<p><strong>ಮುಳಬಾಗಿಲು</strong>: ಸಂಪ್ರದಾಯದಂತೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಬೇವು-ಬೆಲ್ಲ ಸವಿದು ಹಾಗೂ ಹೊಸಬಟ್ಟೆ ತೊಟ್ಟು ಸಡಗರದಿಂದ ಆಚರಿಸುವುದು ರೂಢಿ. ಆದರೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಕೆಲವು ದಲಿತ ಕುಟುಂಬಗಳು ಹಬ್ಬ ಆಚರಣೆ ಮಾಡದೆ ಇರುವುದು ವಿಶೇಷ.</p>.<p>ಹಿಂದೆ ಯಾವುದೊ ಕಾರಣಕ್ಕಾಗಿ ಪೂರ್ವಿಕರು ಯುಗಾದಿ ಹಬ್ಬವನ್ನು ಸ್ವಯಂ ಪ್ರೇರಿತವಾಗಿ ಆಚರಣೆ ಮಾಡಿಲ್ಲ, ಆ ಸಂಪ್ರದಾಯ ಹಾಗೇ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮದ ಎಪ್ಪತ್ತು ವರ್ಷದ ವೆಂಕಟಪ್ಪ, ಅವರ ಪ್ರಕಾರ, ಪರಿಶಿಷ್ಟ ಜಾತಿಯ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಹಬ್ಬ ಆಚರಿಸುವುದಿಲ್ಲ. ಬೇರೆ ಕಡೆಯಿಂದ ವಲಸೆ ಬಂದು ನೆಲೆನಿಂತವರು ಆಚರಿಸುತ್ತಾರೆ.</p>.<p>ಸುಮಾರು ವರ್ಷಗಳ ಹಿಂದೆ ಯುಗಾದಿ ಹಬ್ಬದಂದು ಗೂಳಿಯೊಂದು ಬೆಟ್ಟದ ತಪ್ಪಲಿನಲ್ಲಿ ಕುಡಿಯಲು ನೀರು ತರಲು ಹೋದ ದಲಿತ ಸಮುದಾಯದ ಗರ್ಭಿಣಿ ಮೇಲೆ ದಾಳಿ ಮಾಡಿತಂತೆ. ಮಹಿಳೆ ದಾಳಿಯಿಂದ ಮೃತಪಟ್ಟ, ಕೆಲ ಹೊತ್ತಿನಲ್ಲಿಯೇ ಆ ಗೂಳಿ ಕೂಡ ಇದ್ದಕ್ಕಿದಂತೆ ಸಾವಿಗೀಡಾಯಿತಂತೆ. ಈ ಹಿನ್ನಲೆಯಲ್ಲಿ ಹಬ್ಬವನ್ನು ಆಚರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ವೆಂಕಟೇಶಯ್ಯ.</p>.<p>ಗರ್ಭಿಣಿ ಮೃತಪಟ್ಟ ಮರುವರ್ಷ ಪರಿಶಿಷ್ಟ ಜಾತಿಯ ಕುಟುಂಬದವರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದರಂತೆ. ಇದ್ದಕ್ಕಿದಂತೆ ಕೆಲವು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಬಟ್ಟೆ, ದವಸ, ಧಾನ್ಯ, ಗುಡಿಸಲು ಸುಟ್ಟು ಹೋದವಂತೆ.<br />ಭಯಭೀತರಾದ ಆ ಕುಟುಂಬದವರೂ ಹಾಗೂ ಅವರ ಹತ್ತಿರ<br />ಸಂಬಂಧಿಗಳು ಹಬ್ಬವನ್ನು ಆಚರಿಸುವುದು ಬಿಟ್ಟರು ಎಂಬ ಹಿನ್ನಲೆಯಿದೆ ಎನ್ನುತ್ತಾರೆ ದಲಿತ ಕುಟುಂಬ ಸದಸ್ಯರು.</p>.<p>ಹಬ್ಬಕ್ಕೂ ಮುಂಚೆ ಮನೆಗೆ ಸಗಣಿಯಿಂದ ಪಟ್ಟಿ ಎಳೆಯುವುದರ ಮೂಲಕ ಹಬ್ಬವನ್ನು ಆಚರಿಸುವುದಿಲ್ಲ ಎಂಬುದನ್ನು ಸೂಚಿಸಲಾಗುತ್ತದೆ. ಆದರೆ ರಾಮನವಮಿ ದಿವಸದಂದು ಯುಗಾದಿ ಹಬ್ಬವನ್ನು ಆದರಿಸಲಾಗುತ್ತದೆ. ಹೀಗೆ ಸುಮಾರು ಇನ್ನೂರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಹಿಂದಿನ ಹಲವಾರು ಕಠಿಣವಾದ ಕಟ್ಟುಪಾಡುಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮುನಿಯಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಳಬಾಗಿಲು</strong>: ಸಂಪ್ರದಾಯದಂತೆ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಬೇವು-ಬೆಲ್ಲ ಸವಿದು ಹಾಗೂ ಹೊಸಬಟ್ಟೆ ತೊಟ್ಟು ಸಡಗರದಿಂದ ಆಚರಿಸುವುದು ರೂಢಿ. ಆದರೆ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ ಕೆಲವು ದಲಿತ ಕುಟುಂಬಗಳು ಹಬ್ಬ ಆಚರಣೆ ಮಾಡದೆ ಇರುವುದು ವಿಶೇಷ.</p>.<p>ಹಿಂದೆ ಯಾವುದೊ ಕಾರಣಕ್ಕಾಗಿ ಪೂರ್ವಿಕರು ಯುಗಾದಿ ಹಬ್ಬವನ್ನು ಸ್ವಯಂ ಪ್ರೇರಿತವಾಗಿ ಆಚರಣೆ ಮಾಡಿಲ್ಲ, ಆ ಸಂಪ್ರದಾಯ ಹಾಗೇ ಮುಂದುವರಿದುಕೊಂಡು ಬಂದಿದೆ ಎನ್ನುತ್ತಾರೆ ಗ್ರಾಮದ ಎಪ್ಪತ್ತು ವರ್ಷದ ವೆಂಕಟಪ್ಪ, ಅವರ ಪ್ರಕಾರ, ಪರಿಶಿಷ್ಟ ಜಾತಿಯ ಮೂವತ್ತಕ್ಕೂ ಹೆಚ್ಚು ಕುಟುಂಬಗಳು ಹಬ್ಬ ಆಚರಿಸುವುದಿಲ್ಲ. ಬೇರೆ ಕಡೆಯಿಂದ ವಲಸೆ ಬಂದು ನೆಲೆನಿಂತವರು ಆಚರಿಸುತ್ತಾರೆ.</p>.<p>ಸುಮಾರು ವರ್ಷಗಳ ಹಿಂದೆ ಯುಗಾದಿ ಹಬ್ಬದಂದು ಗೂಳಿಯೊಂದು ಬೆಟ್ಟದ ತಪ್ಪಲಿನಲ್ಲಿ ಕುಡಿಯಲು ನೀರು ತರಲು ಹೋದ ದಲಿತ ಸಮುದಾಯದ ಗರ್ಭಿಣಿ ಮೇಲೆ ದಾಳಿ ಮಾಡಿತಂತೆ. ಮಹಿಳೆ ದಾಳಿಯಿಂದ ಮೃತಪಟ್ಟ, ಕೆಲ ಹೊತ್ತಿನಲ್ಲಿಯೇ ಆ ಗೂಳಿ ಕೂಡ ಇದ್ದಕ್ಕಿದಂತೆ ಸಾವಿಗೀಡಾಯಿತಂತೆ. ಈ ಹಿನ್ನಲೆಯಲ್ಲಿ ಹಬ್ಬವನ್ನು ಆಚರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮದ ವೆಂಕಟೇಶಯ್ಯ.</p>.<p>ಗರ್ಭಿಣಿ ಮೃತಪಟ್ಟ ಮರುವರ್ಷ ಪರಿಶಿಷ್ಟ ಜಾತಿಯ ಕುಟುಂಬದವರು ಹಬ್ಬದ ಆಚರಣೆಗೆ ಸಿದ್ಧತೆ ನಡೆಸುತ್ತಿದ್ದರಂತೆ. ಇದ್ದಕ್ಕಿದಂತೆ ಕೆಲವು ಮನೆಗಳಲ್ಲಿ ಬೆಂಕಿ ಕಾಣಿಸಿಕೊಂಡು ಬಟ್ಟೆ, ದವಸ, ಧಾನ್ಯ, ಗುಡಿಸಲು ಸುಟ್ಟು ಹೋದವಂತೆ.<br />ಭಯಭೀತರಾದ ಆ ಕುಟುಂಬದವರೂ ಹಾಗೂ ಅವರ ಹತ್ತಿರ<br />ಸಂಬಂಧಿಗಳು ಹಬ್ಬವನ್ನು ಆಚರಿಸುವುದು ಬಿಟ್ಟರು ಎಂಬ ಹಿನ್ನಲೆಯಿದೆ ಎನ್ನುತ್ತಾರೆ ದಲಿತ ಕುಟುಂಬ ಸದಸ್ಯರು.</p>.<p>ಹಬ್ಬಕ್ಕೂ ಮುಂಚೆ ಮನೆಗೆ ಸಗಣಿಯಿಂದ ಪಟ್ಟಿ ಎಳೆಯುವುದರ ಮೂಲಕ ಹಬ್ಬವನ್ನು ಆಚರಿಸುವುದಿಲ್ಲ ಎಂಬುದನ್ನು ಸೂಚಿಸಲಾಗುತ್ತದೆ. ಆದರೆ ರಾಮನವಮಿ ದಿವಸದಂದು ಯುಗಾದಿ ಹಬ್ಬವನ್ನು ಆದರಿಸಲಾಗುತ್ತದೆ. ಹೀಗೆ ಸುಮಾರು ಇನ್ನೂರು ವರ್ಷಗಳಿಂದ ಮಾಡಿಕೊಂಡು ಬರಲಾಗುತ್ತಿದೆ. ಹಿಂದಿನ ಹಲವಾರು ಕಠಿಣವಾದ ಕಟ್ಟುಪಾಡುಗಳನ್ನು ಬದಲಾಯಿಸಿಕೊಳ್ಳಲಾಗಿದೆ ಎನ್ನುತ್ತಾರೆ ಮುನಿಯಪ್ಪ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>