<p><strong>ವೇಮಗಲ್:</strong> ಈ ಬಾರಿ ಉತ್ತಮ ಮಳೆಯಿಂದ ಹೋಬಳಿಯಲ್ಲಿ ಪ್ರಮುಖ ಬೆಳೆಯಾದ ರಾಗಿಯು ಸಮೃದ್ಧವಾಗಿ ಬೆಳೆದು, ಫಸಲಿಗೆ ಬಂದಿದೆ. ಹಾಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ವೇಮಗಲ್ ಹೋಬಳಿಯ ಕ್ಯಾಲನೂರು, ಶೆಟ್ಟಿಹಳ್ಳಿ, ಕಡಕಟ್ಟೂರು, ಚನ್ನಪ್ಪನಹಳ್ಳಿ, ಪುರಹಳ್ಳಿ, ಬೆಳಮಾರನಹಳ್ಳಿ, ಮಲಿಯಪ್ಪನಹಳ್ಳಿ, ಕಲ್ವಾ ಮಂಜಲಿ, ಸೀತಿ, ಬೈರಂಡಹಳ್ಳಿ, ಚಲ್ಡಿಗಾನಹಳ್ಳಿ, ಬೆಟ್ಟಹೂಸಪೂರ ಸೇರಿದಂತೆ ವಿವಿಧೆಡೆ ರಾಗಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ.</p>.<p>ಕಳೆದ ಬಾರಿ ಮಳೆ ಕೊರತೆಯಿಂದ ಬಿತ್ತಿದ ಬೀಜಕ್ಕೂ ಕುತ್ತು ಬಂದಿತ್ತು. ಭಾರೀ ನಷ್ಟ ಅನುಭವಿಸಬೇಕಾಯಿತು. ಜಾನುವಾರುಗಳು ಮೇವಿನ ಕೊರತೆ ಎದುರಿಸಬೇಕಾಗಿತ್ತು. ಈ ಬಾರಿ ಉತ್ತಮ ಮಳೆಯಿಂದ ರಾಗಿ ಬೆಳೆ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆದು ನಿಂತಿದೆ.</p>.<p>ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರಿಗೆ, ಬೆಲೆ ಇಳಿಕೆಯ ಭಯವೂ ಕಾಡುತ್ತಿದೆ. ಪ್ರಸ್ತುತ ರಾಗಿಗೆ ಉತ್ತಮ ಬೆಲೆ ಇದ್ದು, ಪೂರೈಕೆ ಹೆಚ್ಚಾಗಿ ಅದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಈ ಬಾರಿ ಉತ್ತಮ ಫಸಲು ಬಂದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<div><blockquote>ಈಗಾಗಲೇ ರಾಗಿ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು ರೈತರು ಕೋಲಾರದ ಗದ್ದೆ ಕಣ್ಣೂರು ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು.</blockquote><span class="attribution">ಶ್ರೀಧರ್ ಕೃಷಿ ಅಧಿಕಾರಿಗಳು ವೇಮಗಲ್ ರೈತ ಸಂಪರ್ಕ ಕೇಂದ್ರ </span></div>.<div><blockquote>ಸರ್ಕಾರವು ರೈತರಿಂದ ರಾಗಿ ಖರೀದಿಗೆ ಹೋಬಳಿ ಮಟ್ಟದಲ್ಲಿ ಕೂಡಲೇ ರಾಗಿ ಖರೀದಿ ಕೇಂದ್ರ ತೆರೆಯಬೇಕು. ರೈತರು ಕೇಂದ್ರಕ್ಕೆ ರಾಗಿ ನೀಡಿದ 10 ದಿನದೊಳಗೆ ಹಣ ಪಾವತಿಯಾಗಬೇಕು ಎಂದರು.