ಕೊಪ್ಪಳ ಎಸಿಬಿಯ ಡಿವೈಎಸ್ಪಿ ಆರ್.ಎಸ್.ಉಜ್ಜನಕೊಪ್ಪ, ಬಳ್ಳಾರಿ ಎಸಿಬಿ ಡಿವೈಎಸ್ಪಿ ಚಂದ್ರಕಾಂತ ಪೂಜಾರ ನೇತೃತ್ವದಲ್ಲಿ ದಾಳಿನಡೆದಿದೆ. ಸಂಜೆವರೆಗೂ ತಪಾಸಣೆ ನಡೆದಿದ್ದು, ಸಮಂಜಸ ಕಾರಣ ನೀಡದ ಕಾರಣ 7 ಜನ ಖಾಸಗಿ ಏಜೆಂಟ್ಗಳು ಹಾಗೂ 4 ಜನ ಡ್ರೈವಿಂಗ್ ಸ್ಕೂಲ್ ಏಜೆಂಟ್ಗಳಿಂದ ₹ 1,69, 668 ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಎಸಿಬಿ ಅಧಿಕಾರಿಗಳು ಮಾಹಿತಿ ನೀಡಿದರು.