<p>ಕೋಲಾರ: ‘ವಾಣಿಜ್ಯ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟರೆ ಜನರ ಹಣವನ್ನು ದೇಶ ಬಿಟ್ಟು ಹೋಗೋರಿಗೆ ನೀಡಿ ಮುಳುಗಿಸುತ್ತಾರೆ. ಆದರೆ, ಸಹಕಾರ ಬ್ಯಾಂಕ್ಗಳು ಜನರ ಹಣವನ್ನು ಸ್ಥಳೀಯ ಸಮುದಾಯದ ಆರ್ಥಿಕ ಸದೃಢತೆಗೆ ಮಾತ್ರ ಬಳಸುತ್ತವೆ’ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.</p>.<p>ಇಲ್ಲಿ ಬುಧವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಹಕಾರ ಕ್ಷೇತ್ರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸಬಹುದು. ಸಾಲ ಮನ್ನಾ, ಸಬ್ಸಿಡಿ, ಸಾಲ ಸಿಗುವುದು ಸಹಕಾರಿ ಬ್ಯಾಂಕ್ಗಳಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.</p>.<p>‘ಭಾರತೀಯ ರಿಸರ್ವ್ ಬ್ಯಾಂಕ್ನವರು ಖಾಸಗಿ ಬ್ಯಾಂಕ್ಗಳನ್ನು ನಿಷ್ಕ್ರೀಯ ಆಸ್ತಿ ಮೌಲ್ಯದಿಂದ (ಎನ್ಪಿಎ) ತಪ್ಪಿಸಲು ಹಣದ ನೆರವು ನೀಡಿದರು. ಆದರೆ, ಸಹಕಾರಿ ಬ್ಯಾಂಕ್ಗಳಿಗೆ ಹಣಕಾಸು ನೆರವು ನೀಡದೆ ಎನ್ಪಿಎ ಅಡಿಗೆ ತಂದರು. ಆದರೂ ಸಹಕಾರಿ ಬ್ಯಾಂಕ್ಗಳು ಆರ್ಥಿಕವಾಗಿ ಮುಂಚೂಣಿಯಲ್ಲಿವೆ’ ಎಂದರು.</p>.<p>‘ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟ ಹಣ ಎಂದಿಗೂ ಹಾಳಾಗಲ್ಲ. ಆ ಹಣ ರೈತರು, ಮಹಿಳೆಯರಿಗೆ ನೆರವಾಗಿ ಸಿಗುತ್ತದೆ. ರೈತರು ಮತ್ತು ಮಹಿಳೆಯರು ಇನ್ನಾದರು ಜಾಗೃತರಾಗಿ ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟು ವಹಿವಾಟು ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಬ್ಯಾಂಕ್ಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಚುನಾವಣಾ ರಾಜಕೀಯ ಸಹಕಾರ ರಂಗದಲ್ಲಿ ನುಸುಳಬಾರದು. ಮಹಿಳೆಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕ್ಗಳಿಗೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.</p>.<p>‘ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಖಾಸಗಿಯವರಿಗೆ ಪರವಾನಗಿ ನೀಡಿದರೆ ಅವರು ಮತ್ತೆ ಫಾರ್ಮಸಿ ಮಾಫಿಯಾ ಬಳಸಿ ಜನರನ್ನು ವಂಚಿಸುತ್ತಾರೆ. ಈ ಕಾರಣಕ್ಕೆ ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಸಹಕಾರ ಸಂಘಗಳಿಗೆ ಅವಕಾಶ ಕಲ್ಪಿಸುತ್ತಿದ್ದೇವೆ’ ಎಂದು ವಿವರಿಸಿದರು.</p>.<p>ತೃಪ್ತಿಯಿದೆ: ‘ಸಹಕಾರಿ ರಂಗಕ್ಕೆ ಕಳಂಕ ಬಾರದಂತೆ ಬ್ಯಾಂಕ್ನ ಆಡಳಿತ ಮಂಡಳಿ ಕೆಲಸ ಮಾಡಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕನ್ನು ಉಳಿಸಿದ ತೃಪ್ತಿಯಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.</p>.<p>‘ಡಿಸಿಸಿ ಬ್ಯಾಂಕ್ನ ಸಾಧನೆಯಿಂದ ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇದೀಗ ಅವಳಿ ಜಿಲ್ಲೆಯ ಸೊಸೈಟಿಕಗಳ ಮೂಲಕ ಜನರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಬ್ಯಾಂಕ್ ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಆಶಯ ಹೊಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೋಲಾರ: ‘ವಾಣಿಜ್ಯ ಬ್ಯಾಂಕ್ಗಳಲ್ಲಿ ಠೇವಣಿ ಇಟ್ಟರೆ ಜನರ ಹಣವನ್ನು ದೇಶ ಬಿಟ್ಟು ಹೋಗೋರಿಗೆ ನೀಡಿ ಮುಳುಗಿಸುತ್ತಾರೆ. ಆದರೆ, ಸಹಕಾರ ಬ್ಯಾಂಕ್ಗಳು ಜನರ ಹಣವನ್ನು ಸ್ಥಳೀಯ ಸಮುದಾಯದ ಆರ್ಥಿಕ ಸದೃಢತೆಗೆ ಮಾತ್ರ ಬಳಸುತ್ತವೆ’ ಎಂದು ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.