ಗುರುವಾರ ಪಟ್ಟಣದ ಮಾರ್ಗವಾಗಿ ತೆರಳುತ್ತಿದ್ದ ಕುಂದರಗಿಮಠಗೆ ಕನ್ನಡಾಭಿಮಾನಿಗಳು ಅದ್ದೂರಿ ಸ್ವಾಗತ ನೀಡಿ, ಬೀಳ್ಕೊಟ್ಟರು.
ಕನ್ನಡ ರಕ್ಷಣಾ ವೇದಿಕೆಯಿಂದ ಶರಣಪ್ಪ ಸಂಗಟಿ ಮತ್ತಿತರ ಪದಾಧಿಕಾರಿಗಳು ಕನಕದಾಸ ವೃತ್ತದಲ್ಲಿ ಶಾಲು, ಹೂಮಾಲೆ ಹಾಕಿ ಸನ್ಮಾನಿಸಿದರು.
ಈರಣ್ಣ ಜಿ. ಕುಂದರಗಿಮಠ ಮಾತನಾಡಿ, ಸರ್ಕಾರ ನಾಡಿನ ಭಾಷೆ, ಜಲ, ನೆಲದ ಬಗ್ಗೆ ಎಷ್ಟೇ ಮುತುವರ್ಜಿ ವಹಿಸಿ ಕೆಲಸ ಮಾಡಿದರೂ, ಸಮುದಾಯದ ಬೆಂಬಲ ಅಗತ್ಯ. ಈ ಹಿನ್ನೆಲೆಯಲ್ಲಿ ಈಗಾಗಲೇ ಪ್ರತಿಷ್ಠಿತ ಇಂಡಿಯಾ ಬುಕ್ ಆಫ್ ರೆಕಾರ್ಡ್, ಲಿಮ್ಕಾ ಬುಕ್ನಲ್ಲಿ ದಾಖಲೆ ಮಾಡಿರುವ ತಾವು ನಾಡಿನ ಭಾಷೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ರಾಜಧಾನಿಗೆ ತೆರಳುತ್ತಿರುವೆ. ನನ್ನ ಶ್ರಮ ಸಾರ್ಥಕವಾಗಲು ನಮ್ಮ ಮಾತೃಭಾಷೆಯನ್ನು ಎಲ್ಲರೂ ಪ್ರೀತಿಸಿ, ರಕ್ಷಿಸಿ, ಬೆಳೆಸಬೇಕು ಎಂಬುದು ನನ್ನ ಕಳಿಕಳಿಯಾಗಿದೆ ಎಂದರು.