<p><strong>ಕುಕನೂರು:</strong> ತಲೆಮಾರುಗಳಿಂದ ಕಲೆಯನ್ನು ಪೋಷಿಸುತ್ತ ಬಂದಿರುವ ಕುಟುಂಬದಲ್ಲಿ ಜನಿಸಿ, ಜೀವನದುದ್ದಕ್ಕೂ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಇಲ್ಲಿನ ಕಲಾವಿದ ಬಾಬಣ್ಣ.</p>.<p>ಪ್ರಸಿದ್ಧ ಕಲಾವಿದೆ ಕುಕನೂರಿನ ರೆಹಿಮಾನವ್ವ ಅವರ ಪುತ್ರರಾಗಿರುವ ಬಾಬಣ್ಣ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ದೊಡ್ಡವಾಡ, ಅರಿಶಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.</p>.<p>ಸ್ವಲ್ಪದಿನ ತಾಯಿಯವರ ಲಲಿತ ನಾಟ್ಯ ಸಂಘವನ್ನು ಮುನ್ನಡೆಸಿದ ಅವರು ನಂತರ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ, ಹತ್ತು ವರ್ಷ ನಡೆಸಿದರು. ಕಂಪನಿ ನಿಂತ ಬಳಿಕ, ಪುನಃ ಬೇರೆ ಬೇರೆ ಕಂಪನಿಗಳ ನಾಟಕಗಳಲ್ಲಿ ನಟನೆ ಮುಂದುವರಿಸಿದರು.</p>.<p>‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ ಮತ್ತು ವೇಮನ ಪಾತ್ರಗಳಿಗೆ ಜೀವ ತುಂಬಿದರು.</p>.<p>15 ವರ್ಷಗಳ ಬಳಿಕ ವೃತ್ತಿರಂಗಭೂಮಿಯ ಮತ್ತೊಬ್ಬ ನಟ ಎಂ.ಎಸ್.ಕೊಟ್ರೇಶ ಅವರೊಂದಿಗೆ ತಂಡ ಕಟ್ಟಿಕೊಂಡು, ವಿವಿಧ ಊರುಗಳಲ್ಲಿ ನಾಟಕ ಪ್ರದರ್ಶಿಸಿದರು.</p>.<p>87ರ ಇಳಿವಯಸ್ಸಿನಲ್ಲೂ ಬಾಬಣ್ಣ ಅವರು ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಮಕ್ಕಳು ಮತ್ತು ಯುವಜನರಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಾರೆ. ಪ್ರತಿ ತಿಂಗಳು 3 ಅಥವಾ 4 ನಾಟಕಗಳಲ್ಲಿ ಅಭಿನಯಿಸುತ್ತಾರೆ.</p>.<p>ಬಾಬಣ್ಣನವರಿಗೆ ಈಚೆಗೆ ಬೆಂಗಳೂರಿನಲ್ಲಿ ‘ವರದರಾಜ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಪತ್ನಿ ಮತ್ತು ಮಕ್ಕಳ ಜತೆ ಕುಕನೂರಿನಲ್ಲಿ ನೆಲೆಸಿದ್ದಾರೆ.</p>.<p>‘ಬಾಬಣ್ಣ ಅವರು ರಂಗಭೂಮಿಗೆ ನೀಡಿರುವ ಕೊಡುಗೆ ಮತ್ತು ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕು. ಅವರ ಕಲಾ ಸೇವೆಯನ್ನು ಪ್ರೋತ್ಸಾಹಿಸಬೇಕು’ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಕನೂರು:</strong> ತಲೆಮಾರುಗಳಿಂದ ಕಲೆಯನ್ನು ಪೋಷಿಸುತ್ತ ಬಂದಿರುವ ಕುಟುಂಬದಲ್ಲಿ ಜನಿಸಿ, ಜೀವನದುದ್ದಕ್ಕೂ ರಂಗಭೂಮಿಯನ್ನೇ ಉಸಿರಾಗಿಸಿಕೊಂಡವರು ಇಲ್ಲಿನ ಕಲಾವಿದ ಬಾಬಣ್ಣ.