ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಮಾಲೂರು | ರಂಗಮಂದಿರ: ಸೌಕರ್ಯ ಕೊರತೆ, ಕೇಳದ ಸಾಂಸ್ಕೃತಿಕ ನಿನಾದ

ಪಾಳು ಬೀಳುತ್ತಿದೆ ಮಾಸ್ತಿ ವೆಂಕಟೇಶ್‌ ಅಯ್ಯಂಗಾರ್‌ ರಂಗಮಂದಿರ
Published : 10 ಫೆಬ್ರುವರಿ 2025, 6:44 IST
Last Updated : 10 ಫೆಬ್ರುವರಿ 2025, 6:44 IST
ಫಾಲೋ ಮಾಡಿ
Comments
ರಂಗಮಂದಿರದ ಒಳಾಂಗಣದ ಸ್ಥಿತಿ
ರಂಗಮಂದಿರದ ಒಳಾಂಗಣದ ಸ್ಥಿತಿ
ಪ್ರಯೋಜನೆಕ್ಕೆ ಬಾರದ 1.10 ಕೋಟಿ ವೆಚ್ಚದ ರಂಗಂಮದಿರ ಖಾಲಿ ಮೈದಾನ, ರಸ್ತೆಯಲ್ಲಿ ಕಾರ್ಯಕ್ರಮ ಆಯೋಜನೆ ವಾಹನ ನಿಲುಗಡೆ ಸ್ಥಳವಾದ ರಂಗಮಂದಿರ ಆವರಣ
ಸರ್ಕಾರದಿಂದ ₹1.42 ಕೋಟಿ ಅನುದಾನ ಬಿಡುಗಡೆಯಾಗಿದೆ. ಕೆಲವು ತಾಂತ್ರಿಕ ದೋಷದಿಂದ ರಂಗಮಂದಿರ ಅಭಿವೃದ್ಧಿ ತಡವಾಗಿದೆ. ರಂಗಮಂದಿರ ಅಭಿವೃದ್ಧಿಗೆ ಟೆಂಡರ್‌ ಹರಾಜು ಪ್ರತಿಕ್ರಿಯೆ ನಡೆಯುತ್ತಿದೆ.
ಪ್ರದೀಪ್ ಕುಮಾರ್‌ ಮುಖ್ಯಧಿಕಾರಿ ಪುರಸಭೆ
ಪಟ್ಟಣದಲ್ಲಿ ಕನ್ನಡ ಪರ ಸಂಘಟನೆಗಳು ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ರಾಜ್ಯೋತ್ಸವ ಆಚರಿಸಲು ಸೂಕ್ತ ವೇದಿಕೆ ಇಲ್ಲ. ಅದಷ್ಟು ಬೇಗ ಮಾಸ್ತಿ ವೆಂಕಟೇಶ ಅಯ್ಯಂಗಾರ್‌ ರಂಗಮಂದಿರನ್ನು ದುರಸ್ತಿಗೊಳಿಸಿ ಅಗತ್ಯ ಸೌಲಭ್ಯ ಕಲ್ಪಿಸಿ
ಶ್ರೀನಿವಾಸ್ ತಾಲ್ಲೂಕು ಅಧ್ಯಕ್ಷ ಕರವೇ
ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ
ನಾವು ಬಾಲಕರಾಗಿದ್ದಾಗಲೇ ಪಟ್ಟಣದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣಕ್ಕೆ ತುಡಿಯುತ್ತಿದ್ದಾರೆ. ಆಗ ಹಿರಿಯರು ಅದಕ್ಕಾಗಿ ಜಾಗ ಕೊಟ್ಟಿದ್ದರು. ನಂತರದ ದಿನಗಳಲ್ಲಿ ನಾಟಕ ಪ್ರದರ್ಶಿಸಲು ಅಂದಿನ ಪುರಸಭೆ ಅಧ್ಯಕ್ಷ ವೆಂಕಟಸ್ವಾಮಿ ಪುರಸಭೆಯ ಪಕ್ಕದ ಆವರಣದಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಅವಕಾಶ ಮಾಡಿಕೊಟ್ಟರು. ಆಗ ನಾಗರಿಕರ ಸಹಕಾರದಿಂದ ರಂಗಮಂದಿರ ನಿರ್ಮಾಣ ಮಾಡಿದ್ದೇವು. ಅದರಲ್ಲೇ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿತು ಎಂದು ಸ್ಮರಿಸುತ್ತಾರೆ ಭುವನೇಶ್ವರಿ ಕಲಾ ಸಂಘದ ಅಧ್ಯಕ್ಷ ಎಂವಿ.ಹನುಮಂತಪ್ಪ. ಇದೇ ಸ್ಥಳದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಾಣಕ್ಕೆ ಕೆ.ಎಸ್. ಮಂಜುನಾಥಗೌಡ ಶಾಕರಾಗಿದ್ದ ಸಂದರ್ಭ ಮುಂದಾದರು. ಆದರೆ ಕಾಮಗಾರಿ ಆರಂಭಗೊಂಡ ನಂತರ ನಡೆದ ಚುನಾವಣೆಯಲ್ಲಿ ಪರಾಭವಗೊಂಡರು. ಇದರಿಂದ ಕಾಮಗಾರಿ ನೆನೆಗುದಿಗೆ ಬಿತ್ತು. ಅಂದಿನ ಪುರಭಾಧ್ಯಕ್ಷ ಸಿ.ಪಿ.ನಾಗರಾಜ್ ಅವರು ಸೌಕರ್ಯಗಳು ಇಲ್ಲದಿದ್ದರೆ ಕಾಮಗಾರಿ ಪೂರ್ಣಗೊಳ್ಳದಿದ್ದರೂ ರಂಗಮಂದಿರವನ್ನು ದಿಢೀರ್‌ ಆಗಿ ಉದ್ಘಾಟಿಸಿದರು. ಇಲ್ಲಿಂದಲೇ ಶುರುವಾಯಿತು ಸಮಸ್ಯೆ ಎನ್ನುತ್ತಾರೆ ಹನುಮಂತಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT