ಕೊಪ್ಪಳ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪ್ರಸ್ತುತ ಸಾಲಿನ ‘ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪುರಸ್ಕಾರ’ಕ್ಕೆ 11 ಜನ ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.
ಕಿರಿಯ ಪ್ರಾಥಮಿಕ ವಿಭಾಗ:ಕೊಪ್ಪಳ ತಾಲ್ಲೂಕಿನ ಹಳೇ ಲಿಂಗಾಪುರದ ಸರ್ಕಾರಿ ಶಾಲೆಯ ಸುರೇಶ ವಿರುಪಣ್ಣ ಬೇವಿನಹಳ್ಳಿ, ಗಂಗಾವತಿಯ ಹಳೇಜಂಗಮರಕಲ್ಗುಡಿಯ ಮೈಲಾರಪ್ಪ ಬೂದಿಹಾಳ, ಯಲಬುರ್ಗಾ ತಾಲ್ಲೂಕಿನ ಬನ್ನಿಕೊಪ್ಪದ ಎಚ್.ಎ.ನದಾಫ್.
ಹಿರಿಯ ಪ್ರಾಥಮಿಕ ವಿಭಾಗ: ಕೊಪ್ಪಳ ತಾಲ್ಲೂಕಿನ ಭಾಗ್ಯನಗರದ ಯಲ್ಲಪ್ಪ.ಎಂ, ಗಂಗಾವತಿಯ ಜಂಗಮರಕಲ್ಗುಡಿಯ ಗೌರಮ್ಮ, ಕುಷ್ಟಗಿ ತಾಲ್ಲೂಕಿನ ಮಿಯ್ಯಾಪುರದ ಸದಾಶಿವಯ್ಯ ಶಿರೂರು, ಯಲಬುರ್ಗಾ ತಾಲ್ಲೂಕಿನ ಪುಟಗಮರಿಯ ಹನಮಂತಪ್ಪ ಹೊಸಳ್ಳಿ.
ಪ್ರೌಢಶಾಲಾ ವಿಭಾಗ: ಕೊಪ್ಪಳ ತಾಲ್ಲೂಕಿನ ಮೈನಳ್ಳಿಯ ಶ್ರೀನಿವಾಸ್ ನಾಯಕ್, ಗಂಗಾವತಿಯ ಢಣಾಪುರದ ಹನಮಂತ ಸಾ, ಕುಷ್ಟಗಿಯ ಹನಮಸಾಗರದ ಹಬೀಬ್ ಪಾಶಾ, ಯಲಬುರ್ಗಾದ ತಾಳಕೇರಿಯ ತಿಮ್ಮಣ್ಣ ಜಗ್ಗಲ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಡಿಡಿಪಿಐ ದೊಡ್ಡಬಸಪ್ಪ ನೀರಲಕೇರಿ ತಿಳಿಸಿದ್ದಾರೆ.