<p><strong>ಗಂಗಾವತಿ</strong>: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಿಂದ ಕಂದಕಕ್ಕೆ ಬಿದ್ದಿದ್ದ ಮಹಿಳೆಯನ್ನು ದೇವಾಲಯ ಸಿಬ್ಬಂದಿ ರಕ್ಷಿಸಿದ್ದು, ಗುರುವಾರ ಸಂಜೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಅರೆಪ್ರಜ್ಞಾವಸ್ಥೆಯಲ್ಲಿರುವ ಮಹಿಳೆ ವಿಚಾರಿಸಲಾಗಿದ್ದು, ರಾಯಚೂರು ಮೂಲದ ಅಶ್ವಿನಿ ಎಂದು ಹೇಳುತ್ತಿದ್ದು, ಬೇರೆ ಏನನ್ನು ಹೇಳುತ್ತಿಲ್ಲ. ಎಡಗಾಲಿಗೆ ಒಳಪೆಟ್ಟಾಗಿದ್ದು, ಹುಳುಗಳು ಕಡಿದಿದ್ದರಿಂದ ಕೈ, ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ತುರಿಸಿದ ಕಲೆಗಳಿವೆ.</p>.<p>ಬೆಟ್ಟದ ಮೇಲಿನ ದೇವಾಲಯದ ಹಿಂಭಾಗದಲ್ಲಿ ಸನ್ಸೆಟ್ ಪ್ರದೇಶವಿದ್ದು, ಅದರ ಕೆಳಭಾಗದಲ್ಲಿರುವ 40 ಅಡಿ ಆಳದ ಕಂದಕದಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಸೆಲ್ಫಿಗಾಗಿ ಸನ್ ಸೆಟ್ ಹತ್ತಿರ ಹೋಗಿದ್ದ ಪ್ರವಾಸಿಗರಿಗೆ, ಕಂದಕದಿಂದ ಮಹಿಳೆ ಕೂಗುತ್ತಿರುವುದನ್ನು ನೋಡಿ, ದೇವಾಲಯ ಸಿಬ್ಬಂದಿಗೆ ತಿಳಿಸಿದ್ದಾರೆ.</p>.<p>ಸಿಬ್ಬಂದಿ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿ, ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಗೆ ದೇವಾಲಯ ಸಿಇಒ ಪ್ರಕಾಶ ರಾವ್, ಡಿವೈಎಸ್ಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗ್ರಾಮೀಣ ಪಿಐ ಸೋಮಶೇಖರ ಗೌಡ ಜುತ್ತಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು</p>.<p>ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾಳೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿಕಿತ್ಸೆ ನೀಡಿದ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಒಬ್ಬಳೆ ಬೆಟ್ಟಕ್ಕೆ ಬಂದಿದ್ದಳು ಅಥವಾ ಯಾರ ಜತೆಗಾದರೂ ಬಂದಿದ್ದರು ಎಂಬುದ್ದನ್ನು ಬೆಟ್ಟದ ಮೇಲಿನ ಸಿಸಿಟಿವಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಂಗಾವತಿ</strong>: ತಾಲ್ಲೂಕಿನ ಚಿಕ್ಕರಾಂಪುರ ಸಮೀಪದ ಅಂಜನಾದ್ರಿ ಬೆಟ್ಟದಿಂದ ಕಂದಕಕ್ಕೆ ಬಿದ್ದಿದ್ದ ಮಹಿಳೆಯನ್ನು ದೇವಾಲಯ ಸಿಬ್ಬಂದಿ ರಕ್ಷಿಸಿದ್ದು, ಗುರುವಾರ ಸಂಜೆ ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.</p>.<p>ಅರೆಪ್ರಜ್ಞಾವಸ್ಥೆಯಲ್ಲಿರುವ ಮಹಿಳೆ ವಿಚಾರಿಸಲಾಗಿದ್ದು, ರಾಯಚೂರು ಮೂಲದ ಅಶ್ವಿನಿ ಎಂದು ಹೇಳುತ್ತಿದ್ದು, ಬೇರೆ ಏನನ್ನು ಹೇಳುತ್ತಿಲ್ಲ. ಎಡಗಾಲಿಗೆ ಒಳಪೆಟ್ಟಾಗಿದ್ದು, ಹುಳುಗಳು ಕಡಿದಿದ್ದರಿಂದ ಕೈ, ಕಾಲು ಮತ್ತು ಕುತ್ತಿಗೆ ಭಾಗದಲ್ಲಿ ತುರಿಸಿದ ಕಲೆಗಳಿವೆ.</p>.<p>ಬೆಟ್ಟದ ಮೇಲಿನ ದೇವಾಲಯದ ಹಿಂಭಾಗದಲ್ಲಿ ಸನ್ಸೆಟ್ ಪ್ರದೇಶವಿದ್ದು, ಅದರ ಕೆಳಭಾಗದಲ್ಲಿರುವ 40 ಅಡಿ ಆಳದ ಕಂದಕದಲ್ಲಿ ಮಹಿಳೆ ಪತ್ತೆಯಾಗಿದ್ದಾಳೆ. ಸೆಲ್ಫಿಗಾಗಿ ಸನ್ ಸೆಟ್ ಹತ್ತಿರ ಹೋಗಿದ್ದ ಪ್ರವಾಸಿಗರಿಗೆ, ಕಂದಕದಿಂದ ಮಹಿಳೆ ಕೂಗುತ್ತಿರುವುದನ್ನು ನೋಡಿ, ದೇವಾಲಯ ಸಿಬ್ಬಂದಿಗೆ ತಿಳಿಸಿದ್ದಾರೆ.</p>.<p>ಸಿಬ್ಬಂದಿ ನೆರವಿನೊಂದಿಗೆ ಮಹಿಳೆಯನ್ನು ರಕ್ಷಿಸಿ, ನಗರದ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯಾವುದೇ ಮಾಹಿತಿ ನೀಡುತ್ತಿಲ್ಲ. ಆಸ್ಪತ್ರೆಗೆ ದೇವಾಲಯ ಸಿಇಒ ಪ್ರಕಾಶ ರಾವ್, ಡಿವೈಎಸ್ಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಗ್ರಾಮೀಣ ಪಿಐ ಸೋಮಶೇಖರ ಗೌಡ ಜುತ್ತಲ್ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು</p>.<p>ಮಾನಸಿಕ ಅಸ್ವಸ್ಥಳಂತೆ ವರ್ತಿಸುತ್ತಿದ್ದು, ಚಿಕಿತ್ಸೆಗೆ ಸ್ಪಂದಿಸಿದ್ದಾಳೆ. ಅರೆ ಪ್ರಜ್ಞಾಸ್ಥಿತಿಯಲ್ಲಿದ್ದರಿಂದ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿಕಿತ್ಸೆ ನೀಡಿದ ಸಿಬ್ಬಂದಿ ತಿಳಿಸಿದ್ದಾರೆ.</p>.<p>ಒಬ್ಬಳೆ ಬೆಟ್ಟಕ್ಕೆ ಬಂದಿದ್ದಳು ಅಥವಾ ಯಾರ ಜತೆಗಾದರೂ ಬಂದಿದ್ದರು ಎಂಬುದ್ದನ್ನು ಬೆಟ್ಟದ ಮೇಲಿನ ಸಿಸಿಟಿವಿ ಪರಿಶೀಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್.ಅರಸಿದ್ದಿ ಭೇಟಿ ನೀಡಿ, ಪರಿಶೀಲಿಸಿ ಮಾಹಿತಿ ಪಡೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>