<p><strong>ಕೆಜಿಎಫ್:</strong> ನಗರದ ಹೊರವಲಯದಲ್ಲಿ ಬೆಮಲ್ನಿಂದ ವಶಪಡಿಸಿಕೊಂಡ ಪ್ರದೇಶವನ್ನು ಕೈಗಾರಿಕೆಗೆ ಮೀಸಲು ಇಟ್ಟ ಪರಿಣಾಮ ಬೆಮಲ್ ಸುತ್ತಮುತ್ತ ಇದ್ದ ಕೃಷ್ಣಮೃಗಗಳ ಅವಾಸ ಸ್ಥಾನಕ್ಕೆ ಧಕ್ಕೆಯಾಗಿದೆ.</p>.<p>ಬೆಮಲ್ನಿಂದ ಬಡಮಾಕನಹಳ್ಳಿವರೆಗೂ ಕಾಡು ಪ್ರದೇಶವಿದೆ. ಬೆಮಲ್ ಎಚ್ ಅಂಡ್ ಪಿ, ಗಾಲ್ಫ್ ಕ್ಲಬ್ ಪ್ರದೇಶದಲ್ಲಿ ಮರಗಳು ಗುಂಪು ಗುಂಪಾಗಿ ಇದ್ದವು. ಈಗ ಕೈಗಾರಿಕಾ ಪ್ರದೇಶಕ್ಕಾಗಿ ಈ ಎಲ್ಲ ಜಾಗ ವಶಪಡಿಸಿಕೊಂಡ ನಂತರ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಟೆಂಡರ್ ಕರೆಯಲಾಗಿದೆ.</p>.<p>ನೂರಾರು ಕೆಲಸಗಾರರು ಪ್ರತಿನಿತ್ಯ ಮರಗಳನ್ನು ಕಡಿಯುವ ಕಾಯಕದಲ್ಲಿ ತೊಡಗಿರುವುದರಿಂದ ಒಮ್ಮೆ ಮರಗಳಿಂದ ತುಂಬಿದ್ದ ಪ್ರದೇಶ ಈಗ ಬಟ್ಟಬಯಲಾಗಿದೆ. ಹಸಿರು ಹೋಗಿ ಬಿಸಿಲು ಝಳ ಹೆಚ್ಚಾಗಿದೆ. ಜಿಂಕೆಗಳಿಗೆ ಬಿಸಿಲಿನ ತಾಪ ನೀಗಿಸಿಕೊಳ್ಳಲು ಮರಗಳೇ ಇಲ್ಲವಾಗಿದೆ. ಈ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೀಲಗಿರಿ ಮರಕ್ಕೆ ಟೆಂಡರ್ ಕರೆಯಲಾಗಿದೆ. ಇದರ ಜತೆಗೆ ಇತರ ಜಾತಿ ಮರಗಳನ್ನು ಕೂಡ ಅಕ್ರಮವಾಗಿ ಕಡಿಯಲಾಗುತ್ತಿದೆ ಎಂದು ಈ ಪ್ರದೇಶದ ಜನ ಆರೋಪಿಸುತ್ತಾರೆ.</p>.<p>ಬಿರುಬೇಸಿಗೆ ತನ್ನ ತಾಪ ಹೆಚ್ಚಿಸುತ್ತಿರುವ ಕಾರಣದಿಂದಾಗಿ ಕುಂಟೆಗಳಲ್ಲಿ ನೀರು ಬತ್ತಿ ಹೋಗಿದೆ. ಜಲಮೂಲ ಇಲ್ಲದ ಕಾರಣ ಜಿಂಕೆಗಳು ನಗರದೊಳಗೆ ಪ್ರವೇಶ ಮಾಡುವುದು, ಬೀದಿ ನಾಯಿಗಳಿಗೆ ಬಲಿಯಾಗುವುದು ಇಲ್ಲವೇ ವಾಹನಗಳಿಗೆ ಸಿಕ್ಕಿ ಸಾಯುವ ಪ್ರಕರಣ ಹೆಚ್ಚುತ್ತಿದೆ.</p>.<p>ಜಿಂಕೆಗಳ ಅವಾಸ ಸ್ಥಾನ ಡಿ.ಕೆಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಯಥೇಚ್ಛವಾಗಿ ಸುರಿಯುತ್ತಿರುವುದರಿಂದ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಪ್ಲಾಸ್ಟಿಕ್ ಯುಕ್ತ ಮೇವು ತಿನ್ನುವ ಜಿಂಕೆಗಳು ಸಾಯುವ ಸಂಭವ ಇದೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.