ನಾನೇನೂ ವೇಗವಾಗಿ ಬರುತ್ತಿರಲಿಲ್ಲ. ಹಂಪ್ಸ್ ಇರುವ ಕಲ್ಪನೆ ಬಾರದಂತೆ ಹಾಕಲಾಗಿದೆ. ಆಯತಪ್ಪಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದೆ. ಪುಣ್ಯಾತ್ಮರು ಆಸ್ಪತ್ರೆಗೆ ಸೇರಿಸಿ ಮರುಜನ್ಮ ನೀಡಿದರು. ಇಂಥಹ ಅಸುರಕ್ಷತೆಯ ಹಂಪ್ಸ್ಗಳ ಅವಶ್ಯಕತೆ ಇದೆಯೇ? ಸಂಬಂಧಿಸಿದವರು ಗಮನಹರಿಸಿ ಮುಂದೆ ಆಗುವ ಅನಾಹುತ ತಪ್ಪಿಸಬೇಕು
ಶಿವಶಂಕರ ಹರಿಜನ ಕಾರಟಗಿ
ರಸ್ತೆ ನಿರ್ಮಿಸುವಾಗ ಜನರು ಹಂಪ್ಸ್ ಹಾಕಲು ಒತ್ತಾಯಿಸಿ ಕಾಮಗಾರಿ ನಿಲ್ಲಿಸಿದ್ದರು. ಅವರ ಬೇಡಿಕೆಯಂತೆ ಹಂಪ್ಸ್ಗಳನ್ನು ಇತರೆಡೆ ಹಾಕಿಲ್ಲ. ಗ್ರಾಮದ ಆರಂಭ ಅಂತ್ಯದಲ್ಲಿ ಮಾತ್ರ ಹಾಕಿದ್ದೇವೆ. ಅವರ ಬೇಡಿಕೆ ಇನ್ನೂ ಕೆಲವು ಕಡೆ ಹಾಕಬೇಕು ಎಂಬುದಾಗಿತ್ತು. ಜನರ ಆಗ್ರಹಕ್ಕೆ ಮಣಿದು ಹಂಪ್ಸ್ ಹಾಕುವುದು ಅನಿವಾರ್ಯವಾಗಿತ್ತು