‘ಯಾವುದೇ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರವಿಲ್ಲದೆ, ನೈಸರ್ಗಿಕವಾಗಿ ಬೆಳೆದ ಈ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಬಳಸುವ ವಿಧಾನ ತಿಳಿದಿರಬೇಕು. ಗುಳ್ಳ ಬದನೆ ಕಾಯಿಯನ್ನು ಕೊಯ್ದು ಬೀಜ ತೆಗೆದು ಹೊಟ್ಟನ್ನು ಮಾತ್ರ ಸಾಂಬಾರು ತಯಾರಿಸಲು ಬಳಸಿಕೊಳ್ಳಬೇಕು. ಮಂಗರವಳ್ಳಿಯನ್ನೂ ಸಹ ಮೇಲಿನ ನಾರು ತೆಗೆದು ಸಂಸ್ಕರಿಸಿದ ಮೇಲೆ ಚಟ್ನಿ ತಯಾರಿಸಬೇಕು’ ಎನ್ನುತ್ತಾರೆ ಸಾಹಿತಿ ಸ.ರಘುನಾಥ.