‘ಸ್ನೇಹಿತರು, ಮತದಾರರ ಒತ್ತಾಯದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಸ್ಪರ್ಧಿಸಲು ನಿರ್ಧರಿಸಿದ್ದೆ. ಜಾತಿ, ಹಣದ ಪ್ರಭಾವ ಮೀರಿ ನನ್ನ ಹಿರಿತನ, ಅನುಭವ, ಸಂಘಟನಾ ಸೇವೆ ಗಮನಿಸುವ ಜವಾಬ್ದಾರಿ ಪಕ್ಷದ ಮುಖಂಡರಿಗಿತ್ತು. ಆದರೆ, ಆ ರೀತಿ ಆಗಲಿಲ್ಲ. ಅನಿಲ್ಕುಮಾರ್ ಹಿಂದೆಯೂ ಗೊಂದಲದಿಂದ ಸೋತಿದ್ದಾರೆ. ಮತ್ತೆ ಆ ರೀತಿ ಆಗಬಾರದು, ಜಿಲ್ಲೆಯಲ್ಲಿ ಪಕ್ಷದ ಗೊಂದಲ ನಿವಾರಣೆಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಸುರ್ಜೇವಾಲ ಗಮನ ಹರಿಸಬೇಕು’ ಎಂದರು.