ನಂಗಲಿ (ಮುಳಬಾಗಿಲು): ಮುಷ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಉಪ್ಪರಹಳ್ಳಿ ನಿವಾಸಿ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ನಾಗರಾಜ್ ಮೇಲೆ ಮಂಗಳವಾರ ರಾತ್ರಿ ಅಪರಿಚಿತರು ಗುಂಡಿನ ದಾಳಿ ನಡೆಸಿದ್ದಾರೆ.
ಗ್ರಾಮದ ಹೊರವಲಯದಲ್ಲಿರುವ ತೋಟದ ಮನೆಯ ಕಿಟಕಿ ಬಳಿ ಕುಳಿತಿದ್ದ ನಾಗರಾಜ್ ಅವರತ್ತ ಮಂಗಳವಾರ ರಾತ್ರಿ 9 ಗಂಟೆ ವೇಳೆ ಅಪರಿಚಿತ ವ್ಯಕ್ತಿಗಳಿಬ್ಬರು ಗುಂಡು ಹಾರಿಸಿದ್ದಾರೆ. ಆದರೆ, ಗುಂಡುಗಳು ಕಿಟಕಿಯ ಸರಳುಗಳಿಗೆ ತಗುಲಿದ್ದರಿಂದ ನಾಗರಾಜ್ ಅಪಾಯದಿಂದ ಪಾರಾಗಿದ್ದಾರೆ. ಅವರು ಹೊರ ಬಂದು ನೋಡುವಷ್ಟ ರಲ್ಲಿ ದುಷ್ಕರ್ಮಿಗಳು ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಎಸ್ಪಿ ಎಂ.ನಾರಾಯಣ, ಎಎಸ್ಪಿ ವಿ.ಬಿ.ಭಾಸ್ಕರ್, ಡಿವೈಎಸ್ಪಿ ಜಯಶಂಕರ್, ಸಿಪಿಐ ಲಕ್ಷ್ಮಿಕಾಂತಯ್ಯ, ಆರಕ್ಷಕ ಉಪ ನಿರೀಕ್ಷಕ ನಂದೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.