ಹನುಮಪ್ಪ ಅಬ್ಬಿಗೇರಿ ಎಂಬುವವರದ್ದು ಬನಶಂಕರಿ ಕಿರಾಣಿ ಅಂಗಡಿ ಮನೆಯಲ್ಲಿಯೇ ಇದ್ದು, ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಮನೆ ವಸ್ತುಗಳಿಗೆ ತಗುಲಿದೆ. ಮನೆಯಲ್ಲಿದ್ದ ತನ್ನ ಮೂರು ಮಕ್ಕಳನ್ನು ಹನುಮಪ್ಪ ಅಬ್ಬಿಗೇರಿ ರಕ್ಷಿಸಲು ಮುಂದಾಗಿದ್ದು, 8 ವರ್ಷದ ಮಗು ಶಂಕರರಾಜನನ್ನು ಹೊರಕ್ಕೆ ಎತ್ತಿಕೊಂಡು ಬಂದಿದ್ದಾರೆ. 11 ವರ್ಷದ ಮಗು ವಿನೋದ ರಾಜನನ್ನು ಸಹ ಹೊರ ತಂದಿದ್ದಾರೆ. ಈ ಬಾಲಕನಿಗೆ ಸುಟ್ಟು ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮತ್ತೊಂದು ಮಗು ಎಂಟು ವರ್ಷದ ಜಯರಾಜ ಎಲ್ಲಿದ್ದಾನೆ ಎನ್ನುವುದನ್ನು ಹುಡುಕುವ ವೇಳೆಗೆ ಮನೆ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಜಯರಾಜ ಬೆಂಕಿಯಲ್ಲಿ ಸುಟ್ಟು ಮೃತಪಟ್ಟಿದ್ದಾನೆ