<p>ಶ್ರೀನಿವಾಸಪುರ: ಕೊರೊನಾ ಸಮಸ್ಯೆಯಿಂದ ತರಕಾರಿ ಕೊರತೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶದ ಜನರು ನೈಸರ್ಗಿಕ ತರಕಾರಿ ಹುಡುಕಿ ತಂದು ಬಳಸುತ್ತಿದ್ದಾರೆ. ಇದರಿಂದ ಜನರು ಬಿಟ್ಟ ದಾರಿಯನ್ನು ಮತ್ತೆ ಹಿಡಿದಂತಾಗಿದೆ.</p>.<p>ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಓಡಾಡುವ ಜನರಿಗೆ ಗುಳ್ಳ ಬದನೆ, ಮಂಗರವಳ್ಳಿ, ಹುಣಸೆ ಚಿಗುರು, ಕುಂದಲಿ ಕೊಂಬು ಮುಂತಾದ ನೈಸರ್ಗಿಕ ತರಕಾರಿಗಳು ಕಣ್ಣಿಗೆ ಬೀಳುತ್ತಿವೆ. ಅವುಗಳ ಬಳಕೆ ಬಗ್ಗೆ ಗೊತ್ತಿರುವ ವ್ಯಕ್ತಿಗಳು ಕಿತ್ತು ತರುತ್ತಿದ್ದಾರೆ.</p>.<p>‘ಯಾವುದೇ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರವಿಲ್ಲದೆ, ನೈಸರ್ಗಿಕವಾಗಿ ಬೆಳೆದ ಈ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಬಳಸುವ ವಿಧಾನ ತಿಳಿದಿರಬೇಕು. ಗುಳ್ಳ ಬದನೆ ಕಾಯಿಯನ್ನು ಕೊಯ್ದು ಬೀಜ ತೆಗೆದು ಹೊಟ್ಟನ್ನು ಮಾತ್ರ ಸಾಂಬಾರು ತಯಾರಿಸಲು ಬಳಸಿಕೊಳ್ಳಬೇಕು. ಮಂಗರವಳ್ಳಿಯನ್ನೂ ಸಹ ಮೇಲಿನ ನಾರು ತೆಗೆದು ಸಂಸ್ಕರಿಸಿದ ಮೇಲೆ ಚಟ್ನಿ ತಯಾರಿಸಬೇಕು’ ಎನ್ನುತ್ತಾರೆ ಸಾಹಿತಿ ಸ.ರಘುನಾಥ.</p>.<p>ಕೆಲವರು ಲಾಕ್ಡೌನ್ನಿಂದ ಉಂಟಾಗಿರುವ ಬಿಡುವಿನ ವೇಳೆಯನ್ನು ನೈಸರ್ಗಿಕ ತರಕಾರಿ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಶ್ರೀನಿವಾಸಪುರ: ಕೊರೊನಾ ಸಮಸ್ಯೆಯಿಂದ ತರಕಾರಿ ಕೊರತೆ ಎದುರಿಸುತ್ತಿರುವ ಗ್ರಾಮೀಣ ಪ್ರದೇಶದ ಜನರು ನೈಸರ್ಗಿಕ ತರಕಾರಿ ಹುಡುಕಿ ತಂದು ಬಳಸುತ್ತಿದ್ದಾರೆ. ಇದರಿಂದ ಜನರು ಬಿಟ್ಟ ದಾರಿಯನ್ನು ಮತ್ತೆ ಹಿಡಿದಂತಾಗಿದೆ.</p>.<p>ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಓಡಾಡುವ ಜನರಿಗೆ ಗುಳ್ಳ ಬದನೆ, ಮಂಗರವಳ್ಳಿ, ಹುಣಸೆ ಚಿಗುರು, ಕುಂದಲಿ ಕೊಂಬು ಮುಂತಾದ ನೈಸರ್ಗಿಕ ತರಕಾರಿಗಳು ಕಣ್ಣಿಗೆ ಬೀಳುತ್ತಿವೆ. ಅವುಗಳ ಬಳಕೆ ಬಗ್ಗೆ ಗೊತ್ತಿರುವ ವ್ಯಕ್ತಿಗಳು ಕಿತ್ತು ತರುತ್ತಿದ್ದಾರೆ.</p>.<p>‘ಯಾವುದೇ ಕೀಟನಾಶಕ ಅಥವಾ ರಾಸಾಯನಿಕ ಗೊಬ್ಬರವಿಲ್ಲದೆ, ನೈಸರ್ಗಿಕವಾಗಿ ಬೆಳೆದ ಈ ತರಕಾರಿಗಳು ಆರೋಗ್ಯಕ್ಕೆ ಒಳ್ಳೆಯದಾದರೂ, ಬಳಸುವ ವಿಧಾನ ತಿಳಿದಿರಬೇಕು. ಗುಳ್ಳ ಬದನೆ ಕಾಯಿಯನ್ನು ಕೊಯ್ದು ಬೀಜ ತೆಗೆದು ಹೊಟ್ಟನ್ನು ಮಾತ್ರ ಸಾಂಬಾರು ತಯಾರಿಸಲು ಬಳಸಿಕೊಳ್ಳಬೇಕು. ಮಂಗರವಳ್ಳಿಯನ್ನೂ ಸಹ ಮೇಲಿನ ನಾರು ತೆಗೆದು ಸಂಸ್ಕರಿಸಿದ ಮೇಲೆ ಚಟ್ನಿ ತಯಾರಿಸಬೇಕು’ ಎನ್ನುತ್ತಾರೆ ಸಾಹಿತಿ ಸ.ರಘುನಾಥ.</p>.<p>ಕೆಲವರು ಲಾಕ್ಡೌನ್ನಿಂದ ಉಂಟಾಗಿರುವ ಬಿಡುವಿನ ವೇಳೆಯನ್ನು ನೈಸರ್ಗಿಕ ತರಕಾರಿ ಸಂಗ್ರಹಿಸಲು ಬಳಸಿಕೊಳ್ಳುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>