ಗಂಗಾವತಿ ಎಪಿಎಂಸಿ ಪ್ರಾಂಗಣದಲ್ಲಿರುವ ತಾವರಗೇರಾ ಮೂಲದ ಸಾಯಿನಾಥ್ ಟ್ರೇಡರ್ಸ್ ಜನರಲ್ ಮರ್ಚಂಟ್ ಮತ್ತು ಕಮಿಷನ್ ಏಜೆಂಟ್ ಎಂಬ ಅಂಗಡಿಯಿಂದ ಗುಜರಾತ್ನ ಬರಸದ್ ಎಂಬಲ್ಲಿಗೆ ಈ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು ಎಂದು ಕಂದಾಯ ಇಲಾಖೆ ಆಹಾರ ನಿರೀಕ್ಷಕ ನಿತಿನ್ ಅಗ್ನಿ ದೂರು ನೀಡಿದ್ದಾರೆ. ಅದರ ಅನ್ವಯ ಇಲ್ಲಿಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಅಕ್ಕಿ, ಲಾರಿ ಜಪ್ತಿ ಮಾಡಿ ರಾಜಸ್ತಾನ ಮೂಲದ ಲಾರಿ ಚಾಲಕ ಧನಂಜಯ ಪಟೇಲ್, ಕ್ಲೀನರ್ ಶಂಕರಲಾಲ್ ಪಟೇಲ್ ಎಂಬುವವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.