<p><strong>ಗಂಗಾವತಿ</strong>: ದೇಶದಲ್ಲಿ ಜಾರಿಯಾಗುತ್ತಿರುವ ಕಾರ್ಮಿಕ ಸಂಹಿತೆ, ಖಾಸಗಿಕರಣ, ಹೊಸ ಅಪರಾಧ ಕಾನೂನುಗಳನ್ನ ವಿರೋಧಿಸಿ ಶುಕ್ರವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಅಖಿಲ ಭಾರತ ಆಂದೋಲನ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.</p>.<p>ಹೋರಾಟಗಾರ ಭಾರದ್ವಾಜ್ ಮಾತನಾಡಿ, ‘ಕಾರ್ಮಿಕರು ತಮ್ಮ ಕಾನೂನುಗಳನ್ನು ಹಲವು ಹೋರಾಟಗಳನ್ನು ನಡೆಸಿ ಪಡೆದಿದ್ದು, ಕಾರ್ಮಿಕರ ಹಿತ ಕಾಪಾಡಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುತ್ತಿರುವುದು ಖಂಡನೀಯ. ಜಾರಿ ಮಾಡುತ್ತಿರುವ ಹೊಸ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.</p>.<p>ಸಿಪಿಐಎಂಎಲ್ ಲಿಬರೇಷನ್ ಪಕ್ಷ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ, ‘ಕಾರ್ಮಿಕ ವಿರೋಧಿ ಮತ್ತು ಹೊಸ ಅಪರಾಧ ಕಾನೂನು ಜಾರಿಗೆ ತರುವ ಮೂಲಕ ದೇಶದಲ್ಲಿ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ತರುತ್ತಿದ್ದು, ಕಾರ್ಮಿಕರೆಲ್ಲರೂ ಜಾಗೃತರಾಗಿ ಈ ಕಾನೂನುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು’ ಎಂದು ಮಾಹಿತಿ ನೀಡಿದರು.</p>.<p>ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಬಾಬರ, ಗಿಡ್ಡಪ್ಪ, ಜಿಲೇಬಿಗೌಸ, ಹನುಮಂತ ಮಲ್ಲಾಪುರ, ಹುಸೇನ ಗೋವಾ, ಮಾಯಮ್ಮ, ಪಾರ್ವತಮ್ಮ, ಇಂದ್ರಮ್ಮ, ಹನುಮಂತಪ್ಪ, ಭಿಮಣ್ಣ, ನಾಗರಾಜ, ಹುಚ್ಚಪ್ಪ, ಆಲಂಸಾಬ, ಆನಂದ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ದೇಶದಲ್ಲಿ ಜಾರಿಯಾಗುತ್ತಿರುವ ಕಾರ್ಮಿಕ ಸಂಹಿತೆ, ಖಾಸಗಿಕರಣ, ಹೊಸ ಅಪರಾಧ ಕಾನೂನುಗಳನ್ನ ವಿರೋಧಿಸಿ ಶುಕ್ರವಾರ ನಗರದ ಕೃಷ್ಣದೇವರಾಯ ವೃತ್ತದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ(ಎಂಎಲ್) ಲಿಬರೇಷನ್, ಸಿಪಿಎಂ(ಎಂಎಲ್) ಲಿಬರೇಷನ್ ಪಕ್ಷದ ಸದಸ್ಯರು ಅಖಿಲ ಭಾರತ ಆಂದೋಲನ ಅಭಿಯಾನದ ಮೂಲಕ ಪ್ರತಿಭಟನೆ ನಡೆಸಿದರು.</p>.<p>ಹೋರಾಟಗಾರ ಭಾರದ್ವಾಜ್ ಮಾತನಾಡಿ, ‘ಕಾರ್ಮಿಕರು ತಮ್ಮ ಕಾನೂನುಗಳನ್ನು ಹಲವು ಹೋರಾಟಗಳನ್ನು ನಡೆಸಿ ಪಡೆದಿದ್ದು, ಕಾರ್ಮಿಕರ ಹಿತ ಕಾಪಾಡಬೇಕಾದ ಕೇಂದ್ರ ಸರ್ಕಾರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸುತ್ತಿರುವುದು ಖಂಡನೀಯ. ಜಾರಿ ಮಾಡುತ್ತಿರುವ ಹೊಸ ಕಾನೂನುಗಳನ್ನು ಕೂಡಲೇ ಹಿಂಪಡೆಯಬೇಕು’ ಎಂದು ಒತ್ತಾಯಿಸಿದರು.</p>.<p>ಸಿಪಿಐಎಂಎಲ್ ಲಿಬರೇಷನ್ ಪಕ್ಷ ಜಿಲ್ಲಾ ಕಾರ್ಯದರ್ಶಿ ವಿಜಯ ದೊರೆರಾಜು ಮಾತನಾಡಿ, ‘ಕಾರ್ಮಿಕ ವಿರೋಧಿ ಮತ್ತು ಹೊಸ ಅಪರಾಧ ಕಾನೂನು ಜಾರಿಗೆ ತರುವ ಮೂಲಕ ದೇಶದಲ್ಲಿ ಕೇಂದ್ರ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ತರುತ್ತಿದ್ದು, ಕಾರ್ಮಿಕರೆಲ್ಲರೂ ಜಾಗೃತರಾಗಿ ಈ ಕಾನೂನುಗಳ ವಿರುದ್ಧ ನಿರಂತರ ಹೋರಾಟ ನಡೆಸಬೇಕು’ ಎಂದು ಮಾಹಿತಿ ನೀಡಿದರು.</p>.<p>ಎಐಸಿಸಿಟಿಯು ಸಂಘಟನೆ ಜಿಲ್ಲಾಧ್ಯಕ್ಷ ಸಣ್ಣ ಹನುಮಂತಪ್ಪ ಹುಲಿಹೈದರ, ಪರುಶುರಾಮ, ಬಾಬರ, ಗಿಡ್ಡಪ್ಪ, ಜಿಲೇಬಿಗೌಸ, ಹನುಮಂತ ಮಲ್ಲಾಪುರ, ಹುಸೇನ ಗೋವಾ, ಮಾಯಮ್ಮ, ಪಾರ್ವತಮ್ಮ, ಇಂದ್ರಮ್ಮ, ಹನುಮಂತಪ್ಪ, ಭಿಮಣ್ಣ, ನಾಗರಾಜ, ಹುಚ್ಚಪ್ಪ, ಆಲಂಸಾಬ, ಆನಂದ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>