<p>ಮುಳಬಾಗಿಲು: ‘ಕೋಲಾರ- ಚಿಕ್ಕಬಳ್ಳಾ ಪುರ ಜಿಲ್ಲೆಗಳಲ್ಲಿ ಕೋಲಾರ ಹಾಲು ಮಂಡಳಿ (ಕೋಚಿಮುಲ್) ಮತ್ತು ಡಿಸಿಸಿ ಬ್ಯಾಂಕ್ ರೈತರ ಪಾಲಿಗೆ ಎರಡು ಕಣ್ಣು ಗಳು’ ಎಂದು ಕೋಚಿಮುಲ್ ನಿದೇಶಕ ಕಾಡೇನಹಳ್ಳಿ ನಾಗರಾಜ್ ನುಡಿದರು.</p>.<p>ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.</p>.<p>‘ಸಹಕಾರಿ ಸಂಘ ಹುಟ್ಟುಹಾಕಿ ಬೆಳೆಸುವುದು ಕಷ್ಟದ ಕೆಲಸ. ಆದರೆ ಹಾಳು ಮಾಡುವುದು ಸುಲಭದ ಕೆಲಸ. ಇಂದು ಹಾಲು ಉತ್ಪಾದನೆ ಗಣನೀಯವಾಗಿ ಏರಿದ್ದರೂ ಕೋಚಿಮುಲ್ ರೈತರಿಂದ ಹಾಲು ಪಡೆಯುತ್ತಿದೆ. ಬ್ಯಾಂಕ್ಗಳಿಂದ ಓಓಡಿ ರೂಪದಲ್ಲಿ ₹70 ಕೋಟಿ ಪಡೆದು ರೈತರಿಂದ ಪಡೆದ ಹಾಲಿಗೆ ಹಣ ನೀಡುತ್ತಿದೆ. ಹಾಲನ್ನು ಒಂದು ದಿನದ ಮೇಲೆ ಶೇಖರಿಸಲು ಕಾರಣ ಸಾಧ್ಯವಿಲ್ಲದ ಕಾರಣ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಸುಮಾರು ₹175 ಕೋಟಿಗಳಷ್ಟು ಹಾಲಿನ ಉತ್ಪನ್ನಗಳು ಕೋಲಾರ ಒಕ್ಕೂಟದಲ್ಲಿ ಶೇಖರವಾಗಿದೆ’ ಎಂದರು.</p>.<p>‘ಕೋಚಿಮುಲ್ಗೆ ಖಾಸಗಿ ಹಾಲು ಸಂಸ್ಥೆಗಳು ಪೈಪೋಟಿ ನೀಡುತ್ತಿದೆ. ಆದರೂ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಖಾಸಗಿ ಹಾಲು ಸಂಸ್ಥೆಗಳು ಹಾಲಿಗೆ ದ್ರವಗಳನ್ನು ಸೇರಿಸಿ ಗ್ರಾಹಕರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಕೋಚಿಮುಲ್ ಹಾಲು ಉತ್ಪಾದಕರ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ’ ಎಂದರು.</p>.<p>ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ ಮಾತನಾಡಿ, ‘ನೆಹರೂ ಕೋರಿಕೆಯ ಮೇರೆಗೆ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆ ಮತ್ತು ಸಹಕಾರ ಸಪ್ತಾಹವಾಗಿ ಆಚರಿಸಲಾಗುತ್ತಿದೆ’ ಎಂದರು.</p>.<p>ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವಿ.ರಘುಪತಿರೆಡ್ಡಿ ಮಾತನಾಡಿ, ‘ಸಹಕಾರ ಸಂಘದ ಮೂಲಕ ಅನೇಕ ಮಂದಿ ಮುಖಂಡರು ಹುಟ್ಟಿ ಕೊಂಡಿದ್ದಾರೆ. ಚುನಾವಣೆಗೆ ಮಾತ್ರ ಸಹಕಾರಿ ರಂಗವನ್ನು ಉಪಯೋಗಿಸಿ ಕೊಳ್ಳಬೇಕು. ನಂತರ ಸಂಘದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು’ ಎಂದರು.</p>.<p>ಒಕ್ಕೂಟದ ನಿರ್ದೇಶಕಿ ಆರ್.ಅರುಣಾ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಮಾತನಾಡಿದರು. ತಾಲ್ಲೂಕು ಭೂ ಬ್ಯಾಂಕ್ ನಿರ್ದೇಶಕ ಗೊಲ್ಲಹಳ್ಳಿ ಸತೀಶ್, ಹಿರಿಯ ಸಹಕಾರಿ ಎಂ.ನಂಜುಂಡಪ್ಪ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಶ್ರೀರಾಮ್, ಕೃಷ್ಣಪ್ಪ, ಶ್ರೀನಿವಾಸಗೌಡ, ರವಿಕುಮಾರ್, ಆನಂದ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮುಳಬಾಗಿಲು: ‘ಕೋಲಾರ- ಚಿಕ್ಕಬಳ್ಳಾ ಪುರ ಜಿಲ್ಲೆಗಳಲ್ಲಿ ಕೋಲಾರ ಹಾಲು ಮಂಡಳಿ (ಕೋಚಿಮುಲ್) ಮತ್ತು ಡಿಸಿಸಿ ಬ್ಯಾಂಕ್ ರೈತರ ಪಾಲಿಗೆ ಎರಡು ಕಣ್ಣು ಗಳು’ ಎಂದು ಕೋಚಿಮುಲ್ ನಿದೇಶಕ ಕಾಡೇನಹಳ್ಳಿ ನಾಗರಾಜ್ ನುಡಿದರು.