</p>.<p>ಪ್ರಸಿದ್ಧ ಕಲಾವಿದೆ ಕುಕನೂರಿನ ರೆಹಿಮಾನವ್ವ ಅವರ ಪುತ್ರರಾಗಿರುವ ಬಾಬಣ್ಣ ಹಲವು ವರ್ಷಗಳಿಂದ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದಾರೆ.</p>.<p>ದೊಡ್ಡವಾಡ, ಅರಿಶಿಣಗೋಡಿ, ಚಿಂದೋಡಿ, ಗುಡಿಗೇರಿ, ಶೇಖಮಾಸ್ತರ, ಪುಟ್ಟರಾಜ ಗವಾಯಿಗಳ ನಾಟಕ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ.</p>.<p>ಸ್ವಲ್ಪದಿನ ತಾಯಿಯವರ ಲಲಿತ ನಾಟ್ಯ ಸಂಘವನ್ನು ಮುನ್ನಡೆಸಿದ ಅವರು ನಂತರ ವಿಜಯಲಕ್ಷ್ಮಿ ನಾಟ್ಯ ಸಂಘ ಆರಂಭಿಸಿ, ಹತ್ತು ವರ್ಷ ನಡೆಸಿದರು. ಕಂಪನಿ ನಿಂತ ಬಳಿಕ, ಪುನಃ ಬೇರೆ ಬೇರೆ ಕಂಪನಿಗಳ ನಾಟಕಗಳಲ್ಲಿ ನಟನೆ ಮುಂದುವರಿಸಿದರು.</p>.<p>‘ಹೇಮರಡ್ಡಿ ಮಲ್ಲಮ್ಮ’ ನಾಟಕದಲ್ಲಿ ನಾಗಮ್ಮ, ಮಹಾದೇವಿ, ಪದ್ಮವ್ವ, ಚಿತ್ತರಂಜನಿ, ಮಲ್ಲಿಕಾರ್ಜುನ ಮತ್ತು ವೇಮನ ಪಾತ್ರಗಳಿಗೆ ಜೀವ ತುಂಬಿದರು.</p>.<p>15 ವರ್ಷಗಳ ಬಳಿಕ ವೃತ್ತಿರಂಗಭೂಮಿಯ ಮತ್ತೊಬ್ಬ ನಟ ಎಂ.ಎಸ್.ಕೊಟ್ರೇಶ ಅವರೊಂದಿಗೆ ತಂಡ ಕಟ್ಟಿಕೊಂಡು, ವಿವಿಧ ಊರುಗಳಲ್ಲಿ ನಾಟಕ ಪ್ರದರ್ಶಿಸಿದರು.</p>.<p>87ರ ಇಳಿವಯಸ್ಸಿನಲ್ಲೂ ಬಾಬಣ್ಣ ಅವರು ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಈಗಲೂ ಮಕ್ಕಳು ಮತ್ತು ಯುವಜನರಿಗಾಗಿ ನಾಟಕಗಳನ್ನು ನಿರ್ದೇಶಿಸುತ್ತಾರೆ. ಪ್ರತಿ ತಿಂಗಳು 3 ಅಥವಾ 4 ನಾಟಕಗಳಲ್ಲಿ ಅಭಿನಯಿಸುತ್ತಾರೆ.</p>.<p>ಬಾಬಣ್ಣನವರಿಗೆ ಈಚೆಗೆ ಬೆಂಗಳೂರಿನಲ್ಲಿ ‘ವರದರಾಜ’ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರು ಪತ್ನಿ ಮತ್ತು ಮಕ್ಕಳ ಜತೆ ಕುಕನೂರಿನಲ್ಲಿ ನೆಲೆಸಿದ್ದಾರೆ.</p>.<p>‘ಬಾಬಣ್ಣ ಅವರು ರಂಗಭೂಮಿಗೆ ನೀಡಿರುವ ಕೊಡುಗೆ ಮತ್ತು ಮಾಡಿದ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರವು ಪ್ರಶಸ್ತಿಗಳನ್ನು ಪ್ರದಾನ ಮಾಡಬೇಕು. ಅವರ ಕಲಾ ಸೇವೆಯನ್ನು ಪ್ರೋತ್ಸಾಹಿಸಬೇಕು’ ಎಂದು ಸಾರ್ವಜನಿಕರು ಅಭಿಪ್ರಾಯಪಡುತ್ತಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>