‘ಮನೆಯಿಂದಲೇ ಇಲಿ ಪಾಷಾಣ ತಂದಿದ್ದ’
‘ವಸತಿ ನಿಲಯದಲ್ಲಿ ಇರಲು ವಿದ್ಯಾರ್ಥಿಗೆ ಇಷ್ಟವಿರಲಿಲ್ಲ. ಪೋಷಕರು ಬಲವಂತದಿಂದ ಆತನನ್ನು ಹಾಸ್ಟೆಲ್ಗೆ ಕಳುಹಿಸಿದ್ದಾರೆ. ಹೀಗಾಗಿ ಆತ ಮನೆಯಿಂದ ಅವಧಿ ಮೀರಿದ ಇಲಿ ಪಾಷಾಣ ತಂದು ಕುಡಿಯುವ ನೀರಿಗೆ ಮಿಶ್ರಣ ಮಾಡಿದ್ದಾನೆ’ ಎಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಆರ್.ಶ್ರೀನಿವಾಸ್ ‘ಪ್ರಜಾವಾಣಿ’ ಗೆ ತಿಳಿಸಿದರು. ‘ಎರಡು ದಿನ ವಸತಿ ನಿಲಯದಲ್ಲೇ ಇದ್ದು ಮಕ್ಕಳನ್ನು ವಿಚಾರಿಸಿ ಮಾಹಿತಿ ಪಡೆದಿದ್ದೇನೆ. ಮಕ್ಕಳು ಹಾಗೂ ಪೋಷಕರ ಸಭೆ ನಡೆಸಿ ಮುಂದೆ ಇಂಥ ಅನಾಹುತ ಎಸಗದಂತೆ ಎಚ್ಚರಿಕೆ ನೀಡಿದ್ದೇನೆ. ಆಸ್ಪತ್ರೆಯಲ್ಲಿರುವ ಮಕ್ಕಳು ಆರೋಗ್ಯವಾಗಿದ್ದಾರೆ’ ಎಂದರು.