವೆ’<br />ಎಂದರು.</p>.<p>ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿದರು. ಸಂಸ್ಥೆಯ ಸುಧಾಕರ್, ಕಾಂಗ್ರೆಸ್ ಮುಖಂಡರಾದ ಕೆ. ಜಯದೇವ್, ಕಿಶೋರ್ ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್, ಖಜಾಂಚಿ ಡಾ.ಎಂ. ಜೋಸೆಫ್, ಉಪಾಧ್ಯಕ್ಷರಾದ ಕುಮಾರ್, ದೇವಕುಮಾರ್, ಮುಖಂಡರಾದ ಸುರೇಂದ್ರ ಬಾಬು, ಎಡಿನ್, ಜೇಮ್ಸ್ ಪಾಸ್ಟರ್, ಡೇವಿಡ್, ಪ್ರಭಾಕರ್, ರಾಜು, ಬೆತ್ತನಿ ರಾಜಣ್ಣ, ಗಲ್ಪೇಟೆ ದೀಪು, ಕಾರ್ಪೆಂಟರ್ ರಾಜಣ್ಣ, ಸಾರಿಗೆ ನಗರ ರವಿ, ತಬಲ ಸೂರಿ, ಪ್ರಸನ್ನಕುಮಾರ್, ಜನಘಟ್ಟ ಕೃಷ್ಣಮೂರ್ತಿ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ‘ಇಟಿಸಿಎಂ ಆಸ್ಪತ್ರೆ ಹಾಗೂ ಮೆಥೋಡಿಸ್ಟ್ ಶಾಲೆಗೆ ದೊಡ್ಡ ಪರಂಪರೆ ಇದ್ದು, ಅವುಗಳನ್ನು ಉಳಿಸಿ ಅಭಿವೃದ್ಧಿ ಪಡಿಸುವಂತಾಗಬೇಕು’ ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್. ಸುದರ್ಶನ್ ಸಲಹೆ ನೀಡಿದರು.</p>.<p>ನಗರದ ಸುವರ್ಣ ಕನ್ನಡ ಭವನದಲ್ಲಿ ಗುರುವಾರ ಕರ್ನಾಟಕ ಕ್ರೈಸ್ತ ಅಲ್ಪಸಂಖ್ಯಾತರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.</p>.<p>‘ಕ್ರೈಸ್ತ ಮಿಷನರಿಗಳು ಶೈಕ್ಷಣಿಕ ಹಾಗೂ ಆರೋಗ್ಯದ ಉದ್ದೇಶದಿಂದ ನೂರು ವರ್ಷಗಳ ಹಿಂದೆಯೇ ಸ್ಥಾಪಿಸಿ ಸಾರ್ವಜನಿಕ ಸೇವೆಗೆ ಮುಡಿಪಾಗಿಟ್ಟಿವೆ. ಅವುಗಳ ಉಳಿವಿಗಾಗಿ ಸಂಬಂಧಪಟ್ಟ ವೇದಿಕೆಗಳಲ್ಲಿ ಸಮುದಾಯದವರು ಸಂಘಟಿತರಾಗಿ ಧ್ವನಿ ಎತ್ತಬೇಕಾಗಿದೆ’ ಎಂದರು.</p>.<p>ಜೆಡಿಎಸ್ ಮುಖಂಡ ಸಿಎಂಆರ್ ಶ್ರೀನಾಥ್, ‘ಸಮಾಜದ ಕಟ್ಟ ಕಡೆಯ ವ್ಯಕ್ತಿಯುಸರ್ಕಾರದ ಸೌಲಭ್ಯ ಪಡೆಯುವಂತೆ ಜಾಗೃತಿ ಮೂಡಿಸಬೇಕು. ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಸಮುದಾಯವನ್ನು ಮುಂಚೂಣಿಗೆ ತರುವಂಥ ವೇದಿಕೆ ಒದಗಿಸುವ ಕೆಲಸವನ್ನು ಸಂಘಟನೆ ಮಾಡಬೇಕು’ ಎಂದರು.</p>.<p>ಸಂಘದ ಅಧ್ಯಕ್ಷ ಜಯದೇವ್ ಪ್ರಸನ್ನ ಮಾತನಾಡಿ, ‘ಪೂರ್ವಜರು ಉಳಿಸಿ ಬೆಳೆಸಿದ ಕ್ರೈಸ್ತರ ಸಂಸ್ಥೆಗಳನ್ನು ಕೆಲವರು ಮಾರಾಟ ಮಾಡಲು ಹೊರಟಿದ್ದು, ಎಷ್ಟೇ ಅಡೆತಡೆ ಬಂದರೂ ಮುನ್ನುಗ್ಗಿ ಹೋರಾಡಲು ಸಿದ್ಧರಿದ್ದೇವೆ’<br />ಎಂದರು.</p>.<p>ಭಾರತ ಸೇವಾದಳ ಜಿಲ್ಲಾ ಅಧ್ಯಕ್ಷ ಕೆ.ಎಸ್. ಗಣೇಶ್ ಮಾತನಾಡಿದರು. ಸಂಸ್ಥೆಯ ಸುಧಾಕರ್, ಕಾಂಗ್ರೆಸ್ ಮುಖಂಡರಾದ ಕೆ. ಜಯದೇವ್, ಕಿಶೋರ್ ಕುಮಾರ್, ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಗೌರವ ಅಧ್ಯಕ್ಷ ರವಿಕುಮಾರ್, ಖಜಾಂಚಿ ಡಾ.ಎಂ. ಜೋಸೆಫ್, ಉಪಾಧ್ಯಕ್ಷರಾದ ಕುಮಾರ್, ದೇವಕುಮಾರ್, ಮುಖಂಡರಾದ ಸುರೇಂದ್ರ ಬಾಬು, ಎಡಿನ್, ಜೇಮ್ಸ್ ಪಾಸ್ಟರ್, ಡೇವಿಡ್, ಪ್ರಭಾಕರ್, ರಾಜು, ಬೆತ್ತನಿ ರಾಜಣ್ಣ, ಗಲ್ಪೇಟೆ ದೀಪು, ಕಾರ್ಪೆಂಟರ್ ರಾಜಣ್ಣ, ಸಾರಿಗೆ ನಗರ ರವಿ, ತಬಲ ಸೂರಿ, ಪ್ರಸನ್ನಕುಮಾರ್, ಜನಘಟ್ಟ ಕೃಷ್ಣಮೂರ್ತಿ<br />ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>