</p>.<p>ನೀರು ಮತ್ತು ಮೇವಿನ ಕೊರತೆ ಉಂಟಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಡೆಗೆ ಗಮನವನ್ನೇ ನೀಡಿಲ್ಲ. ಕಾಡು ಪ್ರಾಣಿಗಳಿಗೆ ಕನಿಷ್ಠ ನೀರು ಒದಗಿಸುವುದು ಕೂಡ ಅದ್ಯತೆ ಆಗಿಲ್ಲ. ಬೆಮಲ್ ಬಳಿ ಇರುವ ಸಣ್ಣ ತೊರೆಯಲ್ಲಿ ಸ್ವಲ್ಪ ನೀರು ಇದೆ. ಎರಡು ವಾರ ಆ ಪ್ರದೇಶದಲ್ಲಿ ಮಾತ್ರ ನೀರು ಸಿಗುತ್ತದೆ. ನಂತರ ಜಿಂಕೆಗಳು ಪರದಾಡಬೇಕಾಗುತ್ತದೆ ಎಂದು ಸುತ್ತಮುತ್ತ ಗ್ರಾಮಸ್ಥರು ಹೇಳುತ್ತಾರೆ.</p>.<p>ಪ್ರಾಣಿಗಳಿಗೆ ನೀರು ಒದಗಿಸುವುದಕ್ಕೆ ಅರಣ್ಯ ಇಲಾಖೆ ಬಳಿ ಸಾಕಷ್ಟು ಅನುದಾನ ಇಲ್ಲದೆ ಇರುವುದರಿಂದ ಸ್ವಯಂಸೇವಾ ಸಂಸ್ಥೆಗಳಿಗೆ ನೀರು ಒದಗಿಸಲು ಮನವಿ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೆಜಿಎಫ್:</strong> ನಗರದ ಹೊರವಲಯದಲ್ಲಿ ಬೆಮಲ್ನಿಂದ ವಶಪಡಿಸಿಕೊಂಡ ಪ್ರದೇಶವನ್ನು ಕೈಗಾರಿಕೆಗೆ ಮೀಸಲು ಇಟ್ಟ ಪರಿಣಾಮ ಬೆಮಲ್ ಸುತ್ತಮುತ್ತ ಇದ್ದ ಕೃಷ್ಣಮೃಗಗಳ ಅವಾಸ ಸ್ಥಾನಕ್ಕೆ ಧಕ್ಕೆಯಾಗಿದೆ.</p>.<p>ಬೆಮಲ್ನಿಂದ ಬಡಮಾಕನಹಳ್ಳಿವರೆಗೂ ಕಾಡು ಪ್ರದೇಶವಿದೆ. ಬೆಮಲ್ ಎಚ್ ಅಂಡ್ ಪಿ, ಗಾಲ್ಫ್ ಕ್ಲಬ್ ಪ್ರದೇಶದಲ್ಲಿ ಮರಗಳು ಗುಂಪು ಗುಂಪಾಗಿ ಇದ್ದವು. ಈಗ ಕೈಗಾರಿಕಾ ಪ್ರದೇಶಕ್ಕಾಗಿ ಈ ಎಲ್ಲ ಜಾಗ ವಶಪಡಿಸಿಕೊಂಡ ನಂತರ ಮರಗಳನ್ನು ಕಡಿದು ಸಾಗಾಣಿಕೆ ಮಾಡಲು ಟೆಂಡರ್ ಕರೆಯಲಾಗಿದೆ.</p>.<p>ನೂರಾರು ಕೆಲಸಗಾರರು ಪ್ರತಿನಿತ್ಯ ಮರಗಳನ್ನು ಕಡಿಯುವ ಕಾಯಕದಲ್ಲಿ ತೊಡಗಿರುವುದರಿಂದ ಒಮ್ಮೆ ಮರಗಳಿಂದ ತುಂಬಿದ್ದ ಪ್ರದೇಶ ಈಗ ಬಟ್ಟಬಯಲಾಗಿದೆ. ಹಸಿರು ಹೋಗಿ ಬಿಸಿಲು ಝಳ ಹೆಚ್ಚಾಗಿದೆ. ಜಿಂಕೆಗಳಿಗೆ ಬಿಸಿಲಿನ ತಾಪ ನೀಗಿಸಿಕೊಳ್ಳಲು ಮರಗಳೇ ಇಲ್ಲವಾಗಿದೆ. ಈ ಪ್ರದೇಶದಲ್ಲಿ ಬೆಳೆಯಲಾಗಿದ್ದ ನೀಲಗಿರಿ ಮರಕ್ಕೆ ಟೆಂಡರ್ ಕರೆಯಲಾಗಿದೆ. ಇದರ ಜತೆಗೆ ಇತರ ಜಾತಿ ಮರಗಳನ್ನು ಕೂಡ ಅಕ್ರಮವಾಗಿ ಕಡಿಯಲಾಗುತ್ತಿದೆ ಎಂದು ಈ ಪ್ರದೇಶದ ಜನ ಆರೋಪಿಸುತ್ತಾರೆ.