ಮುಳಬಾಗಿಲು: ‘ಶ್ರೀಸಾಮಾನ್ಯರ ಆರ್ಥಿಕ ಚಟುವಟಿಕೆ ಅಭಿವೃದ್ಧಿಗೊಳ್ಳಲು ಸರ್ಕಾರವು ಆರ್ಬಿಐ ಮೂಲಕ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದರ ಸದುಪಯೋಗ ಪಡೆದು ಕೊಳ್ಳಬೇಕು’ ಎಂದು ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಪಿಚ್ಚಯ್ಯ ರಾಯಪುರ್ ಸಲಹೆ ನೀಡಿದರು.
ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾ.ಪಂ. ಕಾರ್ಯಾಲಯ ದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರಿಗೆ ಆರ್ಬಿಐ ಜನಸುರಕ್ಷಾ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆನರಾ ಬ್ಯಾಂಕ್ ಆರ್ಥಿಕ ಸಾಕ್ಷರತಾ ಕೇಂದ್ರದ ಸಲಹೆಗಾರ್ತಿ ವಿ. ಅಂಬಿಕಾ ಮಂಜುನಾಥ್, ಬ್ಯಾಂಕ್ ಮಿತ್ರರಾದ ಕೆ. ರಾಜಣ್ಣ, ವೆಂಕಟರವಣಪ್ಪ, ಪಿಚ್ಚಗುಂಟ್ಲಹಳ್ಳಿ ಅಧ್ಯಕ್ಷೆ ಅಲುವೇಲಮ್ಮ, ಉಪಾಧ್ಯಕ್ಷ ಸುನೀಲ್ ಕುಮಾರ್, ಪಿಡಿಒ ರವಣಪ್ಪ, ಸುರೇಶ್ಹಾಜರಿದ್ದರು.