ಕುಕನೂರು: 2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ, ರೈತ ಸೇನಾ ಕರ್ನಾಟಕ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಶನಿವಾರ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಸೇನಾ ಕರ್ನಾಟಕ ಜಿಲ್ಲಾ ಮುಖಂಡ ಬಸವರಾಜರಡ್ಡಿ ಬಿಡನಾಳ ಮಾತನಾಡಿ, 2019-20ನೇ ಸಾಲಿನಲ್ಲಿ ಪಾವತಿಯಾಗಬೇಕಾದ ಮುಂಗಾರು ವಿಮಾ ಪರಿಹಾರ ಇನ್ನುವರಿಗೂ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕಳೆದ ಮುಂಗಾರು ಋತುವಿನಲ್ಲಿ ಬೆಳೆಗಳೆಲ್ಲ ಹಾನಿಗೆ ಒಳಗಾಗಿ ರೈತನ ಸಾಲದ ಹೊರೆ ಹೆಚ್ಚುತ್ತಾ ಇದೆ. ಅಲ್ಲದೇ ಈ ಕೊರೊನಾ ಹಾವಳಿಯಿಂದ ಪ್ರಸ್ತುತ ರೈತನ ಸ್ಥೀತಿ ಚಿಂತಾಜನಕವಾಗಿದೆ. ಆದ್ದರಿಂದ ಬೆಳೆ ವಿಮೆ ಪರಿಹಾರ ತಕ್ಷಣ ಜಮಾ ಮಾಡಬೇಕೆಂದು ತಹಿಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದರು.