<p>ಕೆಜಿಎಫ್: ‘ರಾಷ್ಟ್ರಭಕ್ತಿ ಮತ್ತು ನಾಡ ಪ್ರೀತಿ ಪ್ರಾಧಿಕಾರದ ಮೂಲ ಧ್ಯೇಯವಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಹೇಳಿದರು.</p>.<p>ಬೆಮಲ್ ಕಲಾ ಕ್ಷೇತ್ರದಲ್ಲಿ ಭಾನುವಾರ ಸುಗಮ ಸಂಗೀತ ಪರಿಷತ್, ಬೆಮಲ್ ಕನ್ನಡ ಮಿತ್ರರು, ಆಡಳಿತ ವರ್ಗ ಆಯೋಜಿಸಿದ್ದ ಅಮೃತ ಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಭಾಷೆ ಕೇವಲ ಲಿಪಿಯಲ್ಲ. ಅದು ಅಂತರಂಗದ ಭಾವನೆಗಳ ಸಂದೇಶವಾಗಿದೆ. ಯಾವ ಭಾಷೆ ಮನೆಯಂಗಳದ ಭಾಷೆ ಆಗುವುದಿಲ್ಲವೋ, ಆ ಭಾಷೆ ನಾಡಿನ ಭಾಷೆ ಆಗಲು ಸಾಧ್ಯವಿಲ್ಲ. ಅದಕ್ಕೆ ಸಂಕಲ್ಪ ಬೇಕಾಗಿದೆ. ಇಂತಹ ಸಂಕಲ್ಪ ಕನ್ನಡಿಗರ ಶಕ್ತಿಯಾಗಬೇಕು. ಕನ್ನಡವನ್ನು ಮಾತನಾಡಿದರೆ ಕೀಳರಿಮೆ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.</p>.<p>ಗಡಿ ಪ್ರದೇಶದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೆಲಸಗಳ ಜೊತೆಗೆ ಗಡಿ ಪ್ರದೇಶಗಳ ಅಭಿವೃದ್ಧಿ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾಧಿಕಾರಕ್ಕೆ ಸರ್ಕಾರ ಅಧಿಕಾರ ನೀಡಿದೆ. ಗಡಿನಾಡಿನಲ್ಲಿರುವ ವಿಭಿನ್ನ ಸಂಸ್ಕೃತಿಯ ಸಂಘರ್ಷದಲ್ಲಿ ಕನ್ನಡ ಮರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಕನ್ನಡ ಕಾಯುವ ಕೆಲಸ ಮಾಡಲಾಗುತ್ತಿದೆ ಎಂದರು.</p>.<p>300 ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಕನ್ನಡ ಮಿತ್ರರು ಸಂಸ್ಥೆಗೆ ಪ್ರತಿವರ್ಷ ₹ 1 ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.</p>.<p>ಗಡಿ ಭಾಗದಲ್ಲಿ ಕನ್ನಡದ ಕಿಚ್ಚು ಆರಬಾರದು. ಅನಾಥ ಪ್ರಜ್ಞೆ ಕಾಣಬಾರದು. ಈ ಹಿನ್ನೆಲೆಯಲ್ಲಿ ನ. 2 ಮತ್ತು 3 ರಂದು ಗಡಿನಾಡ ಉತ್ಸವವನ್ನು ಬೆಂಗಳೂರಿನಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.</p>.<p>‘70 ಮತ್ತು 80ರ ದಶಕದಲ್ಲಿ ಸುಗಮ ಸಂಗೀತದ ಚಳವಳಿ ನಡೆಯಿತು. ಸುಗಮ ಸಂಗೀತ ಕವಿಯ ಭಾವನೆಯನ್ನು ಜನರಿಗೆ ನೇರವಾಗಿ ಮುಟ್ಟಿಸುತ್ತದೆ’ ಎಂದು ಬೆಮಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಈಶ್ವರ ಭಟ್ ಹೇಳಿದರು.