ಸ್ಥಳಕ್ಕೆ ಧಾವಿಸಿದ ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಗುರುವಾರದಿಂದ ಹೆಚ್ಚುವರಿಯಾಗಿ 5 ಟ್ಯಾಂಕರ್ ನೀರು ಪೂರೈಕೆ ಮಾಡಲಾಗುವುದು. ಜೂನಿಯರ್ ಕಾಲೇಜು ಬಳಿ ಟ್ಯಾಂಕ್ ನಿರ್ಮಾಣ ಆಗುತ್ತಿದ್ದು, ಕಾಮಗಾರಿ ಪೂರ್ಣ ಗೊಂಡ ಬಳಿಕ ಸಮರ್ಪಕ ನೀರು ಪೂರೈಕೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಪ್ರಭಾಕರ್ ರಾವ್ ತಿಳಿಸಿದರು. ಪ್ರಭಾಕರ್ ರಾವ್ ನೇತೃತ್ವ ವಹಿಸಿದ್ದರು. ಕೆರೆಕೋಡಿ ನಾರಾಯಣ ಸ್ವಾಮಿ, ಮಹೇಶ್ ಇದ್ದರು.