<p><strong>ಬೇತಮಂಗಲ</strong>: ಗುಟ್ಟಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರಿಗೆ ನಿಗದಿತ ದಿನಕ್ಕೂ ಮೊದಲೇ ಹೆರಿಗೆ ಮಾಡಿಸಲು ಯತ್ನಿಸಿದ್ದು ಮಗು ಸಾವನ್ನಪ್ಪಿದೆ ಎಂದು ಗರ್ಭಿಣಿ ಪತಿ ಆರೋಪಿಸಿದ್ದಾರೆ. </p>.<p>ಕೋಡಿಹಳ್ಳಿ ರೂಪಾ-ಬಾಬು ದಂಪತಿ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಪರಿಶೀಲನೆಗೆ ಹೋಗಿದ್ದರು. ಅಶಾ ಕಾರ್ಯಕರ್ತೆ ಮತ್ತು ನರ್ಸ್ ಹೆರಿಗೆ ದಿನಾಂಕಕ್ಕೂ ಮುಂಚೆಯೇ ಹೆರಿಗೆ ಮಾಡಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.</p>.<p>ಆಶಾ ಕಾರ್ಯಕರ್ತೆ ಮತ್ತು ನರ್ಸ್ ಹಣದ ಆಸೆಯಿಂದ ಹೆರಿಗೆ ಮಾಡಿಸಲು ಒತ್ತಾಯಿಸಿದರು. ಸಾಮರ್ಥ್ಯ ಇಲ್ಲದಿದ್ದರೂ ಉನ್ನತ ಆಸ್ಪತ್ರೆಗೆ ಕಳುಹಿಸದೆ ಸ್ವಂತವಾಗಿ ಹೆರಿಗೆ ಮಾಡಲು ಪ್ರಯತ್ನಿಸಿದರು. ಇದರಿಂದಾಗಿ ಮಗು ಸತ್ತಿದೆ ಎಂದು ಬಾಬು ಎಂಬುವವರು ಆರೋಪಿಸಿದರು.</p>.<p>ಆರೋಗ್ಯ ಕೇಂದ್ರ ವೈದ್ಯೆ ನಾಗವೇಣಿ, ‘ನಾನು ಆ ದಿನ ಬೇರೋಂದು ಕಾರ್ಯದಲ್ಲಿದ್ದೆ. ನರ್ಸ್ ರೋಗಿಯನ್ನು ಬೇರೆಯೊಂದು ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ್ದಾರೆ. ಆದರೆ, ಮಗು ಸಾವಿಗೆ ನರ್ಸ್ ಕಾರಣ’ ಎಂದು ಗರ್ಭಿಣಿ ಸಂಬಂಧಿಕರು ದೂರಿದ್ದಾರೆ ಎಂದರು.</p>.<p>ಗ್ರಾಮದ ಮುಖಂಡ ಪ್ರವೀಣ್ ಕುಮಾರ್ ಮತ್ತು ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್, ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇತಮಂಗಲ</strong>: ಗುಟ್ಟಹಳ್ಳಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರಿಗೆ ನಿಗದಿತ ದಿನಕ್ಕೂ ಮೊದಲೇ ಹೆರಿಗೆ ಮಾಡಿಸಲು ಯತ್ನಿಸಿದ್ದು ಮಗು ಸಾವನ್ನಪ್ಪಿದೆ ಎಂದು ಗರ್ಭಿಣಿ ಪತಿ ಆರೋಪಿಸಿದ್ದಾರೆ. </p>.<p>ಕೋಡಿಹಳ್ಳಿ ರೂಪಾ-ಬಾಬು ದಂಪತಿ ಶುಕ್ರವಾರ ಆರೋಗ್ಯ ಕೇಂದ್ರಕ್ಕೆ ಪರಿಶೀಲನೆಗೆ ಹೋಗಿದ್ದರು. ಅಶಾ ಕಾರ್ಯಕರ್ತೆ ಮತ್ತು ನರ್ಸ್ ಹೆರಿಗೆ ದಿನಾಂಕಕ್ಕೂ ಮುಂಚೆಯೇ ಹೆರಿಗೆ ಮಾಡಿಸಲು ಯತ್ನಿಸಿದ್ದಾರೆ ಎಂದು ದೂರಲಾಗಿದೆ.</p>.<p>ಆಶಾ ಕಾರ್ಯಕರ್ತೆ ಮತ್ತು ನರ್ಸ್ ಹಣದ ಆಸೆಯಿಂದ ಹೆರಿಗೆ ಮಾಡಿಸಲು ಒತ್ತಾಯಿಸಿದರು. ಸಾಮರ್ಥ್ಯ ಇಲ್ಲದಿದ್ದರೂ ಉನ್ನತ ಆಸ್ಪತ್ರೆಗೆ ಕಳುಹಿಸದೆ ಸ್ವಂತವಾಗಿ ಹೆರಿಗೆ ಮಾಡಲು ಪ್ರಯತ್ನಿಸಿದರು. ಇದರಿಂದಾಗಿ ಮಗು ಸತ್ತಿದೆ ಎಂದು ಬಾಬು ಎಂಬುವವರು ಆರೋಪಿಸಿದರು.</p>.<p>ಆರೋಗ್ಯ ಕೇಂದ್ರ ವೈದ್ಯೆ ನಾಗವೇಣಿ, ‘ನಾನು ಆ ದಿನ ಬೇರೋಂದು ಕಾರ್ಯದಲ್ಲಿದ್ದೆ. ನರ್ಸ್ ರೋಗಿಯನ್ನು ಬೇರೆಯೊಂದು ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದ್ದಾರೆ. ಆದರೆ, ಮಗು ಸಾವಿಗೆ ನರ್ಸ್ ಕಾರಣ’ ಎಂದು ಗರ್ಭಿಣಿ ಸಂಬಂಧಿಕರು ದೂರಿದ್ದಾರೆ ಎಂದರು.</p>.<p>ಗ್ರಾಮದ ಮುಖಂಡ ಪ್ರವೀಣ್ ಕುಮಾರ್ ಮತ್ತು ಅಂಬೇಡ್ಕರ್ ಯುವ ವೇದಿಕೆ ಅಧ್ಯಕ್ಷ ಜೈಭೀಮ್ ಶ್ರೀನಿವಾಸ್, ಸಂಬಂಧಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>