</p>.<p>‘ಭಾಷೆ ಸಮ್ಮಿಲನ ಮತ್ತು ಸಂಘರ್ಷ ಎರಡನ್ನೂ ಸೃಷ್ಟಿಸುತ್ತದೆ. ಭಾವೈಕ್ಯ ಮತ್ತು ಸಹೋದರತ್ವ ಬೆಳೆಸಿಕೊಂಡು ಭಾಷೆ ಬೆಳೆಸಬೇಕು’ ಎಂದು ಉಪನ್ಯಾಸಕಿ ಬಿ.ಕೆ. ಮಂಜುಳಾ<br />ತಿಳಿಸಿದರು.</p>.<p>ಡಾ.ದೊಡ್ಡರಂಗೇಗೌಡ ಕವಿಗೋಷ್ಠಿ ನಡೆಸಿಕೊಟ್ಟರು. ಬಿ.ಆರ್. ಲಕ್ಷ್ಮಣರಾವ್ ಅವರು ವೆಂಕೋಬರಾವ್ ಪಡತಾರೆ ರಚಿತ ‘ಚಂದ್ರಮ ತಾರೆ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಂಜುಳಾ ಪರಮೇಶ್ ತಂಡದಿಂದ ನೃತ್ಯ ಕಾರ್ಯಕ್ರಮ<br />ನಡೆಯಿತು.</p>.<p>ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮದಲ್ಲಿ ಗಾಯಕರಾದ ನಗರ ಶ್ರೀನಿವಾಸ ಉಡುಪ, ವೈ.ಕೆ. ಮುದ್ದುಕೃಷ್ಣ, ನರಸಿಂಹನಾಯಕ್, ನಾಗಚಂದ್ರಿಕಾ, ಸೀಮಾ ನಾಯ್ಕರ್, ಕವಿಗಳಾದ ದುಂಡಿರಾಜ್, ನಾ. ದಾಮೋದರಶೆಟ್ಟಿ, ಸುಕನ್ಯಾ ಮಾರುತಿ , ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ ಭಾಗವಹಿಸಿದ್ದರು. ಸಮೀರ್ ಖೆಸ್ಸ್ ಎಬಿನೇಜರ್, ಮಾಲಾ ಶ್ರೀವತ್ಸ, ತಹಶೀಲ್ದಾರ್ ಕೆ.ಎನ್. ಸುಜಾತಾ, ಆಯುಕ್ತ ನವೀನ್ ಚಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಜಿಎಫ್: ‘ರಾಷ್ಟ್ರಭಕ್ತಿ ಮತ್ತು ನಾಡ ಪ್ರೀತಿ ಪ್ರಾಧಿಕಾರದ ಮೂಲ ಧ್ಯೇಯವಾಗಿದೆ’ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ್ ಹೇಳಿದರು.</p>.<p>ಬೆಮಲ್ ಕಲಾ ಕ್ಷೇತ್ರದಲ್ಲಿ ಭಾನುವಾರ ಸುಗಮ ಸಂಗೀತ ಪರಿಷತ್, ಬೆಮಲ್ ಕನ್ನಡ ಮಿತ್ರರು, ಆಡಳಿತ ವರ್ಗ ಆಯೋಜಿಸಿದ್ದ ಅಮೃತ ಗೀತ ನೃತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.</p>.<p>ಭಾಷೆ ಕೇವಲ ಲಿಪಿಯಲ್ಲ. ಅದು ಅಂತರಂಗದ ಭಾವನೆಗಳ ಸಂದೇಶವಾಗಿದೆ. ಯಾವ ಭಾಷೆ ಮನೆಯಂಗಳದ ಭಾಷೆ ಆಗುವುದಿಲ್ಲವೋ, ಆ ಭಾಷೆ ನಾಡಿನ ಭಾಷೆ ಆಗಲು ಸಾಧ್ಯವಿಲ್ಲ. ಅದಕ್ಕೆ ಸಂಕಲ್ಪ ಬೇಕಾಗಿದೆ. ಇಂತಹ ಸಂಕಲ್ಪ ಕನ್ನಡಿಗರ ಶಕ್ತಿಯಾಗಬೇಕು. ಕನ್ನಡವನ್ನು ಮಾತನಾಡಿದರೆ ಕೀಳರಿಮೆ ಎಂಬ ಭಾವನೆ ಹೋಗಬೇಕು ಎಂದು ಹೇಳಿದರು.</p>.