‘ಯುವಕನ ಆತ್ಮಹತ್ಯೆ ಬಳಿಕ ಪೆತ್ಲಾಂಡ್ಲಹಳ್ಳಿಯ ಆರೋಪಿಗಳು ತಲೆಮರೆಸಿಕೊಂಡಿದ್ದರು. ಅವರಲ್ಲಿ ಮುನಿವೆಂಕಟಪ್ಪ ಎಂಬಾತನನ್ನು ಶುಕ್ರವಾರ ಬಂಧಿಸಿದ್ದೆವು. ಪ್ರಮುಖ ಆರೋಪಿ ರಾಜು, ಶಿವರಾಜ್ ಹಾಗೂಗೋಪಾಲಕೃಷ್ಣಪ್ಪ ಅವರ ಪತ್ತೆಗೆ ಶೋಧ ಮುಂದುವರಿಸಿದ್ದೆವು. ಶನಿವಾರ ಅವರನ್ನೂ ಬಂಧಿಸಿದ್ದು, ತನಿಖೆ ತೀವ್ರಗೊಳಿಸಿದ್ದೇವೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ. ದೇವರಾಜ್ ತಿಳಿಸಿದರು.