
ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣದಲ್ಲಿ ಹಲವು ಕಾರ್ಖಾನೆಗಳಿವೆ. ಕೆಲವು ಕಾರ್ಖಾನೆಗಳಲ್ಲಿ ತ್ಯಾಜ್ಯ ನಿರ್ವಹಣೆ ಘಟಕಗಳು ಸ್ಥಾಪಿಸಿಲ್ಲ. ಹಾಗಾಗಿ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ರಾಸಾಯನಿಕ ನೀರು ಕಾಲುವೆ ಮೂಲಕ ಕೆರೆಗಳಿಗೆ ಸೇರಿದೆ. ನಂತರ ಕೊಳವೆಬಾವಿಗಳ ನೀರಿನಲ್ಲಿ ರಾಸಾಯನಿಕ ಮಿಶ್ರಿತವಾಗಿರುವುದು ನೀರಿನ ಪರೀಕ್ಷೆ ಮೂಲಕ ತಿಳಿದಿದೆ. ಯಾವ ಕಾರ್ಖಾನೆಯಿಂದ ರಾಸಾಯನಿಕ ತ್ಯಾಜ್ಯ ಬರುತ್ತಿದೆ ಎಂಬುದನ್ನು ಕಂಡು ಹಿಡಿಯಲು ಪಂಚಾಯಿತಿ ವತಿಯಿಂದ ಪರೀಕ್ಷೆಗೆ ಕಳುಹಿಸಲಾಗುವುದು. ಫಲಿತಾಂಶ ಬಂದ ನಂತರ ಕಾರ್ಖಾನೆ ಮೇಲೆ ಕ್ರಮ ಜರುಗಿಸಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.ಸುರೇಶ್ ಪಿಡಿಒ ನೊಸಗೆರೆ ಗ್ರಾಮ ಪಂಚಾಯಿತಿ
ಕೈಗಾರಿಕೆಗಳು ಯಾವುದೇ ರೀತಿಯ ತ್ಯಾಜ್ಯವನ್ನು ಹೊರಗಡೆ ಬಿಡಬಾರದು. ಹೊರಗಡೆ ಬಿಟ್ಟರೆ ಸಂಸ್ಕರಿಸಿ ಬಿಡಬೇಕು. ನಿಯಮ ಪಾಲಿಸದ ಕೆಲವು ಕಾರ್ಖಾನೆಗಳಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಹೀಗೆ ಮುಂದುವರೆದರೆ ಅವರ ಮೇಲೆ ಕ್ರಮ ಜರುಗಿಸಲು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ನೀಡಲಾಗುವುದು.ವಿನೋದ್ ಕುಮಾರ್ ಮೇಲ್ವಿಚಾರಕ ಕೆಐಎಡಿಬಿ ಮಾಲೂರು
ಕಲುಷಿತ ನೀರಿನಿಂದ ಬರಡಾದ ಭೂಮಿ ಎರಡು ವರ್ಷದಿಂದ ಹಾಕಿದ ಬೆಳೆ ಕೈಗೆ ಸಿಗದೆ ಸಾಲ ಹೆಚ್ಚಾಗಿದೆ. ಕೊಳವೆಬಾವಿಯಿಂದ ಬರುವ ನೀರನ್ನು ಬೆಳೆಗೆ ಹರಿಸುತ್ತಿದ್ದರೆ ಬೆಳೆ ಒಣಗುತ್ತಿದೆ. ಫಲವತ್ತಾದ ಭೂಮಿ ಕಲುಷಿತ ನೀರು ಹರಿಸಿದ್ದರಿಂದ ಬರಡು ಭೂಮಿಯಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ.ವೆಂಕಟೇಶ್ ಉಪವಸಪುರ ಗ್ರಾಮದ ರೈತ
ಕೂರಾಂಡಹಳ್ಳಿ ಕೈಗಾರಿಕಾ ಪ್ರಾಂಗಣ ವ್ಯಾಪ್ತಿಯ ಕೂರಂಡಹಳ್ಳಿ ಬ್ಯಾಲಹಳ್ಳಿ ಹುರಳಗೆರೆ ಉಪವಾಸಪುರ ಗ್ರಾಮದ ರೈತರ ಸ್ಥಿತಿ ಹೇಳತೀರದು. ಇರುವ ಭೂಮಿಯಲ್ಲಿ ಕೃಷಿ ಮಾಡುತ್ತಾ ಆರ್ಥಿಕವಾಗಿ ಉತ್ತಮವಾಗಿದ್ದ ರೈತರು ಕಾರ್ಖಾನೆಗಳ ರಾಸಾಯನಿಕ ತ್ಯಾಜ್ಯದ ಹಾವಳಿಯಿಂದ ರೈತರ ಕೈಗೆ ಬೆಳೆ ಸಿಗುತ್ತಿಲ್ಲ. ಹೀಗೆ ಮುಂದುವರೆದರೆ ನಾವೆಲ್ಲಾ ಗುಳೆ ಹೋಗಬೇಕಾಗುತ್ತದೆ.ಮುನಿರಾಜು ಕೂರಂಡಹಳ್ಳಿ ಗ್ರಾಮದ ರೈತ
ಮನೆ ಬಳಕೆಗೂ ನೀರು ಅನುಪಯುಕ್ತ ಕೊಳವೆಬಾವಿಗಳ ನೀರು ಮನೆ ಬಳಕೆಗೂ ಅನುಪಯುಕ್ತವಾಗಿದೆ. ಸ್ನಾನಕ್ಕೆ ಬಳಸಿದರೆ ಕೂದಲು ಉದರುತ್ತಿದೆ. ಬಟ್ಟೆ ತೊಳೆದರೆ ಹಳೆ ಬಟ್ಟೆಯಂತಾಗುತ್ತದೆ. ಹಾಗಾಗಿ ಇದರಿಂದ ನಮಗೆ ಮುಕ್ತಿ ಕೊಡಿಸಿಭಾಗ್ಯಮ್ಮ ಗೃಹಿಣಿ ಕೂರಾಂಡಹಳ್ಳಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.