<p><strong>ಕುಕನೂರು: </strong>2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ, ರೈತ ಸೇನಾ ಕರ್ನಾಟಕ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಶನಿವಾರ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.</p>.<p>ರೈತ ಸೇನಾ ಕರ್ನಾಟಕ ಜಿಲ್ಲಾ ಮುಖಂಡ ಬಸವರಾಜರಡ್ಡಿ ಬಿಡನಾಳ ಮಾತನಾಡಿ, 2019-20ನೇ ಸಾಲಿನಲ್ಲಿ ಪಾವತಿಯಾಗಬೇಕಾದ ಮುಂಗಾರು ವಿಮಾ ಪರಿಹಾರ ಇನ್ನುವರಿಗೂ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕಳೆದ ಮುಂಗಾರು ಋತುವಿನಲ್ಲಿ ಬೆಳೆಗಳೆಲ್ಲ ಹಾನಿಗೆ ಒಳಗಾಗಿ ರೈತನ ಸಾಲದ ಹೊರೆ ಹೆಚ್ಚುತ್ತಾ ಇದೆ. ಅಲ್ಲದೇ ಈ ಕೊರೊನಾ ಹಾವಳಿಯಿಂದ ಪ್ರಸ್ತುತ ರೈತನ ಸ್ಥೀತಿ ಚಿಂತಾಜನಕವಾಗಿದೆ. ಆದ್ದರಿಂದ ಬೆಳೆ ವಿಮೆ ಪರಿಹಾರ ತಕ್ಷಣ ಜಮಾ ಮಾಡಬೇಕೆಂದು ತಹಿಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದರು.</p>.<p>ವೀರಯ್ಯ ಶಿರೂರಮಠ, ಹೊನ್ನಪ್ಪ ಮರಡಿ, ಬಸವರಾಜ ಮೇಟಿ, ಈರಣ್ಣ ಬೆಣಕಲ್, ಶರಣಪ್ಪ ಮಾಸೂರು, ಈರಪ್ಪ ಗಿರಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು: </strong>2019-20ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹಾನಿಯಾದ ಬೆಳೆಗೆ ವಿಮಾ ಪರಿಹಾರಕ್ಕಾಗಿ ಆಗ್ರಹಿಸಿ, ರೈತ ಸೇನಾ ಕರ್ನಾಟಕ ತಾಲ್ಲೂಕು ಘಟಕದ ನೇತೃತ್ವದಲ್ಲಿ ರೈತರು ಶನಿವಾರ ತಹಶೀಲ್ದಾರ್ ಕಿರಣಕುಮಾರ ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.</p>.<p>ರೈತ ಸೇನಾ ಕರ್ನಾಟಕ ಜಿಲ್ಲಾ ಮುಖಂಡ ಬಸವರಾಜರಡ್ಡಿ ಬಿಡನಾಳ ಮಾತನಾಡಿ, 2019-20ನೇ ಸಾಲಿನಲ್ಲಿ ಪಾವತಿಯಾಗಬೇಕಾದ ಮುಂಗಾರು ವಿಮಾ ಪರಿಹಾರ ಇನ್ನುವರಿಗೂ ರೈತರ ಖಾತೆಗಳಿಗೆ ಜಮೆಯಾಗಿಲ್ಲ. ಕಳೆದ ಮುಂಗಾರು ಋತುವಿನಲ್ಲಿ ಬೆಳೆಗಳೆಲ್ಲ ಹಾನಿಗೆ ಒಳಗಾಗಿ ರೈತನ ಸಾಲದ ಹೊರೆ ಹೆಚ್ಚುತ್ತಾ ಇದೆ. ಅಲ್ಲದೇ ಈ ಕೊರೊನಾ ಹಾವಳಿಯಿಂದ ಪ್ರಸ್ತುತ ರೈತನ ಸ್ಥೀತಿ ಚಿಂತಾಜನಕವಾಗಿದೆ. ಆದ್ದರಿಂದ ಬೆಳೆ ವಿಮೆ ಪರಿಹಾರ ತಕ್ಷಣ ಜಮಾ ಮಾಡಬೇಕೆಂದು ತಹಿಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಆಗ್ರಹಿಸಿದರು.</p>.<p>ವೀರಯ್ಯ ಶಿರೂರಮಠ, ಹೊನ್ನಪ್ಪ ಮರಡಿ, ಬಸವರಾಜ ಮೇಟಿ, ಈರಣ್ಣ ಬೆಣಕಲ್, ಶರಣಪ್ಪ ಮಾಸೂರು, ಈರಪ್ಪ ಗಿರಡ್ಡಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>