ಕೊಪ್ಪಳ: ತಾಲ್ಲೂಕಿನ ಇರಕಲಗಡ ಗ್ರಾಮದಲ್ಲಿ ಭಾನುವಾರ ರಾತ್ರಿ ವ್ಯಕ್ತಿಯೊಬ್ಬರ ಮೇಲೆ ನಾಲ್ಕು ಕರಡಿಗಳು ದಾಳಿ ನಡೆಸಿವೆ.
ಕೊಪ್ಪಳ ತಾಲ್ಲೂಕಿನ ಹೊಸೂರು ಗ್ರಾಮದ ಈರಣ್ಣ ಜಾಲಿಗಿಡ ಕರಡಿ ದಾಳಿಗೆ ಒಳಗಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದಾರೆ. ಹೊಸೂರು ಗ್ರಾಮದಿಂದ ಹುಲಗಿಗೆ ನಡೆದುಕೊಂಡು ಹೊರಟಿದ್ದಾಗ ಘಟನೆ ನಡೆದಿದೆ.
ಈರಣ್ಣ ಅವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸಾವು ನೋವಿನ ನಡುವೆ ಹೋರಾಟ ಮಾಡುತ್ತಿದ್ದಾರೆ.