<p>ಗಡಿ ಪ್ರದೇಶದಲ್ಲಿ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೆಲಸಗಳ ಜೊತೆಗೆ ಗಡಿ ಪ್ರದೇಶಗಳ ಅಭಿವೃದ್ಧಿ ಕೆಲಸಗಳನ್ನು ಮೇಲ್ವಿಚಾರಣೆ ಮಾಡಲು ಪ್ರಾಧಿಕಾರಕ್ಕೆ ಸರ್ಕಾರ ಅಧಿಕಾರ ನೀಡಿದೆ. ಗಡಿನಾಡಿನಲ್ಲಿರುವ ವಿಭಿನ್ನ ಸಂಸ್ಕೃತಿಯ ಸಂಘರ್ಷದಲ್ಲಿ ಕನ್ನಡ ಮರೆಯಾಗಬಾರದು ಎಂಬ ಹಿನ್ನೆಲೆಯಲ್ಲಿ ಕನ್ನಡ ಕಾಯುವ ಕೆಲಸ ಮಾಡಲಾಗುತ್ತಿದೆ ಎಂದರು.</p>.<p>300 ಸಂಸ್ಥೆಗಳಿಗೆ ಕಾರ್ಯಕ್ರಮ ನಡೆಸಲು ಅನುಮತಿ ನೀಡಲಾಗಿದೆ. ಕನ್ನಡ ಮಿತ್ರರು ಸಂಸ್ಥೆಗೆ ಪ್ರತಿವರ್ಷ ₹ 1 ಲಕ್ಷ ಅನುದಾನ ನೀಡಲಾಗುತ್ತದೆ ಎಂದು ಹೇಳಿದರು.</p>.<p>ಗಡಿ ಭಾಗದಲ್ಲಿ ಕನ್ನಡದ ಕಿಚ್ಚು ಆರಬಾರದು. ಅನಾಥ ಪ್ರಜ್ಞೆ ಕಾಣಬಾರದು. ಈ ಹಿನ್ನೆಲೆಯಲ್ಲಿ ನ. 2 ಮತ್ತು 3 ರಂದು ಗಡಿನಾಡ ಉತ್ಸವವನ್ನು ಬೆಂಗಳೂರಿನಲ್ಲಿ ಆಚರಿಸಲಾಗುವುದು ಎಂದು ತಿಳಿಸಿದರು.</p>.<p>‘70 ಮತ್ತು 80ರ ದಶಕದಲ್ಲಿ ಸುಗಮ ಸಂಗೀತದ ಚಳವಳಿ ನಡೆಯಿತು. ಸುಗಮ ಸಂಗೀತ ಕವಿಯ ಭಾವನೆಯನ್ನು ಜನರಿಗೆ ನೇರವಾಗಿ ಮುಟ್ಟಿಸುತ್ತದೆ’ ಎಂದು ಬೆಮಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಈಶ್ವರ ಭಟ್ ಹೇಳಿದರು.</p>.<p>‘ಭಾಷೆ ಸಮ್ಮಿಲನ ಮತ್ತು ಸಂಘರ್ಷ ಎರಡನ್ನೂ ಸೃಷ್ಟಿಸುತ್ತದೆ. ಭಾವೈಕ್ಯ ಮತ್ತು ಸಹೋದರತ್ವ ಬೆಳೆಸಿಕೊಂಡು ಭಾಷೆ ಬೆಳೆಸಬೇಕು’ ಎಂದು ಉಪನ್ಯಾಸಕಿ ಬಿ.ಕೆ. ಮಂಜುಳಾ<br />ತಿಳಿಸಿದರು.</p>.<p>ಡಾ.ದೊಡ್ಡರಂಗೇಗೌಡ ಕವಿಗೋಷ್ಠಿ ನಡೆಸಿಕೊಟ್ಟರು. ಬಿ.ಆರ್. ಲಕ್ಷ್ಮಣರಾವ್ ಅವರು ವೆಂಕೋಬರಾವ್ ಪಡತಾರೆ ರಚಿತ ‘ಚಂದ್ರಮ ತಾರೆ’ ಪುಸ್ತಕವನ್ನು ಬಿಡುಗಡೆ ಮಾಡಿದರು. ಮಂಜುಳಾ ಪರಮೇಶ್ ತಂಡದಿಂದ ನೃತ್ಯ ಕಾರ್ಯಕ್ರಮ<br />ನಡೆಯಿತು.</p>.<p>ಕವಿಯ ನೋಡಿ ಕವಿತೆ ಕೇಳಿ ಕಾರ್ಯಕ್ರಮದಲ್ಲಿ ಗಾಯಕರಾದ ನಗರ ಶ್ರೀನಿವಾಸ ಉಡುಪ, ವೈ.ಕೆ. ಮುದ್ದುಕೃಷ್ಣ, ನರಸಿಂಹನಾಯಕ್, ನಾಗಚಂದ್ರಿಕಾ, ಸೀಮಾ ನಾಯ್ಕರ್, ಕವಿಗಳಾದ ದುಂಡಿರಾಜ್, ನಾ. ದಾಮೋದರಶೆಟ್ಟಿ, ಸುಕನ್ಯಾ ಮಾರುತಿ , ಕಿಕ್ಕೇರಿ ಕೃಷ್ಣಮೂರ್ತಿ, ಮೃತ್ಯುಂಜಯ ದೊಡ್ಡವಾಡ ಭಾಗವಹಿಸಿದ್ದರು. ಸಮೀರ್ ಖೆಸ್ಸ್ ಎಬಿನೇಜರ್, ಮಾಲಾ ಶ್ರೀವತ್ಸ, ತಹಶೀಲ್ದಾರ್ ಕೆ.ಎನ್. ಸುಜಾತಾ, ಆಯುಕ್ತ ನವೀನ್ ಚಂದ್ರ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>