</p>.<p>ಇಲ್ಲಿ ಬುಧವಾರ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಿಇಒಗಳ ತರಬೇತಿ ಕಾರ್ಯಾಗಾರದಲ್ಲಿ ಮಾತನಾಡಿ, ‘ಸಹಕಾರ ಕ್ಷೇತ್ರದಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸೌಲಭ್ಯ ಕಲ್ಪಿಸಬಹುದು. ಸಾಲ ಮನ್ನಾ, ಸಬ್ಸಿಡಿ, ಸಾಲ ಸಿಗುವುದು ಸಹಕಾರಿ ಬ್ಯಾಂಕ್ಗಳಿಂದ ಮಾತ್ರ’ ಎಂದು ಅಭಿಪ್ರಾಯಪಟ್ಟರು.</p>.<p>‘ಭಾರತೀಯ ರಿಸರ್ವ್ ಬ್ಯಾಂಕ್ನವರು ಖಾಸಗಿ ಬ್ಯಾಂಕ್ಗಳನ್ನು ನಿಷ್ಕ್ರೀಯ ಆಸ್ತಿ ಮೌಲ್ಯದಿಂದ (ಎನ್ಪಿಎ) ತಪ್ಪಿಸಲು ಹಣದ ನೆರವು ನೀಡಿದರು. ಆದರೆ, ಸಹಕಾರಿ ಬ್ಯಾಂಕ್ಗಳಿಗೆ ಹಣಕಾಸು ನೆರವು ನೀಡದೆ ಎನ್ಪಿಎ ಅಡಿಗೆ ತಂದರು. ಆದರೂ ಸಹಕಾರಿ ಬ್ಯಾಂಕ್ಗಳು ಆರ್ಥಿಕವಾಗಿ ಮುಂಚೂಣಿಯಲ್ಲಿವೆ’ ಎಂದರು.</p>.<p>‘ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟ ಹಣ ಎಂದಿಗೂ ಹಾಳಾಗಲ್ಲ. ಆ ಹಣ ರೈತರು, ಮಹಿಳೆಯರಿಗೆ ನೆರವಾಗಿ ಸಿಗುತ್ತದೆ. ರೈತರು ಮತ್ತು ಮಹಿಳೆಯರು ಇನ್ನಾದರು ಜಾಗೃತರಾಗಿ ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿಯಿಟ್ಟು ವಹಿವಾಟು ನಡೆಸಬೇಕು’ ಎಂದು ಸಲಹೆ ನೀಡಿದರು.</p>.<p>‘ಇತ್ತೀಚಿನ ವರ್ಷಗಳಲ್ಲಿ ಸಹಕಾರಿ ಬ್ಯಾಂಕ್ಗಳು ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ. ಚುನಾವಣಾ ರಾಜಕೀಯ ಸಹಕಾರ ರಂಗದಲ್ಲಿ ನುಸುಳಬಾರದು. ಮಹಿಳೆಯರು ಪ್ರಾಮಾಣಿಕವಾಗಿ ಸಾಲ ಮರುಪಾವತಿಸುವ ಮೂಲಕ ಬ್ಯಾಂಕ್ಗಳಿಗೆ ಶಕ್ತಿ ತುಂಬಬೇಕು’ ಎಂದು ಮನವಿ ಮಾಡಿದರು.</p>.<p>‘ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಖಾಸಗಿಯವರಿಗೆ ಪರವಾನಗಿ ನೀಡಿದರೆ ಅವರು ಮತ್ತೆ ಫಾರ್ಮಸಿ ಮಾಫಿಯಾ ಬಳಸಿ ಜನರನ್ನು ವಂಚಿಸುತ್ತಾರೆ. ಈ ಕಾರಣಕ್ಕೆ ಜನರಿಕ್ ಔಷಧ ಮಳಿಗೆಗಳ ಸ್ಥಾಪನೆಗೆ ಸಹಕಾರ ಸಂಘಗಳಿಗೆ ಅವಕಾಶ ಕಲ್ಪಿಸುತ್ತಿದ್ದೇವೆ’ ಎಂದು ವಿವರಿಸಿದರು.</p>.<p>ತೃಪ್ತಿಯಿದೆ: ‘ಸಹಕಾರಿ ರಂಗಕ್ಕೆ ಕಳಂಕ ಬಾರದಂತೆ ಬ್ಯಾಂಕ್ನ ಆಡಳಿತ ಮಂಡಳಿ ಕೆಲಸ ಮಾಡಿದೆ. ಆರ್ಥಿಕವಾಗಿ ದಿವಾಳಿಯಾಗಿದ್ದ ಬ್ಯಾಂಕನ್ನು ಉಳಿಸಿದ ತೃಪ್ತಿಯಿದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ಹೇಳಿದರು.</p>.<p>‘ಡಿಸಿಸಿ ಬ್ಯಾಂಕ್ನ ಸಾಧನೆಯಿಂದ ಅವಿಭಜಿತ ಕೋಲಾರ ಜಿಲ್ಲೆಯ ರೈತರು, ಮಹಿಳೆಯರು ಆರ್ಥಿಕವಾಗಿ ಸಬಲರಾಗಿದ್ದಾರೆ. ಇದೀಗ ಅವಳಿ ಜಿಲ್ಲೆಯ ಸೊಸೈಟಿಕಗಳ ಮೂಲಕ ಜನರಿಕ್ ಔಷಧ ಮಳಿಗೆಗಳನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ ಬ್ಯಾಂಕ್ ಆರೋಗ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸುವ ಆಶಯ ಹೊಂದಿದೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>