‘ಕಳೆದ ಮೂರು ದಿನಗಳ ಹಿಂದೆ ಶಂಕ್ರಪ್ಪ ನೆಟಗುಡ್ಡ ಎಂಬ ರೈತರ ಹೊಲದಲ್ಲಿ 60 ಕಲ್ಲಂಗಡಿಗಳನ್ನು ಕರಡಿಗಳು ತಿಂದು ಹಾಕಿವೆ. ಅಲ್ಲದೆ, ಸೋಮವಾರವೂ ಮತ್ತೊಂದು ಘಟನೆ ನಡೆದಿದೆ. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ. ರೈತರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ’ ಎಂದು ಕುಂಟೆಪ್ಪ ಹಾಗೂ ಯಮನೂರಪ್ಪ ದೂರಿದರು.