<p><strong>ಮಾಲೂರು: </strong>ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಕೆಲ ಗ್ರಾಮಗಳಲ್ಲಿ ನೀರಿದ್ದರೂ ಸಮರ್ಪಕ ಬಳಕೆಯಾಗುತ್ತಿಲ್ಲ.<br /> <br /> ತಾಲ್ಲೂಕಿನ ಗಡಿ ಪ್ರದೇಶ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಹನ್ಯ, ಪಡುವನಹಳ್ಳಿ, ವಪ್ಪಚ್ಚಹಳ್ಳಿ, ತರಬಹಳ್ಳಿ, ಕಡದನಹಳ್ಳಿ, ಬೆನ್ನಘಟ್ಟ, ಡಿ.ಎನ್.ದೊಡ್ಡಿ ಮತ್ತು ಚಿಕ್ಕದೊಮ್ಮರ ಪಾಳ್ಯದಲ್ಲಿ ತಲಾ ಒಂದು ಕೊಳವೆ ಬಾವಿ, ಬಂಟಹಳ್ಳಿ ಗ್ರಾಮದಲ್ಲಿ 2 ಕೊಳವೆ ಬಾವಿ ಸೇರಿದಂತೆ ಒಟ್ಟು 10 ಕೊಳವೆ ಬಾವಿ ಕಾರ್ಯ ನಿರ್ವಹಿಸುತ್ತಿವೆ. <br /> <br /> ಇನ್ನೆರಡು ಹಳ್ಳಿಗಳಲ್ಲಿ ನೂತನವಾಗಿ ಕೊಳವೆಬಾವಿ ಕೊರೆಯಿಸಿದ್ದು, ನೀರಿನ ವ್ಯವಸ್ಥೆಗಾಗಿ ಪಂಪ್- ಮೋಟಾರ್ ಪೈಪ್ಲೈನ್ ಕಾಮಗಾರಿ ನಡೆಯಬೇಕಾಗಿದೆ. ಉಳಿದಂತೆ ಡಿ.ಎನ್.ದೊಡ್ಡಿ, ಪಡುವನಹಳ್ಳಿ ಮತ್ತು ಚಿಕ್ಕ ದೊಂಬರಪಾಳ್ಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. <br /> <br /> ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ಆ ಪೈಕಿ ಹಲವು ಬತ್ತಿಹೋಗಿ ಇಲ್ಲಿನ ಮಹಿಳೆಯರು ಕಿಲೋಮೀಟರ್ ದೂರದಿಂದ ನೀರು ತರಬೇಕಾಗಿದೆ. <br /> <br /> ಅಹನ್ಯ ಗ್ರಾಮದಲ್ಲಿ ಟ್ಯಾಂಕ್ ಮೂಲಕ ನೀರು ಪೂರೈಸುತ್ತಿದ್ದು, 6 ತಿಂಗಳಿಂದ ಈಚೆಗೆ ಗ್ರಾಮದ ಕೆಲವು ಪ್ರಭಾವಿ ಮುಖಂಡರು ಟ್ಯಾಂಕ್ಗೆ ನೀರು ಪೂರೈಸುವ ಪೈಪ್ಲೈನ್ಗೆ ನೇರವಾಗಿ ನಲ್ಲಿಗಳನ್ನು ಅಳವಡಿಸಿದ್ದರಿಂದ ಕೊಳವೆಬಾವಿ ನೀರು ಟ್ಯಾಂಕಿಗೆ ಹೋಗದೆ ಪೈಪ್ಲೈನಲ್ಲೇ ಹರಿಯುತ್ತಿದೆ.<br /> <br /> ಇದರಿಂದ ಮನೆಗಳಿಗೆ ತೊಂದರೆಯಾಗಿದೆ. ಈಗ ಟ್ಯಾಂಕ್ಗೆ ನೀರು ಹರಿಸುವುದನ್ನು ನಿಲ್ಲಿಸಿ ಕೆರೆಯಲ್ಲೇ ನೇರವಾಗಿ ಕೊಳವೆಬಾವಿಯಿಂದ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ಗ್ರಾಮಸ್ಥರು ಅಲ್ಲೇ ನೀರು ಹಿಡಿದುಕೊಳ್ಳಬೇಕಿದೆ. <br /> <br /> ಗ್ರಾಮದಲ್ಲಿ ವಿದ್ಯುತ್ ಇದ್ದರಂತೂ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ನೀರನ್ನು ಹಿಡಿದ ನಂತರ ಅದನ್ನು ನಿಲ್ಲಿಸಲು ಜನ ಮುಂದಾಗುತ್ತಿಲ್ಲ. ಈ ಗ್ರಾಮದಲ್ಲಿ ನೀರಿಗೆ ತೊಂದರೆ ಇಲ್ಲದಿದ್ದರೂ ಪಂಚಾಯಿತಿಯ ಇತರ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. <br /> <br /> ಬಂಟಹಳ್ಳಿಯಲ್ಲಿ ಕೊಳವೆ ಬಾವಿಯಿಂದ ನೀರನ್ನು ಸಿಸ್ಟನ್ಗೆ ಅಥವಾ ನೀರಿನ ಟ್ಯಾಂಕ್ಗೆ ಹರಿಸದೆ ನೇರವಾಗಿ ಪೈಪ್ಮೂಲಕ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ವ್ಯರ್ಥವಾಗಿ ನೀರು ಚರಂಡಿ ಸೇರುತ್ತಿದೆ. ಗ್ರಾಮದಲ್ಲಿ 2 ಸಿಸ್ಟನ್, ನೀರಿನ ಟ್ಯಾಂಕ್ ಇ್ದ್ದದೂ ಉಪಯೋಗಕ್ಕೆ ಬಾರದಂತಾಗಿದೆ. <br /> <br /> ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಹಾಗೂ ಅಹನ್ಯ ಮತ್ತು ಬಂಟಹಳ್ಳಿ ಗ್ರಾಮಗಳಲ್ಲಿ ಸಮರ್ಪಕವಾಗಿ ಸಿಗುವಂಥ ನೀರನ್ನು ವ್ಯವಸ್ಥಿತವಾಗಿ ಪೂರೈಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಈ ಭಾಗದ ಗ್ರಾಮಸ್ಥರು ಅಸಮಾಧಾನಗೊಂಡಿದ್ದು, ಅಧಿಕಾರಿಗಳು ಗಮನ ಹರಿಸಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು: </strong>ತಾಲ್ಲೂಕಿನ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದ್ದು, ಕೆಲ ಗ್ರಾಮಗಳಲ್ಲಿ ನೀರಿದ್ದರೂ ಸಮರ್ಪಕ ಬಳಕೆಯಾಗುತ್ತಿಲ್ಲ.<br /> <br /> ತಾಲ್ಲೂಕಿನ ಗಡಿ ಪ್ರದೇಶ ಹಾಗೂ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಅಹನ್ಯ, ಪಡುವನಹಳ್ಳಿ, ವಪ್ಪಚ್ಚಹಳ್ಳಿ, ತರಬಹಳ್ಳಿ, ಕಡದನಹಳ್ಳಿ, ಬೆನ್ನಘಟ್ಟ, ಡಿ.ಎನ್.ದೊಡ್ಡಿ ಮತ್ತು ಚಿಕ್ಕದೊಮ್ಮರ ಪಾಳ್ಯದಲ್ಲಿ ತಲಾ ಒಂದು ಕೊಳವೆ ಬಾವಿ, ಬಂಟಹಳ್ಳಿ ಗ್ರಾಮದಲ್ಲಿ 2 ಕೊಳವೆ ಬಾವಿ ಸೇರಿದಂತೆ ಒಟ್ಟು 10 ಕೊಳವೆ ಬಾವಿ ಕಾರ್ಯ ನಿರ್ವಹಿಸುತ್ತಿವೆ. <br /> <br /> ಇನ್ನೆರಡು ಹಳ್ಳಿಗಳಲ್ಲಿ ನೂತನವಾಗಿ ಕೊಳವೆಬಾವಿ ಕೊರೆಯಿಸಿದ್ದು, ನೀರಿನ ವ್ಯವಸ್ಥೆಗಾಗಿ ಪಂಪ್- ಮೋಟಾರ್ ಪೈಪ್ಲೈನ್ ಕಾಮಗಾರಿ ನಡೆಯಬೇಕಾಗಿದೆ. ಉಳಿದಂತೆ ಡಿ.ಎನ್.