<p><strong>ಕೋಲಾರ:</strong> ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿಯಲ್ಲಿ ಮರಳಿನ ದಿಬ್ಬ ಕುಸಿದು ಮೃತಪಟ್ಟಿದ್ದ ಕಾರ್ಮಿಕ ಅಯೂಬ್ (25) ಅವರ ಶವವನ್ನು ಪೊಲೀಸರು ಗುರುವಾರ ಹೊರತೆಗೆದು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.</p>.<p>ಮುಳಬಾಗಿಲಿನ ಬೂಸಾಲಕುಂಟೆಯ ಅಯೂಬ್ ಅವರು ದೇವರಾಜ್ ಎಂಬುವರ ಜಮೀನಿನಲ್ಲಿ ಮರಳು ತೆಗೆಯುವ ವೇಳೆ ಬುಧವಾರ (ಜೂನ್ 3) ನಸುಕಿನಲ್ಲಿ ಮೃತಪಟ್ಟಿದ್ದರು. ಬಳಿಕ ಕದ್ದುಮುಚ್ಚಿ ಅಯೂಬ್ರ ಶವವನ್ನು ಬೂಸಾಲಕುಂಟೆಗೆ ಸಾಗಿಸಿಕೊಂಡು ಬಂದು ಹೂತಿಟ್ಟು ಪ್ರಕರಣ ಮರೆಮಾಚಲಾಗಿತ್ತು.</p>.<p>ಬುಧವಾರ ರಾತ್ರಿ ಈ ವಿಷಯ ತಿಳಿದ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಮರಳು ದಂಧೆಯಲ್ಲಿ ಜಮೀನಿನ ಮಾಲೀಕ ದೇವರಾಜ್ರ ಪಾತ್ರವಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೋಲಾರ:</strong> ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಎನ್.ವಡ್ಡಹಳ್ಳಿಯಲ್ಲಿ ಮರಳಿನ ದಿಬ್ಬ ಕುಸಿದು ಮೃತಪಟ್ಟಿದ್ದ ಕಾರ್ಮಿಕ ಅಯೂಬ್ (25) ಅವರ ಶವವನ್ನು ಪೊಲೀಸರು ಗುರುವಾರ ಹೊರತೆಗೆದು ತಹಶೀಲ್ದಾರ್ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದರು.</p>.<p>ಮುಳಬಾಗಿಲಿನ ಬೂಸಾಲಕುಂಟೆಯ ಅಯೂಬ್ ಅವರು ದೇವರಾಜ್ ಎಂಬುವರ ಜಮೀನಿನಲ್ಲಿ ಮರಳು ತೆಗೆಯುವ ವೇಳೆ ಬುಧವಾರ (ಜೂನ್ 3) ನಸುಕಿನಲ್ಲಿ ಮೃತಪಟ್ಟಿದ್ದರು. ಬಳಿಕ ಕದ್ದುಮುಚ್ಚಿ ಅಯೂಬ್ರ ಶವವನ್ನು ಬೂಸಾಲಕುಂಟೆಗೆ ಸಾಗಿಸಿಕೊಂಡು ಬಂದು ಹೂತಿಟ್ಟು ಪ್ರಕರಣ ಮರೆಮಾಚಲಾಗಿತ್ತು.</p>.<p>ಬುಧವಾರ ರಾತ್ರಿ ಈ ವಿಷಯ ತಿಳಿದ ಪೊಲೀಸರು ಅಸಹಜ ಪ್ರಕರಣ ದಾಖಲಿಸಿಕೊಂಡಿದ್ದರು. ಗುರುವಾರ ಸಮಾಧಿಯಿಂದ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿಸಿದರು. ಮರಳು ದಂಧೆಯಲ್ಲಿ ಜಮೀನಿನ ಮಾಲೀಕ ದೇವರಾಜ್ರ ಪಾತ್ರವಿರುವ ಶಂಕೆಯಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>