</p>.<p>ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ವತಿಯಿಂದ ಭಾನುವಾರ ಆಯೋಜಿಸಿದ್ದ 67ನೇ ಅಖಿಲ ಭಾರತ ಸಹಕಾರ ಸಪ್ತಾಹ-2020 ಕಾರ್ಯಕ್ರಮ ಉದ್ಫಾಟಿಸಿ ಅವರು ಮಾತನಾಡಿದರು.</p>.<p>‘ಸಹಕಾರಿ ಸಂಘ ಹುಟ್ಟುಹಾಕಿ ಬೆಳೆಸುವುದು ಕಷ್ಟದ ಕೆಲಸ. ಆದರೆ ಹಾಳು ಮಾಡುವುದು ಸುಲಭದ ಕೆಲಸ. ಇಂದು ಹಾಲು ಉತ್ಪಾದನೆ ಗಣನೀಯವಾಗಿ ಏರಿದ್ದರೂ ಕೋಚಿಮುಲ್ ರೈತರಿಂದ ಹಾಲು ಪಡೆಯುತ್ತಿದೆ. ಬ್ಯಾಂಕ್ಗಳಿಂದ ಓಓಡಿ ರೂಪದಲ್ಲಿ ₹70 ಕೋಟಿ ಪಡೆದು ರೈತರಿಂದ ಪಡೆದ ಹಾಲಿಗೆ ಹಣ ನೀಡುತ್ತಿದೆ. ಹಾಲನ್ನು ಒಂದು ದಿನದ ಮೇಲೆ ಶೇಖರಿಸಲು ಕಾರಣ ಸಾಧ್ಯವಿಲ್ಲದ ಕಾರಣ ಹಾಲನ್ನು ಪುಡಿಯಾಗಿ ಪರಿವರ್ತಿಸಲಾಗುತ್ತಿದೆ. ಸುಮಾರು ₹175 ಕೋಟಿಗಳಷ್ಟು ಹಾಲಿನ ಉತ್ಪನ್ನಗಳು ಕೋಲಾರ ಒಕ್ಕೂಟದಲ್ಲಿ ಶೇಖರವಾಗಿದೆ’ ಎಂದರು.</p>.<p>‘ಕೋಚಿಮುಲ್ಗೆ ಖಾಸಗಿ ಹಾಲು ಸಂಸ್ಥೆಗಳು ಪೈಪೋಟಿ ನೀಡುತ್ತಿದೆ. ಆದರೂ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಬರಲಾಗುತ್ತಿದೆ. ಖಾಸಗಿ ಹಾಲು ಸಂಸ್ಥೆಗಳು ಹಾಲಿಗೆ ದ್ರವಗಳನ್ನು ಸೇರಿಸಿ ಗ್ರಾಹಕರ ಆರೋಗ್ಯಕ್ಕೆ ಕುತ್ತು ತರುತ್ತಿದೆ. ಕೋಚಿಮುಲ್ ಹಾಲು ಉತ್ಪಾದಕರ ಮತ್ತು ಗ್ರಾಹಕರ ಹಿತ ದೃಷ್ಟಿಯಿಂದ ಕಾರ್ಯನಿರ್ವಹಿಸುತ್ತಿದೆ’ ಎಂದರು.</p>.<p>ತಾಲ್ಲೂಕು ಟಿಎಪಿಸಿಎಂಎಸ್ ಅಧ್ಯಕ್ಷ ಆಲಂಗೂರು ಶಿವಣ್ಣ ಮಾತನಾಡಿ, ‘ನೆಹರೂ ಕೋರಿಕೆಯ ಮೇರೆಗೆ ಅವರ ಜನ್ಮದಿನಾಚರಣೆಯನ್ನು ಮಕ್ಕಳ ದಿನಾಚರಣೆ ಮತ್ತು ಸಹಕಾರ ಸಪ್ತಾಹವಾಗಿ ಆಚರಿಸಲಾಗುತ್ತಿದೆ’ ಎಂದರು.</p>.<p>ಕೋಲಾರ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ವಿ.ರಘುಪತಿರೆಡ್ಡಿ ಮಾತನಾಡಿ, ‘ಸಹಕಾರ ಸಂಘದ ಮೂಲಕ ಅನೇಕ ಮಂದಿ ಮುಖಂಡರು ಹುಟ್ಟಿ ಕೊಂಡಿದ್ದಾರೆ. ಚುನಾವಣೆಗೆ ಮಾತ್ರ ಸಹಕಾರಿ ರಂಗವನ್ನು ಉಪಯೋಗಿಸಿ ಕೊಳ್ಳಬೇಕು. ನಂತರ ಸಂಘದ ಅಭಿವೃದ್ಧಿಗೆ ತೊಡಗಿಸಿಕೊಳ್ಳಬೇಕು’ ಎಂದರು.</p>.<p>ಒಕ್ಕೂಟದ ನಿರ್ದೇಶಕಿ ಆರ್.ಅರುಣಾ, ಒಕ್ಕೂಟದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ಭಾರತಿ ಮಾತನಾಡಿದರು. ತಾಲ್ಲೂಕು ಭೂ ಬ್ಯಾಂಕ್ ನಿರ್ದೇಶಕ ಗೊಲ್ಲಹಳ್ಳಿ ಸತೀಶ್, ಹಿರಿಯ ಸಹಕಾರಿ ಎಂ.ನಂಜುಂಡಪ್ಪ, ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಉಪ ವ್ಯವಸ್ಥಾಪಕ ಶ್ರೀಧರಮೂರ್ತಿ, ಶ್ರೀರಾಮ್, ಕೃಷ್ಣಪ್ಪ, ಶ್ರೀನಿವಾಸಗೌಡ, ರವಿಕುಮಾರ್, ಆನಂದ್ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>