ಮಹಾಭಾರತದಲ್ಲಿ ಕರ್ಣನು ಅರ್ಜುನನಿಂದ ಹತನಾದ ನಂತರ ದೇವದೂತರು ಆತನನ್ನು ಸ್ವರ್ಗಕ್ಕೆ ಕರೆದುಕೊಂಡು ಹೋಗುತ್ತಾರೆ. ಆಗ ಕರ್ಣನಿಗೆ ತಿನ್ನಲು ಏನೂ ಸಿಗುವುದಿಲ್ಲ. ಬೆಳ್ಳಿ, ಬಂಗಾರ ಮಾತ್ರ ಕಾಣುತ್ತದೆ. ಆಗ ಕರ್ಣ ಯಮನನ್ನು ಪ್ರಾರ್ಥಿಸಿದಾಗ ಯಮ ಪ್ರತ್ಯಕ್ಷವಾಗಿ ಭಾದ್ರಪದ ಮಾಸದ ದಿನಗಳಂದು ದಾನ ಮಾಡಿದರೆ ಒಳಿತು ಎಂದು ಸೂಚಿಸುತ್ತಾನೆ. ನಂತರ ಕರ್ಣ ಮತ್ತೆ ಭೂಮಿಗೆ ಬಂದು ಅನ್ನದಾನ, ವಸ್ತ್ರದಾನ ಮಾಡಿ ಪುನಃ ಸ್ವರ್ಗಕ್ಕೆ ವಾಪಸ್ ಹೋಗುತ್ತಾನೆ ಎಂಬ ಪ್ರತೀತಿ ಇದೆ.