ನಗರ ಠಾಣೆ ಇನ್ ಸ್ಪೆಕ್ಟರ್ ಶಿವಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ‘ರಸ್ತೆಯಲ್ಲಿ ಮಲಗುವ ಅನಾಥ ಮಹಿಳೆಯನ್ನು ಹಲವು ಬಾರಿ ಅಂಬುಲೆನ್ಸ್ ಮೂಲಕ ಬೇರೆಡೆಗೆ ಕಳುಹಿಸುವ ವ್ಯವಸ್ಥೆ ಮಾಡಿದರೂ ಮತ್ತೆ ರಸ್ತೆ ಬದಿಗೆ ಬಂದು ಮಲಗುತ್ತಿದ್ದಾರೆ. ಸರ್ಕಾರೇತರ ಸಂಸ್ಥೆ ಮಹಿಳೆ ನೆರವಿಗೆ ಮುಂದಾಗಬೇಕಾಗಿದೆ’ ಎಂದು ಹೇಳಿದರು.