ಕಳೆದ ತಿಂಗಳು ಕೋವಿಡ್ ಸಂದರ್ಭದಲ್ಲಿಯೇ ಈ ಕುರಿತು ಒಳಜಗಳ ಬೀದಿಗೆ ಬಂದಿದ್ದು,ಸಚಿವರು ಜಿಲ್ಲೆಗೆ ಬಂದರೆ ಅವರನ್ನು ಸ್ವಾಗತಿಸಲು ಕಾರ್ಯಕರ್ತರ ಪಡೆ ಕೂಡಾ ಉತ್ಸುಕತೆಯನ್ನು ತೋರಿಸುತ್ತಿಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಎದ್ದಿರುವಂತೆ ಇಲ್ಲಿಯೂಉಸ್ತುವಾರಿ ಸಚಿವರ ಬದಲಾವಣೆಗೆ ತೆರೆಮರೆಯಲ್ಲಿ ಕೆಲಸ ನಡೆಯುತ್ತಿದೆ. ಅಲ್ಲದೆ ಜಿಲ್ಲೆಯ ಉಸ್ತುವಾರಿ ಬಗ್ಗೆಯೂ ಸಚಿವರಿಗೂ ಅಷ್ಟೊಂದು ಆಸಕ್ತಿ ಇಲ್ಲ ಎಂಬುವುದು ಅನೇಕ ಸಂದರ್ಭದಲ್ಲಿಕಂಡು ಬಂದಿದೆ.