<p><strong>ಮಾಲೂರು: ‘</strong>ಇವರು ಇಲ್ಲಿಯವರೇ. ಮಂಗಾಪುರದ ಕೇಶವ ಈ ಜಿಲ್ಲೆಯವರೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಹೇಳುವವರೆಗೆ ಕೋಲಾರದ ಜಿಲ್ಲಾ ನಕ್ಷೆಯಲ್ಲಿದ್ದ ಈ ಊರಿನ ಬಗ್ಗೆ ಎಷ್ಟು ಮಂದಿಗೆ ಕುತೂಹಲವಿತ್ತೋ ತಿಳಿಯದು. ಆದರೆ ಜೆಡಿಎಸ್ ಅಭ್ಯರ್ಥಿ ಮಾಲೂರು ತಾಲ್ಲೂಕು ಮಂಗಾಪುರದವರು ಎಂದು ತಿಳಿದ ತಕ್ಷಣ ಕುತೂಲಕ್ಕೆ ಕೈ, ಕಾಲು, ಕಣ್ಣು ಮೂಡಿತು.<br /> <br /> ಕುತೂಹಲದ ಬೆನ್ನಟ್ಟಿ ಹೊರಟ ‘ಪ್ರಜಾವಾಣಿ’ ಮಂಗಾಪುರದ ಭೌಗೋಳಿಕ, ಸಾಮಾಜಿಕ ಚಿತ್ರವನ್ನು ತೆರೆದಿಡುವ ಪ್ರಯತ್ನ ಮಾಡಿದೆ.<br /> <br /> ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಮಂಗಾಪುರ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದ್ದುಕಾಣುತ್ತದೆ.<br /> <br /> ತಾಲ್ಲೂಕಿನ ಸಂತೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಾಪುರ ಗ್ರಾಮ ಪಟ್ಟಣದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. 560 ಮತದಾರರನ್ನು ಹೊಂದಿರುವ ಗ್ರಾಮದಲ್ಲಿ 130 ಕುಟುಂಬಗಳಿದ್ದು, ಬಹುತೇಕ ಭೋವಿ ಜನಾಂಗದವರೇ ವಾಸವಾಗಿದ್ದಾರೆ.<br /> <br /> ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ ಬೇಸಿಗೆಯ ಬೇಗೆ ಪ್ರಾರಂಭವಾಗುತ್ತಿದ್ದಂತೆಯೇ ಕುಡಿಯುವ ನೀರಿನ ಸಮಸ್ಯೆ ಭುಗಿಲೇರಿದ್ದು, ಇಲ್ಲಿನ ಗ್ರಾಮಸ್ಥರು ನೀರಿಗಾಗಿ ಕೃಷಿ ಭೂಮಿಗಳಲ್ಲಿ ಅಳವಡಿಸಿರುವ ಕೊಳವೆ ಬಾವಿಗಳ ಬಳಿ ತೆರಳಿ ಮಾಲೀಕರನ್ನು ಗೋಗರೆದು ನೀರು ತರುವ ಪರಿಸ್ಥಿತಿ ಉಂಟಾಗಿದೆ.<br /> <br /> ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ 71 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಅಗತ್ಯವಿರುವ ಕುಡಿಯುವ ನೀರಿಗಾಗಿ ಪಕ್ಕದ ಇಟ್ಟಿಗೆ ಕಾರ್ಖಾನೆಯನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿಯರು.<br /> <br /> ಇಲ್ಲಿನ ಅಂಗನವಾಡಿ ಶಾಲೆಯಲ್ಲಿ 33 ಮಕ್ಕಳಿದ್ದು, ನೀರಿನ ಕೊರತೆಯಿಂದ ಸೋಮವಾರ ಮಕ್ಕಳಿಗಾಗಿ ಆಹಾರ ತಯಾರು ಮಾಡದೆ ಸಿಬ್ಬಂದಿ ಮನೆಗಳಿಗೆ ಕಳುಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. <br /> <br /> ಗ್ರಾಮದ ಒಂದೆರಡು ರಸ್ತೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಸ್ತೆಗಳು ಇಲ್ಲಿಯ ತನಕ ಸಿಮೆಂಟ್ ಅಥವಾ ಡಾಂಬರಿನ ವಾಸನೆಯನ್ನು ಕಾಣದ ರಸ್ತೆಗಳು ಕಲ್ಲುಗಳು ಹಾಗೂ ಹಳ್ಳ–ಕೊಳ್ಳಗಳಿಂದ ಕೂಡಿವೆ. ಪಾದಚಾರಿಗಳ ಅಥವಾ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಇನ್ನು ಚರಂಡಿಗಳ ಸ್ವಚ್ಛತೆ ಹೇಳತೀರದಾಗಿದೆ.<br /> <br /> ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಹಳೇ ಕೊಳವೆ ಬಾವಿಯಲ್ಲಿ ನೀರಿದ್ದು, ಪಂಪು– ಮೋಟಾರು ಅಳವಡಿಸಲಾಗುತ್ತಿದೆ. ಈಗಾಗಲೇ ಒಂದು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮದಲ್ಲಿನ ಸೇದು ಬಾವಿಯಲ್ಲಿ ಹೂಳು ತೆಗೆದಿರುವುದರಿಂದ ನೀರು ಶೇಖರಣೆಯಾಗಿದೆ.<br /> <br /> ಪಂಚಾಯತಿ ಮತ್ತು ಶಾಸಕರ ಅನುದಾನದಡಿಯಲ್ಲಿ ಕೊಳವೆ ಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೆಂಕಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು: ‘</strong>ಇವರು ಇಲ್ಲಿಯವರೇ. ಮಂಗಾಪುರದ ಕೇಶವ ಈ ಜಿಲ್ಲೆಯವರೇ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿಯವರು ಹೇಳುವವರೆಗೆ ಕೋಲಾರದ ಜಿಲ್ಲಾ ನಕ್ಷೆಯಲ್ಲಿದ್ದ ಈ ಊರಿನ ಬಗ್ಗೆ ಎಷ್ಟು ಮಂದಿಗೆ ಕುತೂಹಲವಿತ್ತೋ ತಿಳಿಯದು. ಆದರೆ ಜೆಡಿಎಸ್ ಅಭ್ಯರ್ಥಿ ಮಾಲೂರು ತಾಲ್ಲೂಕು ಮಂಗಾಪುರದವರು ಎಂದು ತಿಳಿದ ತಕ್ಷಣ ಕುತೂಲಕ್ಕೆ ಕೈ, ಕಾಲು, ಕಣ್ಣು ಮೂಡಿತು.<br /> <br /> ಕುತೂಹಲದ ಬೆನ್ನಟ್ಟಿ ಹೊರಟ ‘ಪ್ರಜಾವಾಣಿ’ ಮಂಗಾಪುರದ ಭೌಗೋಳಿಕ, ಸಾಮಾಜಿಕ ಚಿತ್ರವನ್ನು ತೆರೆದಿಡುವ ಪ್ರಯತ್ನ ಮಾಡಿದೆ.<br /> <br /> ಪಟ್ಟಣಕ್ಕೆ ಕೂಗಳತೆ ದೂರದಲ್ಲಿರುವ ಮಂಗಾಪುರ ಗ್ರಾಮದಲ್ಲಿ ಕುಡಿಯುವ ನೀರು ಸೇರಿದಂತೆ ಮೂಲಸೌಕರ್ಯಗಳ ಕೊರತೆ ಎದ್ದುಕಾಣುತ್ತದೆ.<br /> <br /> ತಾಲ್ಲೂಕಿನ ಸಂತೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಂಗಾಪುರ ಗ್ರಾಮ ಪಟ್ಟಣದಿಂದ ಕೇವಲ 1.5 ಕಿ.ಮೀ ದೂರದಲ್ಲಿದೆ. 560 ಮತದಾರರನ್ನು ಹೊಂದಿರುವ ಗ್ರಾಮದಲ್ಲಿ 130 ಕುಟುಂಬಗಳಿದ್ದು, ಬಹುತೇಕ ಭೋವಿ ಜನಾಂಗದವರೇ ವಾಸವಾಗಿದ್ದಾರೆ.