ಪ್ರಸಿದ್ಧ ಬಂಗಾರು ತಿರುಪತಿ ದೇವಾಲಯದ ಅವರಣದಲ್ಲಿ ಬುಧವಾರ ಹಿಂದೂ ಸಂಪ್ರದಾಯದಂತೆ ಕೋಲಾರ ತಾಲ್ಲೂಕಿನ ಶ್ರೀಕಾಂತ್ ಹಾಗೂ ಚೈತ್ರಾ, ಬಂಗಾರಪೇಟೆ ತಾಲ್ಲೂಕಿನ ಹರೀಶ್ ಕುಮಾರ್ ಹಾಗೂ ನಂದಿನಿ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮುಜರಾಯಿ ಇಲಾಖೆಯ ಮಾರ್ಗಸೂಚಿಯಂತೆ ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ವಿವಾಹ ನಡೆಸಿಕೊಟ್ಟರು.