</p>.<p>ಬಿರುಬೇಸಿಗೆ ತನ್ನ ತಾಪ ಹೆಚ್ಚಿಸುತ್ತಿರುವ ಕಾರಣದಿಂದಾಗಿ ಕುಂಟೆಗಳಲ್ಲಿ ನೀರು ಬತ್ತಿ ಹೋಗಿದೆ. ಜಲಮೂಲ ಇಲ್ಲದ ಕಾರಣ ಜಿಂಕೆಗಳು ನಗರದೊಳಗೆ ಪ್ರವೇಶ ಮಾಡುವುದು, ಬೀದಿ ನಾಯಿಗಳಿಗೆ ಬಲಿಯಾಗುವುದು ಇಲ್ಲವೇ ವಾಹನಗಳಿಗೆ ಸಿಕ್ಕಿ ಸಾಯುವ ಪ್ರಕರಣ ಹೆಚ್ಚುತ್ತಿದೆ.</p>.<p>ಜಿಂಕೆಗಳ ಅವಾಸ ಸ್ಥಾನ ಡಿ.ಕೆಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಗ್ರಹವಾಗುವ ಕಸ ಯಥೇಚ್ಛವಾಗಿ ಸುರಿಯುತ್ತಿರುವುದರಿಂದ ಪ್ರದೇಶ ದುರ್ವಾಸನೆಯಿಂದ ಕೂಡಿದೆ. ಪ್ಲಾಸ್ಟಿಕ್ ಯುಕ್ತ ಮೇವು ತಿನ್ನುವ ಜಿಂಕೆಗಳು ಸಾಯುವ ಸಂಭವ ಇದೆ ಎಂದು ಪ್ರಾಣಿ ಪ್ರಿಯರು ಹೇಳುತ್ತಾರೆ.</p>.<p>ನೀರು ಮತ್ತು ಮೇವಿನ ಕೊರತೆ ಉಂಟಾಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಈ ಕಡೆಗೆ ಗಮನವನ್ನೇ ನೀಡಿಲ್ಲ. ಕಾಡು ಪ್ರಾಣಿಗಳಿಗೆ ಕನಿಷ್ಠ ನೀರು ಒದಗಿಸುವುದು ಕೂಡ ಅದ್ಯತೆ ಆಗಿಲ್ಲ. ಬೆಮಲ್ ಬಳಿ ಇರುವ ಸಣ್ಣ ತೊರೆಯಲ್ಲಿ ಸ್ವಲ್ಪ ನೀರು ಇದೆ. ಎರಡು ವಾರ ಆ ಪ್ರದೇಶದಲ್ಲಿ ಮಾತ್ರ ನೀರು ಸಿಗುತ್ತದೆ. ನಂತರ ಜಿಂಕೆಗಳು ಪರದಾಡಬೇಕಾಗುತ್ತದೆ ಎಂದು ಸುತ್ತಮುತ್ತ ಗ್ರಾಮಸ್ಥರು ಹೇಳುತ್ತಾರೆ.</p>.<p>ಪ್ರಾಣಿಗಳಿಗೆ ನೀರು ಒದಗಿಸುವುದಕ್ಕೆ ಅರಣ್ಯ ಇಲಾಖೆ ಬಳಿ ಸಾಕಷ್ಟು ಅನುದಾನ ಇಲ್ಲದೆ ಇರುವುದರಿಂದ ಸ್ವಯಂಸೇವಾ ಸಂಸ್ಥೆಗಳಿಗೆ ನೀರು ಒದಗಿಸಲು ಮನವಿ ಮಾಡಲಾಗುತ್ತಿದೆ ಎಂದು ಅರಣ್ಯ ಇಲಾಖೆ ಸಿಬ್ಬಂದಿಯೊಬ್ಬರು ಅಸಹಾಯಕತೆ ವ್ಯಕ್ತಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>