<br /> <br /> ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಈ ಗ್ರಾಮದಲ್ಲಿ ಬೇಸಿಗೆಯ ಬೇಗೆ ಪ್ರಾರಂಭವಾಗುತ್ತಿದ್ದಂತೆಯೇ ಕುಡಿಯುವ ನೀರಿನ ಸಮಸ್ಯೆ ಭುಗಿಲೇರಿದ್ದು, ಇಲ್ಲಿನ ಗ್ರಾಮಸ್ಥರು ನೀರಿಗಾಗಿ ಕೃಷಿ ಭೂಮಿಗಳಲ್ಲಿ ಅಳವಡಿಸಿರುವ ಕೊಳವೆ ಬಾವಿಗಳ ಬಳಿ ತೆರಳಿ ಮಾಲೀಕರನ್ನು ಗೋಗರೆದು ನೀರು ತರುವ ಪರಿಸ್ಥಿತಿ ಉಂಟಾಗಿದೆ.<br /> <br /> ಗ್ರಾಮದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ 1ರಿಂದ 5ನೇ ತರಗತಿಯ 71 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಪ್ರತಿದಿನ ಅಗತ್ಯವಿರುವ ಕುಡಿಯುವ ನೀರಿಗಾಗಿ ಪಕ್ಕದ ಇಟ್ಟಿಗೆ ಕಾರ್ಖಾನೆಯನ್ನು ಅವಲಂಬಿಸಿದ್ದೇವೆ ಎನ್ನುತ್ತಾರೆ ಇಲ್ಲಿನ ಶಿಕ್ಷಕಿಯರು.<br /> <br /> ಇಲ್ಲಿನ ಅಂಗನವಾಡಿ ಶಾಲೆಯಲ್ಲಿ 33 ಮಕ್ಕಳಿದ್ದು, ನೀರಿನ ಕೊರತೆಯಿಂದ ಸೋಮವಾರ ಮಕ್ಕಳಿಗಾಗಿ ಆಹಾರ ತಯಾರು ಮಾಡದೆ ಸಿಬ್ಬಂದಿ ಮನೆಗಳಿಗೆ ಕಳುಹಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ. <br /> <br /> ಗ್ರಾಮದ ಒಂದೆರಡು ರಸ್ತೆಯನ್ನು ಹೊರತುಪಡಿಸಿದರೆ ಉಳಿದೆಲ್ಲಾ ರಸ್ತೆಗಳು ಇಲ್ಲಿಯ ತನಕ ಸಿಮೆಂಟ್ ಅಥವಾ ಡಾಂಬರಿನ ವಾಸನೆಯನ್ನು ಕಾಣದ ರಸ್ತೆಗಳು ಕಲ್ಲುಗಳು ಹಾಗೂ ಹಳ್ಳ–ಕೊಳ್ಳಗಳಿಂದ ಕೂಡಿವೆ. ಪಾದಚಾರಿಗಳ ಅಥವಾ ವಾಹನಗಳ ಸಂಚಾರಕ್ಕೆ ಯೋಗ್ಯವಿಲ್ಲದಂತಾಗಿದೆ. ಇನ್ನು ಚರಂಡಿಗಳ ಸ್ವಚ್ಛತೆ ಹೇಳತೀರದಾಗಿದೆ.<br /> <br /> ಗ್ರಾಮದಲ್ಲಿ ಎರಡು ಕೊಳವೆ ಬಾವಿಗಳಲ್ಲಿ ನೀರು ಬತ್ತಿದೆ. ಹಳೇ ಕೊಳವೆ ಬಾವಿಯಲ್ಲಿ ನೀರಿದ್ದು, ಪಂಪು– ಮೋಟಾರು ಅಳವಡಿಸಲಾಗುತ್ತಿದೆ. ಈಗಾಗಲೇ ಒಂದು ಕೊಳವೆ ಬಾವಿಯಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಗ್ರಾಮದಲ್ಲಿನ ಸೇದು ಬಾವಿಯಲ್ಲಿ ಹೂಳು ತೆಗೆದಿರುವುದರಿಂದ ನೀರು ಶೇಖರಣೆಯಾಗಿದೆ.<br /> <br /> ಪಂಚಾಯತಿ ಮತ್ತು ಶಾಸಕರ ಅನುದಾನದಡಿಯಲ್ಲಿ ಕೊಳವೆ ಬಾವಿ ಕೊರೆಯಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮ ಪಂಚಾಯತಿ ಸದಸ್ಯ ವೆಂಕಟಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>