ದೊಡ್ಡಿ, ಪಡುವನಹಳ್ಳಿ ಮತ್ತು ಚಿಕ್ಕ ದೊಂಬರಪಾಳ್ಯ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. <br /> <br /> ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಹಳ್ಳಿಗಳಿಗೆ ಖಾಸಗಿ ಕೊಳವೆ ಬಾವಿಗಳಿಂದ ನೀರು ಪೂರೈಸುತ್ತಿದ್ದರೂ ಸಮಸ್ಯೆ ಬಗೆಹರಿಯುತ್ತಿಲ್ಲ. ದಿನದಿಂದ ದಿನಕ್ಕೆ ಕೊಳವೆ ಬಾವಿಗಳಲ್ಲಿ ನೀರಿನ ಸಂಗ್ರಹಣೆ ಕಡಿಮೆಯಾಗುತ್ತಿದೆ. ಆ ಪೈಕಿ ಹಲವು ಬತ್ತಿಹೋಗಿ ಇಲ್ಲಿನ ಮಹಿಳೆಯರು ಕಿಲೋಮೀಟರ್ ದೂರದಿಂದ ನೀರು ತರಬೇಕಾಗಿದೆ. <br /> <br /> ಅಹನ್ಯ ಗ್ರಾಮದಲ್ಲಿ ಟ್ಯಾಂಕ್ ಮೂಲಕ ನೀರು ಪೂರೈಸುತ್ತಿದ್ದು, 6 ತಿಂಗಳಿಂದ ಈಚೆಗೆ ಗ್ರಾಮದ ಕೆಲವು ಪ್ರಭಾವಿ ಮುಖಂಡರು ಟ್ಯಾಂಕ್ಗೆ ನೀರು ಪೂರೈಸುವ ಪೈಪ್ಲೈನ್ಗೆ ನೇರವಾಗಿ ನಲ್ಲಿಗಳನ್ನು ಅಳವಡಿಸಿದ್ದರಿಂದ ಕೊಳವೆಬಾವಿ ನೀರು ಟ್ಯಾಂಕಿಗೆ ಹೋಗದೆ ಪೈಪ್ಲೈನಲ್ಲೇ ಹರಿಯುತ್ತಿದೆ.<br /> <br /> ಇದರಿಂದ ಮನೆಗಳಿಗೆ ತೊಂದರೆಯಾಗಿದೆ. ಈಗ ಟ್ಯಾಂಕ್ಗೆ ನೀರು ಹರಿಸುವುದನ್ನು ನಿಲ್ಲಿಸಿ ಕೆರೆಯಲ್ಲೇ ನೇರವಾಗಿ ಕೊಳವೆಬಾವಿಯಿಂದ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ಗ್ರಾಮಸ್ಥರು ಅಲ್ಲೇ ನೀರು ಹಿಡಿದುಕೊಳ್ಳಬೇಕಿದೆ. <br /> <br /> ಗ್ರಾಮದಲ್ಲಿ ವಿದ್ಯುತ್ ಇದ್ದರಂತೂ ಭಾರಿ ಪ್ರಮಾಣದಲ್ಲಿ ನೀರು ಪೋಲಾಗುತ್ತದೆ. ನೀರನ್ನು ಹಿಡಿದ ನಂತರ ಅದನ್ನು ನಿಲ್ಲಿಸಲು ಜನ ಮುಂದಾಗುತ್ತಿಲ್ಲ. ಈ ಗ್ರಾಮದಲ್ಲಿ ನೀರಿಗೆ ತೊಂದರೆ ಇಲ್ಲದಿದ್ದರೂ ಪಂಚಾಯಿತಿಯ ಇತರ ಗ್ರಾಮಗಳಲ್ಲಿ ನೀರಿಗೆ ಹಾಹಾಕಾರ ಉಂಟಾಗಿದೆ. <br /> <br /> ಬಂಟಹಳ್ಳಿಯಲ್ಲಿ ಕೊಳವೆ ಬಾವಿಯಿಂದ ನೀರನ್ನು ಸಿಸ್ಟನ್ಗೆ ಅಥವಾ ನೀರಿನ ಟ್ಯಾಂಕ್ಗೆ ಹರಿಸದೆ ನೇರವಾಗಿ ಪೈಪ್ಮೂಲಕ ನೀರು ಪಡೆಯಲು ವ್ಯವಸ್ಥೆ ಮಾಡಿರುವುದರಿಂದ ವ್ಯರ್ಥವಾಗಿ ನೀರು ಚರಂಡಿ ಸೇರುತ್ತಿದೆ. ಗ್ರಾಮದಲ್ಲಿ 2 ಸಿಸ್ಟನ್, ನೀರಿನ ಟ್ಯಾಂಕ್ ಇ್ದ್ದದೂ ಉಪಯೋಗಕ್ಕೆ ಬಾರದಂತಾಗಿದೆ. <br /> <br /> ಡಿ.ಎನ್.ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲವು ಗ್ರಾಮಗಳಲ್ಲಿ ನೀರಿಗೆ ಸಮಸ್ಯೆ ಹಾಗೂ ಅಹನ್ಯ ಮತ್ತು ಬಂಟಹಳ್ಳಿ ಗ್ರಾಮಗಳಲ್ಲಿ ಸಮರ್ಪಕವಾಗಿ ಸಿಗುವಂಥ ನೀರನ್ನು ವ್ಯವಸ್ಥಿತವಾಗಿ ಪೂರೈಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಬಗ್ಗೆ ಈ ಭಾಗದ ಗ್ರಾಮಸ್ಥರು ಅಸಮಾಧಾನಗೊಂಡಿದ್ದು, ಅಧಿಕಾರಿಗಳು ಗಮನ ಹರಿಸಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>