ಮೇಳದ ವೇಳೆ ತರಬೇತಿಗೆ ಆಸಕ್ತಿ ತೋರಿಸಿ ಹೆಸರು ನೋಂದಾಯಿಸಿರುವವರಿಗೆ ಗವಿಮಠದ ಸಹಯೋಗದಲ್ಲಿ ತೋಟಗಾರಿಕಾ ಇಲಾಖೆಯೇ ತರಬೇತಿ ನೀಡಲಿದೆ ಫೆ. 6ರ ತನಕ ಮೇಳ ನಡೆಯಲಿದ್ದು ಈಗಾಗಲೇ ಸಾವಿರಾರು ಜನ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಲಕ್ಷಾಂತರ ಜನ ಭೇಟಿ ನೀಡಿದ್ದಾರೆ. ‘ಗವಿಮಠದ ಸ್ವಾಮೀಜಿ ಅವರು ಆದಷ್ಟು ಕಡಿಮೆ ಸಾಮಗ್ರಿ ಬಳಕೆ ಮಾಡಿಕೊಂಡು ಕಡಿಮೆ ಖರ್ಚಿನಲ್ಲಿ ಜನಸಾಮಾನ್ಯರು ತಾರಸಿ ಅಥವಾ ಕೈ ತೋಟ ಮಾಡಿಕೊಳ್ಳಲು ಸಾಧ್ಯವಾಗುವಂತೆ ವ್ಯವಸ್ಥೆ ಮಾಡಿ ಎಂದು ಹೇಳಿದ್ದರು. ಅದರಂದು ಸಾಮಾನ್ಯ ಜನರು ಕೂಡ ಸುಲಭವಾಗಿ ತೋಟ ಮಾಡಿಕೊಳ್ಳಲು ಅನುಕೂಲವಾಗುವಂತೆ ಮಾದರಿಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ಆಸಕ್ತರಿಗೆ ತರಬೇತಿ ನೀಡಲಾಗುವುದು’ ಎಂದು ತೋಟಗಾರಿಕಾ ಇಲಾಖೆಯ ಉಪನಿರ್ದೇಶಕ ಕೃಷ್ಣ ಉಕ್ಕುಂದ ತಿಳಿಸಿದರು.