</blockquote><span class="attribution">ಕಲ್ವ ಮಂಜಲಿ ರಾಮು ಶಿವಣ್ಣ ರಾಜ್ಯ ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೇಮಗಲ್:</strong> ಈ ಬಾರಿ ಉತ್ತಮ ಮಳೆಯಿಂದ ಹೋಬಳಿಯಲ್ಲಿ ಪ್ರಮುಖ ಬೆಳೆಯಾದ ರಾಗಿಯು ಸಮೃದ್ಧವಾಗಿ ಬೆಳೆದು, ಫಸಲಿಗೆ ಬಂದಿದೆ. ಹಾಗಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ವೇಮಗಲ್ ಹೋಬಳಿಯ ಕ್ಯಾಲನೂರು, ಶೆಟ್ಟಿಹಳ್ಳಿ, ಕಡಕಟ್ಟೂರು, ಚನ್ನಪ್ಪನಹಳ್ಳಿ, ಪುರಹಳ್ಳಿ, ಬೆಳಮಾರನಹಳ್ಳಿ, ಮಲಿಯಪ್ಪನಹಳ್ಳಿ, ಕಲ್ವಾ ಮಂಜಲಿ, ಸೀತಿ, ಬೈರಂಡಹಳ್ಳಿ, ಚಲ್ಡಿಗಾನಹಳ್ಳಿ, ಬೆಟ್ಟಹೂಸಪೂರ ಸೇರಿದಂತೆ ವಿವಿಧೆಡೆ ರಾಗಿ ಬೆಳೆ ಸಮೃದ್ಧವಾಗಿ ಬೆಳೆದು ನಿಂತಿದೆ.</p>.<p>ಕಳೆದ ಬಾರಿ ಮಳೆ ಕೊರತೆಯಿಂದ ಬಿತ್ತಿದ ಬೀಜಕ್ಕೂ ಕುತ್ತು ಬಂದಿತ್ತು. ಭಾರೀ ನಷ್ಟ ಅನುಭವಿಸಬೇಕಾಯಿತು. ಜಾನುವಾರುಗಳು ಮೇವಿನ ಕೊರತೆ ಎದುರಿಸಬೇಕಾಗಿತ್ತು. ಈ ಬಾರಿ ಉತ್ತಮ ಮಳೆಯಿಂದ ರಾಗಿ ಬೆಳೆ ಬಿತ್ತನೆ ಮಾಡಿದ್ದು, ಸಮೃದ್ಧವಾಗಿ ಬೆಳೆದು ನಿಂತಿದೆ.</p>.<p>ಉತ್ತಮ ಇಳುವರಿ ನಿರೀಕ್ಷೆಯಲ್ಲಿರುವ ರೈತರಿಗೆ, ಬೆಲೆ ಇಳಿಕೆಯ ಭಯವೂ ಕಾಡುತ್ತಿದೆ. ಪ್ರಸ್ತುತ ರಾಗಿಗೆ ಉತ್ತಮ ಬೆಲೆ ಇದ್ದು, ಪೂರೈಕೆ ಹೆಚ್ಚಾಗಿ ಅದರ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ. ಆದರೂ, ಈ ಬಾರಿ ಉತ್ತಮ ಫಸಲು ಬಂದು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ ರೈತರು.</p>.<div><blockquote>ಈಗಾಗಲೇ ರಾಗಿ ಖರೀದಿಗೆ ನೋಂದಣಿ ಪ್ರಾರಂಭವಾಗಿದ್ದು ರೈತರು ಕೋಲಾರದ ಗದ್ದೆ ಕಣ್ಣೂರು ರಾಗಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಕೊಳ್ಳಬಹುದು.</blockquote><span class="attribution">ಶ್ರೀಧರ್ ಕೃಷಿ ಅಧಿಕಾರಿಗಳು ವೇಮಗಲ್ ರೈತ ಸಂಪರ್ಕ ಕೇಂದ್ರ </span></div>.<div><blockquote>ಸರ್ಕಾರವು ರೈತರಿಂದ ರಾಗಿ ಖರೀದಿಗೆ ಹೋಬಳಿ ಮಟ್ಟದಲ್ಲಿ ಕೂಡಲೇ ರಾಗಿ ಖರೀದಿ ಕೇಂದ್ರ ತೆರೆಯಬೇಕು. ರೈತರು ಕೇಂದ್ರಕ್ಕೆ ರಾಗಿ ನೀಡಿದ 10 ದಿನದೊಳಗೆ ಹಣ ಪಾವತಿಯಾಗಬೇಕು ಎಂದರು.</blockquote><span class="attribution">ಕಲ್ವ ಮಂಜಲಿ ರಾಮು ಶಿವಣ್ಣ ರಾಜ್ಯ ಯುವ ಘಟಕದ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>