ಶಾಸಕ ನಾರಾಯಣಸ್ವಾಮಿ ಅವರು ಬಂಗಾರಪೇಟೆ ಹೊರವಲಯದಲ್ಲಿನ ತಮ್ಮ ರೆಸಾರ್ಟ್ನಲ್ಲಿ ನ.29ರಂದು ಕಾಂಗ್ರೆಸ್ ಅಭ್ಯರ್ಥಿ ಎಂ.ಎಲ್.ಅನಿಲ್ಕುಮಾರ್ ಪರ ಚುನಾವಣಾ ಪ್ರಚಾರ ಸಭೆ ನಡೆಸಿದ್ದರು. ಸಭೆಗೆ ಬಂದಿದ್ದ ಗ್ರಾ.ಪಂ ಸದಸ್ಯರು ಹಾಗೂ ಇತರೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ್ದ ಶಾಸಕರು, ‘ತಾವು ಯಾರಿಗೆ ಮತ ಹಾಕುತ್ತೀರಿ ಎಂಬುದು ನನಗೆ ಗೊತ್ತಾಗುತ್ತದೆ. ಇಲ್ಲೊಂದು ಹೇಳಿ ಮತಗಟ್ಟೆಯಲ್ಲಿ ಮತ್ತೊಂದು ಮಾಡಬಾರದು’ ಎಂದು ಬೆದರಿಸಿದ್ದರು.